ಸಾಂದರ್ಭಿಕ ಚಿತ್ರ 
ದೇಶ

ನಿರ್ಭಯಾ ಬಾಲಾಪರಾಧಿ ಮೇಲೆ ಎನ್‍ಜಿಒ ನಿಗಾ?

ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿ ತನ್ನ ಶಿಕ್ಷೆ ಪೂರೈಸಿ ಶೀಘ್ರದಲ್ಲೇ...

ನವದೆಹಲಿ: ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣದ ಬಾಲಾಪರಾಧಿ ತನ್ನ ಶಿಕ್ಷೆ ಪೂರೈಸಿ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದಾನೆ. 
ಆದರೆ ಆತನನ್ನು ಕಣ್ಗಾವಲಿಗೆ ಒಳಪಡಿಸಲಾಗುತ್ತದೆ. 21 ವರ್ಷದ ಈ ಯುವಕನ ಮೇಲೆ ಎನ್‍ಜಿಒ ಒಂದು ನಿಗಾ ಇಡಲಿದೆ ಎಂದು ಹೇಳಲಾಗಿದೆ. ಅತ್ಯಾಚಾರ ಪ್ರಕರಣದಲ್ಲಿ ಭಾಗಿಯಾದ ಒಟ್ಟು 6 ಜನರ ಪೈಕಿ ಈತನೇ ಕಿರಿಯನಾಗಿದ್ದ. 
23 ವರ್ಷದ ಪ್ಯಾರಾಮೆಡಿಕಲ್  ವಿದ್ಯಾರ್ಥಿನಿ ಮೇಲೆ ಈ ತಂಡ ದೆಹಲಿಯ ಬಸ್ಸೊಂದರಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿ, ಭೀಕರವಾಗಿ ಹಿಂಸಿಸಿತ್ತು. ಯುವಕನ ಬಿಡುಗಡೆ ಬಗ್ಗೆ `ಟೈಮ್ಸ್ ನೌ' ಸುದ್ದಿವಾಹಿನಿ ವರದಿ ಮಾಡಿದೆ. ಹಿಂದೆ ಕೇಂದ್ರ ಸಚಿವೆ ಮನೇಕಾ ಗಾಂಧಿ ಅವರು ಅಪರಾಧಿಯ ಬಿಡುಗಡೆ ಕುರಿತು ಆತಂಕ ವ್ಯಕ್ತಪಡಿಸಿದ್ದರು. 
ಆತ ಹೊರಬಂದ ಮೇಲೂ ಆತನ ಮೇಲೊಂದು ಕಣ್ಣಿಡಬೇಕು ಎಂದು ಅಬಿsಪ್ರಾಯಪಟ್ಟಿದ್ದರು. ಇದೇ ವೇಳೆ ಅತ್ಯಾಚಾರ ದುರ್ದೈವಿಯ ಪೋಷಕರೂ ಕಾನೂನು ವ್ಯವಸ್ಥೆಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿ, ಅಪರಾಧಿ ಸುಧಾರಣೆ ಗೊಂಡಿದ್ದಾನೋ ಇಲ್ಲವೋ ತಿಳಿಯದೇ ಬಾಲಾಪರಾಧಿ ಎಂಬ ಕಾರಣದಿಂದ ಮೂರೇ ವರ್ಷದಲ್ಲಿ ಹೊರಬಿಡುವ ಬಗ್ಗೆ ಅಚ್ಚರಿ ತೋರಿದ್ದರು. 
ಮಿಕ್ಕ 5 ಮಂದಿಯಲ್ಲಿ ಒಬ್ಬ ಜೈಲಿನಲ್ಲೇ ಮೃತಪಟ್ಟಿದ್ದಾನೆ. ನಾಲ್ವರು ಮರಣದಂಡನೆಯ ಭೀತಿಯಲ್ಲಿದ್ದಾರೆ. ಅತ್ಯಾಚಾರಕ್ಕೊಳಗಾದ ನಿರ್ಭಯಾ 13 ದಿನ ಕಾಲ ಸಿಂಗಾಪುರ್‍ನ ಆಸ್ಪತ್ರೆಯೊಂದರಲ್ಲಿ ಸಾವು ಬದುಕಿನ ನಡುವೆ ಹೋರಾಡಿ, ಮರಣಹೊಂದಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಉಕ್ರೇನ್ ವಿರುದ್ಧ ರಷ್ಯಾದ ದೀರ್ಘಕಾಲ ಸಂಘರ್ಷಕ್ಕೆ ಭಾರತವೇ ಕಾರಣ, ಇದು 'ಮೋದಿ ಯುದ್ಧ': White House ವ್ಯಾಪಾರ ಸಲಹೆಗಾರ ಪೀಟರ್ ನವರೊ

ಅಮೆರಿಕದ ಸುಂಕ: ಜವಳಿ ವಲಯದ ಒತ್ತಡ ಕಡಿಮೆ ಮಾಡಲು 40 ಪ್ರಮುಖ ಆಮದು ದೇಶ ಗುರುತು

ಭೀಕರ ಮಳೆಗೆ ಜಮ್ಮು-ಕಾಶ್ಮೀರ ತತ್ತರ: ಸಾವಿನ ಸಂಖ್ಯೆ 41ಕ್ಕೆ ಏರಿಕೆ; ಕೇಂದ್ರದಿಂದ ನೆರವಿನ ಭರವಸೆ; ಮುಂದುವರೆದ ರಕ್ಷಣಾ ಕಾರ್ಯಾಚರಣೆ

ಭಾರತದ ಮೇಲೆ ಅಮೆರಿಕಾ ಸುಂಕಾಸ್ತ್ರ: ದೇಶ ರಕ್ಷಿಸುವಲ್ಲಿ ಪ್ರಧಾನಿ ಮೋದಿ ವಿಫಲ; AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ಗುಂಡಿನ ಚಕಮಕಿ: ಇಬ್ಬರು ಉಗ್ರರ ಹತ್ಯೆ

SCROLL FOR NEXT