ಸಾಹಿತಿ ಮಂಗೇಶ್ ಪಡ್ನಾಂವ್ಕರ್ (ಸಂಗ್ರಹ ಚಿತ್ರ) 
ದೇಶ

ಖ್ಯಾತ ಮರಾಠಿ ಲೇಖಕ ಮಂಗೇಶ್ ಪಡ್ನಾಂವ್ಕರ್ ನಿಧನ

ಖ್ಯಾತ ಮಾರಾಠಿ ಲೇಖಕ, ಪದ್ಮ ಭೂಷಣ ಪುರಸ್ಕೃತ ಮಂಗೇಶ್ ಕೇಶವ್ ಪಂಡ್ನಾಂವ್ಕರ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು...

ಮುಂಬೈ: ಖ್ಯಾತ ಮಾರಾಠಿ ಲೇಖಕ, ಪದ್ಮ ಭೂಷಣ ಪುರಸ್ಕೃತ ಮಂಗೇಶ್ ಕೇಶವ್ ಪಂಡ್ನಾಂವ್ಕರ್ ಅವರು ಬುಧವಾರ ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು.

ದೀರ್ಘಕಾಲಿಕ ಅನಾರೋಗ್ಯದಿಂದ ಬಳಲುತ್ತಿದ್ದ ಮಂಗೇಶ್ ಪಡ್ನಾಂವ್ಕರ್ ಅವರು ಇಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಮಂಗೇಶ್ ಪಡ್ನಾಂವ್ಕರ್ ಅವರು 1929 ಮಾರ್ಚ್ 10ರಂದು  ಮಹಾರಾಷ್ಟ್ರದ ಸಿಂದೂದುರ್ಗ ಜಿಲ್ಲೆಯ ವೆಂಗುರ್ಲಾದಲ್ಲಿ ಜನಿಸಿದ್ದರು. ಕಾಲೇಜು ದಿನಗಳಿಂದಲೇ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತಿ ಹೊಂದಿದ್ದ ಮಂಗೇಶ್ ಅವರು, ಬಾಂಬೇ ವಿಶ್ವವಿದ್ಯಾಲಯದಿಂದ  ಮರಾಠಿ ಮತ್ತು ಸಂಸ್ಕೃತ ವಿಷಯದಲ್ಲಿ ಮಾಸ್ಟರ್ ಆಫ್ ಡಿಗ್ರಿ ಪದವಿ ಪಡೆದಿದ್ದರು.

2012ರಲ್ಲಿ ಪಡ್ನಾಂವ್ಕರ್ ಅವರಿಗೆ ಪುಣೆ ವಿಶ್ವವಿದ್ಯಾಲಯ ಜೀವನ್ ಸಾಧನಾ ಪುರಸ್ಕಾರ ನೀಡಿ ಗೌರವಿಸಿತ್ತು. ಶೋಧ್ ಕವಿತೇಚಾ ದಂತಹ ಹಲವು ಕೃತಿಗಳನ್ನು ರಚಿಸಿದ್ದಾರೆ. ಮಂಗೇಶ್  ಪಡ್ನಾಂವ್ಕರ್ ಅವರ ನಿಧನಕ್ಕೆ ಬಾಲಿವುಡ್ ನ ಗಣ್ಯರು ಸೇರಿದಂತೆ ಸಾಹಿತ್ಯ ವಲಯದ ಪ್ರಮುಖರು ಕಂಬನಿ ಮಿಡಿದಿದ್ದಾರೆ.

ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಪಡ್ನಾಂವ್ಕರ್ ನಿಧನಕ್ಕೆ ಕಂಬನಿ ಮಿಡಿದಿದ್ದು, ಅವರ ಸಾಹಿತ್ಯ ಮತ್ತು ಕೃತಿಗಳು ಹಲವರ ಮೇಲೆ ಪ್ರಭಾವ ಬೀರಿತ್ತು. ಅವರ ನಿಧನದಿಂದ  ಸಾಹಿತ್ಯ ಲೋಕದ ಒಂದು ಮುತ್ತು ಕಳಚಿದೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟದ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT