ದೇಶ

ದೆಹಲಿ ಸಿಎಂ ಬೆಂಬಲಕ್ಕೆ ನಿಂತ ಮಾಜಿ ಕ್ರಿಕೆಟಿಗ

Mainashree
ನವದೆಹಲಿ: ಮಾಜಿ ಕ್ರಿಕೆಟಿಗ ಬಿಷನ್ ಸಿಂಗ್ ಬೇಡಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅನರ ಬೆಂಬಲಕ್ಕೆ ನಿಂತಿದ್ದಾರೆ.
ಡಿಡಿಸಿಎನಲ್ಲಿ ಎಲ್ಲವೂ ಸರಿಯಾಗಿದೆ ಎನ್ನುವುದಾದರೆ, ನ್ಯಾಯಾಲಯವು ಭಾರತ-ದಕ್ಷಿಣ ಆಫ್ರಿಕಾದ ನಾಲ್ಕನೇ ಟೆಸ್ಟ್ ಅನ್ನು ನ್ಯಾಯಮೂರ್ತಿ ಮುದ್ಗಲ್  ಮೇಲ್ವಿಚಾರಣೆಯಲ್ಲಿ ನಡೆಸಲು ಯಾಕೆ ಆದೇಶ ನೀಡುತ್ತಿತ್ತು? ಯಾರಾದರೂ ವಿವರಿಸುತ್ತಿರಾ ಎಂದು ಟ್ವೀಟ್ ಮಾಡಿದ್ದಾರೆ.
ಡಿಡಿಸಿಎನಲ್ಲಿ ಭ್ರಷ್ಟಾಚಾರವಿಲ್ಲದೇ ಎಲ್ಲವೂ ಸರಿಯಾಗಿದ್ದರೆ ಬಿಸಿಸಿಐ ಯಾಕೆ ಹಣ ಪಾವತಿಯನ್ನು ಸ್ಥಗಿತಗೊಳಿಸುತ್ತಿತ್ತು ಎಂದೂ ಬೇಡಿ ಪ್ರಶ್ನಿಸಿದ್ದಾರೆ.
SCROLL FOR NEXT