ದೇಶ

ಓಮ್ನಿ ಕಾರಿಗೆ ಲಾರಿ ಡಿಕ್ಕಿ: ಕರ್ನಾಟಕದ ನಾಲ್ವರು ಸಾವು

Vishwanath S

ಮುದಿಗುಪ್ಪ(ಅನಂತಪುರ): ತಿರುಪತಿಯ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದು ವಾಪಸ್ಸಾಗುತ್ತಿದ್ದ ವೇಳೆ ಓಮ್ನಿ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.

ಕೆಎ 37, ಎಂ 3215 ಸಂಖ್ಯೆಯ ಓಮ್ನಿ ಕಾರಿನಲ್ಲಿ ಏಳು ಮಂದಿ ತಿರುಪತಿಗೆ ತೆರಳಿ ವಾಪಸ್ಸಾಗುತ್ತಿದ್ದು ಆಂಧ್ರದ ಅನಂತಪುರ ಜಿಲ್ಲೆಯ ಮುದಿಗುಪ್ಪ ತಾಲೂಕಿನ ಸಂಖೆಪಲ್ಲಿ ಕ್ರಾಸ್ ಬಳಿ ಈ ದುರ್ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕಾರಿನಲ್ಲಿದ್ದವರ ಪೈಕಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೃತರನ್ನು ಕೊಪ್ಪಳ ಮೂಲದ ಗಂಗಾವತಿ ಮೂಲದ ಶ್ರೀನಿವಾಸ್ ರೆಡ್ಡಿ, ಭೀಮಸೇನ ಅಳವಂಡಿಕರ, ವಿಶ್ವ, ಭೀಮನಗೌಡ ಎಂದು ಗುರುತಿಸಲಾಗಿದೆ.

SCROLL FOR NEXT