ಸಂಸತ್ 
ದೇಶ

ಎನ್‍ಜೆಎಸಿ ಕುರಿತ ತೀರ್ಪು ಹೊಸ ಮಸೂದೆಗೆ ಆಗ್ರಹ

ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ(ಎನ್‍ಜೆಎಸಿ) ಕಾಯ್ದೆಯನ್ನು ವಜಾ ಮಾಡಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಲೋಕ ಸಭೆ ಸದಸ್ಯರು ಪಕ್ಷಭೇದ...

ನವದೆಹಲಿ: ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ(ಎನ್‍ಜೆಎಸಿ) ಕಾಯ್ದೆಯನ್ನು ವಜಾ ಮಾಡಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ವಿರುದ್ಧ ಲೋಕ ಸಭೆ ಸದಸ್ಯರು ಪಕ್ಷಭೇದ ಮರೆತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 
ಅಷ್ಟೇ ಅಲ್ಲ, ಸಂಸತ್‍ನ ವ್ಯಾಪ್ತಿಯನ್ನು ಅತಿಕ್ರಮಿಸಿದ ನ್ಯಾಯಾಂಗಕ್ಕೆ 'ಕಠಿಣ ಸಂದೇಶ' ರವಾನಿಸಬೇಕು ಎಂದೂ ಒತ್ತಾಯಿಸಿದ್ದಾರೆ. ಸೋಮವಾರ ಲೋಕಸಭೆಯಲ್ಲಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ(ವೇತನ ಮತ್ತು ಸ್ಥಿತಿಗತಿ) ಸೇವಾ ತಿದ್ದುಪಡಿ ವಿಧೇಯಕ 2015ರ ಬಗೆಗಿನ ಚರ್ಚೆಯ ವೇಳೆ ಸದಸ್ಯರು ಎನ್‍ಜೆಎಸಿ ಕುರಿತು ಚರ್ಚೆ ಶುರುವಿಟ್ಟು ಕೊಂಡರು. ಎನ್‍ಜೆಎಸಿ ಕಾನೂನನ್ನು ಜಾರಿ ಮಾಡಲು ಸರ್ಕಾರ ಹೊಸ ವಿಧೇಯಕ ರೂಪಿಸಲಿ ಎಂದು ಎಐಎಡಿ ಎಂಕೆ ಸದಸ್ಯ ಕೆ ಕಾಮರಾಜ್, ಟಿಡಿಪಿ ಯ ರವೀಂದ್ರ ಬಾಬು, ಬಿಜೆಪಿಯ ಪಿ ಬಿ ಚೌಧರಿ ಆಗ್ರಹಿಸಿದರು.
'ಎನ್‍ಜೆಎಸಿಗೆ ಹೊಸ ವಿಧೇಯಕ ತನ್ನಿ. ನ್ಯಾಯಾಧೀಶರ ನೇಮಕಕ್ಕೆ ಸೂಕ್ತ ವ್ಯವಸ್ಥೆ ನಮ್ಮಲ್ಲಿಲ್ಲ'' ಎಂದು ಕಾಮರಾಜ್ ನುಡಿದರು. ಇದೇ ವೇಳೆ ಮಾತನಾಡಿದ ಬಿಜೆಡಿ ಸದಸ್ಯ ತಥಾಗತಾ ಸತ್ಪತಿ, 'ಎನ್‍ಜೆಎಸಿ ರದ್ದು ಮಾಡುವ ಮೂಲಕ ನ್ಯಾಯಾಲಯ ನಮ್ಮನ್ನು ಆರಿಸಿ ಕಳುಹಿಸಿದ ಜನರಿಗೆ ಕಪಾಳಮೋಕ್ಷ ಮಾಡಿದೆ'' ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

SCROLL FOR NEXT