ಮಾಜಿ ರಕ್ಷಣಾ ತಜ್ಞ ಎಸ್.ಆರ್.ಸಿನ್ಹೋ (ಸಂಗ್ರಹ ಚಿತ್ರ) 
ದೇಶ

ಇತಿಹಾಸ ತಿಳಿದು ಪಾಕಿಸ್ತಾನ ಮಾತನಾಡಲಿ: ಎಸ್.ಆರ್.ಸಿನ್ಹೋ

ಭಾರತ ಬಗ್ಗೆ ತೀಕ್ಷ್ಣ ಹೇಳಿಕೆ ನೀಡುತ್ತಿರುವ ಪಾಕಿಸ್ತಾನವು ಮೊದಲು ಇತಿಹಾಸವನ್ನು ಓದಿ ಮನನ ಮಾಡಿಕೊಂಡು ಹೇಳಿಕೆ ನೀಡಲಿ ಎಂದು ರಕ್ಷಣಾ ತಜ್ಞ ಎಸ್.ಆರ್.ಸಿನ್ಹೋ ಸೋಮವಾರ ಹೇಳಿದ್ದಾರೆ...

ಭೂಪಾಲ್: ಭಾರತ ಬಗ್ಗೆ ತೀಕ್ಷ್ಣ ಹೇಳಿಕೆ ನೀಡುತ್ತಿರುವ ಪಾಕಿಸ್ತಾನವು ಮೊದಲು ಇತಿಹಾಸವನ್ನು ಓದಿ ಮನನ ಮಾಡಿಕೊಂಡು ಹೇಳಿಕೆ ನೀಡಲಿ ಎಂದು ರಕ್ಷಣಾ ತಜ್ಞ ಎಸ್.ಆರ್.ಸಿನ್ಹೋ ಸೋಮವಾರ ಹೇಳಿದ್ದಾರೆ.

ಈ ಕುರಿತಂತೆ ಮಾತನಾಡಿರುವ ಅವರು, ಪಾಕಿಸ್ತಾನದ ರಕ್ಷಣಾ ಸಚಿವ ಮಾತು ಸಾಕಷ್ಟು ಆಶ್ಚರ್ಯ ಹಾಗೂ ಆಘಾತ ಉಂಟು ಮಾಡಿತು. ಈ ಹಿಂದೆ ಭಾರತ ವಿರುದ್ಧ ತಿರುಗಿ ಬಿದ್ದು ಸೋತು ಸುಣ್ಣವಾದರೂ ಭಾರತದ ವಿರುದ್ಧವೇ ಈ ರೀತಿ ಹೇಳಿಕೆ ನೀಡುತ್ತಿರುವ ಖಂಡನಾರ್ಹವಾಗಿದೆ ಎಂದು ಹೇಳಿದ್ದಾರೆ.

ಭಾರತದ ವಿರುದ್ಧ ಅವಹೇಳನಕಾರಿ ಹಾಗೂ ಪರಿಜ್ಞಾನವಿಲ್ಲದೆ ಹೇಳಿಕೆ ನೀಡುತ್ತಿರುವ ಖ್ವಾಜಾ ಮೊಹಮ್ಮದ್ ಆಸಿಫ್ ಅವರು ಮೊದಲು ಇತಿಹಾಸವನ್ನು ಮನನ ಮಾಡುವ ಅಗತ್ಯವಿದೆ. ಪಾಕಿಸ್ತಾನ ಈ ಹಿಂದೆ ಏನಾಗಿದೆ ಎಂಬುದರ ಇತಿಹಾಸವನ್ನು ನೋಡುತ್ತಿಲ್ಲ. ಭಾರತದೊಂದಿಗೆ ಮಾತನಾಡುವಾಗ ಹಾಗೂ ವ್ಯವಹರಿಸುವ ಪಾಕಿಸ್ತಾನ ಮೊದಲು ಇತಿಹಾಸವನ್ನು ಓದಿಕೊಳ್ಳುವ ಅಗತ್ಯವಿದೆ ಎಂದು ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಾಕಿಸ್ತಾನ ರಕ್ಷಣಾ ಸಚಿವ ಖ್ವಾಜಾ ಮೊಹಮ್ಮದ್ ಆಸಿಫ್ ಅವರು, ಪಾಕಿಸ್ತಾನದ ಯೋಧರು ತಾಯಿನಾಡು ಪಾಕಿಸ್ತಾನದ ಒಂದೊಂದು ಇಂಚಿನ ಭೂಮಿಯನ್ನು ಕಾಯುತ್ತಿದ್ದಾರೆ. ಒಂದು ವೇಳೆ ಭಾರತ ಯುದ್ಧ ಸಾರಿದ್ದೇ ಆದರೆ, ಭಾರತ ಸಾಕಷ್ಟು ನಷ್ಟವನ್ನು ಅನುಭವಿಸಬೇಕಾಗುತ್ತದೆ. ಯುದ್ಧ ಪ್ರತಿಯಾಗಿ ಪಾಕಿಸ್ತಾನ ಭಾರತಕ್ಕೆ ತಕ್ಕ ಪಾಠ ಕಲಿಸುತ್ತದೆ. ಭಯೋತ್ಪಾದನೆಗೆ ಬೆಂಬಲ ಕುರಿತಂತೆ ಭಾರತದ ನಿಜವಾದ ಮುಖ ಇದೀಗ ತೆರೆದುಕೊಂಡಿದೆ. ಗಡಿಯಲ್ಲಿ ಅಶಾಂತಿ ವಾತಾವರಣ ವಿಷಯ ಪ್ರಪಂಚದಾದ್ಯಂತ ಸುದ್ದಿಯಾಗುತ್ತಿದೆ ಎಂದು ಹೇಳಿದ್ದರು. ಪಾಕಿಸ್ತಾನ ರಕ್ಷಣಾ ಸಚಿವರ ಈ ಹೇಳಿಕೆ ಹಲವು ವಿವಾದಗಳನ್ನು ಸೃಷ್ಟಿ ಮಾಡಿದ್ದು, ಹಲವು ವಿರೋಧಗಳು ವ್ಯಕ್ತವಾಗುತ್ತಿವೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ರಾಜ್ಯದಲ್ಲಿ ಸಿಎಂ ಗದ್ದುಗೆ ಗುದ್ದಾಟ: ಎಲ್ಲ ಗೊಂದಲಗಳಿಗೆ ಹೈಕಮಾಂಡ್ ತೆರೆ ಎಳೆಯಬೇಕು- ಸಿಎಂ ಸಿದ್ದರಾಮಯ್ಯ

ಸ್ಮೃತಿ ಮಂಧಾನ ಮದುವೆ ಮುಂದೂಡಿಕೆಗೆ ಅಸಲಿ ಕಾರಣ? ಪರಸ್ತ್ರೀ ಮೋಹ, ನಂಬಿಕೆ ದ್ರೋಹ: ಬಯಲಾಯ್ತು ಪಲಾಶ್'ನ ಅಸಲಿ ರಂಗಿನಾಟ!

ಪಶ್ಚಿಮ ಬಂಗಾಳದಲ್ಲಿ ವಿವಾದಿತ SIR ಕುರಿತು ಮಾತುಕತೆಗೆ ಟಿಎಂಸಿಗೆ ಚುನಾವಣಾ ಆಯೋಗ ಆಹ್ವಾನ

ಇದು ಕೇವಲ ಧ್ವಜವಲ್ಲ ಭಾರತೀಯ ನಾಗರಿಕತೆಯ ಪುನರ್‌ ಜಾಗೃತಿಯ ಧ್ವಜ, ಶತಮಾನಗಳಷ್ಟು ಹಳೆಯ ಗಾಯ ಈಗ ವಾಸಿಯಾಗುತ್ತಿದೆ: ಪ್ರಧಾನಿ ಮೋದಿ

ಕೆಲಸದ ಹೊರೆ ಖಂಡಿಸಿ ಪಶ್ಚಿಮ ಬಂಗಾಳ CEO ಕಚೇರಿ ಮುಂದೆ BLOಗಳಿಂದ ಅಹೋರಾತ್ರಿ ಧರಣಿ!

SCROLL FOR NEXT