ದೇಶ

ಹರಾಜು ಮೂಲಕ ಖರೀದಿಸಿದ ದಾವೂದ್‌ನ ಕಾರಿಗೆ ಸಾರ್ವಜನಿಕವಾಗಿ ಅಗ್ನಿಸ್ಪರ್ಶ

Rashmi Kasaragodu
ಮುಂಬೈ: ಭೂಗತ ಲೋಕದ ದೊರೆ ದಾವೂದ್ ಇಬ್ರಾಹಿಂ ಅವರ ಕಾರನ್ನು ಹರಾಜು ಮೂಲಕ ಖರೀದಿಸಿದ್ದ ಹಿಂದೂ ಮಹಾಸಭಾ ಆ ಕಾರನ್ನು ಬುಧವಾರ ಮಧ್ಯಾಹ್ನ 1 ಗಂಟೆಗೆ ಸುಡಲಿದೆ .ಗಾಜಿಯಾಬಾದ್‌ನ ಇಂದರಾಪುರದಲ್ಲಿ ಸಾರ್ವಜನಿಕವಾಗಿ ಕಾರನ್ನು ಸುಡಲು ತೀರ್ಮಾನಿಸಿರುವುದಾಗಿ ಸ್ವಾಮಿ ಚಕ್ರಪಾಣಿ ತಿಳಿಸಿದ್ದಾರೆ.
ದಾವೂದ್ ಇಬ್ರಾಹಿಂ ಮತ್ತು ಆತನ ಸಹಚರರು ದೇಶದಲ್ಲಿ ನಡೆಸಿದ ಭಯೋತ್ಪಾದನಾ ಕೃತ್ಯಗಳಿಗೆ ಅಂತ್ಯಕರ್ಮ ಮಾಡುವ ಸಂಕೇತವಾಗಿ ಈ ಕಾರನ್ನು ಸುಡಲಾಗುತ್ತಿದೆ. ಈ ಹಿಂದೆ ಆ ಕಾರನ್ನು ಆ್ಯಂಬುಲೆನ್ಸ್ ಮಾಡುವ ಬಗ್ಗೆ ಯೋಚಿಸಲಾಗಿತ್ತು. ಆದಾಗ್ಯೂ, ಈ ಕಾರು ಖರೀದಿಸಿದರೆ ಅದರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಡಿ ಕಂಪನಿ ಬೆದರಿಕೆಯನಿನು ಒಡ್ಡಿತ್ತು. ಇದೀಗ ಅವರಿಗೆ ತಕ್ಕ ಉತ್ತರ ನೀಡುವುದಕ್ಕಾಗಿಯೇ ಕಾರನ್ನು ಭಸ್ಮಗೊಳಿಸಲಾಗುತ್ತದೆ ಎಂದು ಚಕ್ರಪಾಣಿ ಹೇಳಿದ್ದಾರೆ.
ರು. 15,700 ಮೂಲ ಬೆಲೆಯಿದ್ದ ಕಾರನ್ನು ರು. 3.2 ಲಕ್ಷ ಬೆಲೆ ತೆತ್ತು ಹಿಂದೂ ಮಹಾಸಭಾ ಖರೀದಿಸಿತ್ತು.
SCROLL FOR NEXT