ಚೆನ್ನೈ ನಗರದ ರಸ್ತೆಯೊಂದು ನೀರಿನಿಂದ ತುಂಬಿರುವ ದೃಶ್ಯ. 
ದೇಶ

ಚೆನ್ನೈ ಪ್ರವಾಹ: ಹಾಲು ಲೀಟರ್ ಗೆ 100, ತರಕಾರಿ ಕೆ.ಜಿಗೆ 90 ರೂಪಾಯಿ

ಮಳೆಯ ತೀವ್ರತೆ ಚೆನ್ನೈ ನಗರದಲ್ಲಿ ಕೊಂಚ ಕಡಿಮೆಯಾಗಿದ್ದರೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಾಲು ಮತ್ತು ನೀರಿನ ಪೂರೈಕೆಗೆ...

ಚೆನ್ನೈ: ಮಳೆಯ ತೀವ್ರತೆ ಚೆನ್ನೈ ನಗರದಲ್ಲಿ ಕೊಂಚ ಕಡಿಮೆಯಾಗಿದ್ದರೂ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಹಾಲು ಮತ್ತು ನೀರಿನ ಪೂರೈಕೆಗೆ ವ್ಯತ್ಯಯವುಂಟಾಗಿದ್ದು, ಕೆಲವು ಕಡೆಗಳಲ್ಲಿ ಅತಿಯಾದ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.

ಮಳೆಯಿಂದಾಗಿ ಸತತ ಮೂರನೇ ದಿನವಾದ ಇಂದು ಕೂಡ ವಿದ್ಯುತ್, ಸಾರಿಗೆ ಮತ್ತು ದೂರವಾಣಿ ಸಂಪರ್ಕದಲ್ಲಿ ವ್ಯತ್ಯಯವುಂಟಾಗಿದೆ. ಚೆನ್ನೈ ನಗರದ ಹಲವು ಕಡೆಗಳಲ್ಲಿ ಹಾಲಿನ ಬೆಲೆ 100 ರೂಪಾಯಿ, ತರಕಾರಿ ಬೆಲೆ 80ರಿಂದ 90ಕ್ಕೆ ಏರಿದೆ. ಚೆನ್ನೈಯ ಕೋಯಂಬೆಡು ತರಕಾರಿ ಮಾರುಕಟ್ಟೆ ನಗರದ ನಿವಾಸಿಗಳಿಂದ ಜಲ ಪ್ರವಾಹದಿಂದಾಗಿ ಸಂಪರ್ಕ ಕಳೆದುಕೊಂಡಿದೆ. ಹಾಲು ಮಾರಾಟದ ಅಂಗಡಿಗಳ ಮುಂದೆ ಜನ ಸರದಿಯಲ್ಲಿ ನಿಂತಿಕೊಂಡಿರುವುದು ಸಾಮಾನ್ಯವಾಗಿದೆ. ಇದುವರೆಗೆ 30 ರೂಪಾಯಿಗೆ ಸಿಗುತ್ತಿದ್ದ 20 ಲೀಟರ್ ಬಾಟಲ್ ನೀರಿನ ಬೆಲೆ 150 ರೂಪಾಯಿಗೆ ಏರಿದೆ. ನಗರದ ಬಹುತೇಕ  ಸೂಪರ್ ಮಾರ್ಕೆಟ್ ಗಳು, ಹೊಟೇಲ್ ಗಳು ಮುಚ್ಚಿವೆ. ಇನ್ನು ಹಲವು ಕಡೆಗಳಲ್ಲಿ ಶೇಖರಣೆ ಮುಗಿದಿದೆ.

ಈಶಾನ್ಯ ಮುಂಗಾರು ಮತ್ತು ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಚೆನ್ನೈಯಲ್ಲಿ ಕುಂಭದ್ರೋಣ ಮಳೆಯಾಗುತ್ತಿದ್ದು, ತಮಿಳುನಾಡಿನ ಹಲವು ಜಿಲ್ಲೆಗಳು ನೀರಿನಲ್ಲಿ ಮುಳುಗಡೆಯಾಗಿವೆ. ಅದರಲ್ಲೂ ಚೆನ್ನೈ ಮತ್ತು ಅದರ ಉಪನಗರಗಳು ಪ್ರವಾಹಕ್ಕೆ ಸಿಲುಕಿದ್ದು, ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕ್ರಿಕೆಟ್ ಅಭಿಮಾನಿಗಳಿಗೆ ಡಿಕೆಶಿ ಗುಡ್ ನ್ಯೂಸ್; ಮತ್ತೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಮ್ಯಾಚ್

ಮೈಸೂರು: ಸೆರೆ ಸಿಕ್ಕಿದ್ದ 4 ಹುಲಿ ಮರಿಗಳ ನಿಗೂಢ ಸಾವು!

ಮದುವೆಯಾಗಿ ಮೂರೇ ದಿನಕ್ಕೆ ವಿಚ್ಛೇದನ ಕೇಳಿದ ವಧು; ಮೊದಲ ರಾತ್ರಿಯೇ ಆಘಾತಕಾರಿ ವಿಷಯ ಬಹಿರಂಗ!

MUDA: 300 ಎಕರೆ ಜಮೀನಿನಲ್ಲಿ ಹೊಸದಾಗಿ ಲೇಔಟ್‌ ಅಭಿವೃದ್ಧಿ; ಸಚಿವ ಬೈರತಿ ಸುರೇಶ್‌

'ಅಧಿಕಾರ ಹಂಚಿಕೆ ಬಗ್ಗೆ ಯಾರೂ ಮಾತನಾಡಬೇಡಿ, ಸಾರ್ವಜನಿಕ ಹೇಳಿಕೆ ಕೊಡಬೇಡಿ': ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಬುದ್ದಿಮಾತು

SCROLL FOR NEXT