ದೇಶ

ಪಾನ್ಸರೆ ಹತ್ಯೆ: ಗಾಯಕ್‍ವಾಡ್ ವಿರುದ್ಧ ಆರೋಪಪಟ್ಟಿ ಸಲ್ಲಿಕೆ

Mainashree
ಕೊಲ್ಹಾಪುರ: ವಿಚಾರವಾದಿ ಗೋವಿಂದ ಪಾನ್ಸರೆ ಹತ್ಯೆಗೆ ಸಂಬಂಧಿಸಿ ಸನಾತನ ಸಂಸ್ಥೆ ಕಾರ್ಯಕರ್ತ ಸಮೀರ್ ಗಾಯಕ್‍ವಾಡ್ ವಿರುದ್ಧ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ.
ಸೆ.16ರಂದು ಬಂಧಿತನಾದ ಗಾಯಕ್‍ವಾಡ್‍ಗೆ ಸ್ಥಳೀಯ ನ್ಯಾಯಾಲಯ ಡಿ.18ರವರೆಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಸೋಮವಾರ ಪೊಲೀಸರು 392 ಪುಟಗಳ ಚಾಜ್ರ್ ಶೀಟ್ ಸಲ್ಲಿಸಿದ್ದಾರೆ. 
ಇದೇ ವೇಳೆ, ಪಾನ್ಸರೆ ಸೊಸೆ ಮೇಧಾ ಪಾನ್ಸರೆ ಹಾಗೂ ಎಡಪಂಥೀಯ ನಾಯಕ ಎನ್ ಡಿ ಪಾಟೀಲ್ ಕೊಲ್ಹಾಪುರ ಹೊಸ ಡಿಎಸ್‍ಪಿ ಪ್ರದೀಪ್ ದೇಶಪಾಂಡೆ ಅವರನ್ನು ಭೇಟಿಯಾಗಿ ಪ್ರಕರಣದ ಬಗ್ಗೆ ಮಾತುಕತೆ ನಡೆಸಿದ್ದಾರೆ. 
ಕರ್ನಾಟಕದ ಸಂಶೋಧಕ ಎಂ ಎಂ ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿಯೂ ಪೊಲೀಸರು ಗಾಯಕವಾಡ್‍ನನ್ನು ವಿಚಾರಣೆ ನಡೆಸಿದ್ದರು.
SCROLL FOR NEXT