ದೇಶ

ಪರಾರಿಯಾಗಲು ಯತ್ನಿಸಿ ವಿಫಲವಾದ 6 ಖೈದಿಗಳು ಆತ್ಮಹತ್ಯೆ

ಜೈಲಿನಿಂದ ಪರಾರಿಯಾಗಲು ಯತ್ನಿಸಿ ವಿಫಲವಾದ 6 ಖೈದಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ...

ತೈಪೈ(ತೈವಾನ್): ಜೈಲಿನಿಂದ ಪರಾರಿಯಾಗಲು ಯತ್ನಿಸಿ ವಿಫಲವಾದ 6 ಖೈದಿಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾವೋಹ್ಲುಂಗ್‌ನಲ್ಲಿ ಗುರುವಾರ ನಡೆದಿದೆ.

ತಾವು ಮಾಡಿದ ತಪ್ಪಿಗೆ ಜೀವಮಾನ ಸೆರೆವಾಸ ಶಿಕ್ಷೆ ನೀಡಿರುವುದು ಅಪ್ರಮಾಣಿಕವಾದುದು ಎಂದು ಆರೋಪ ವ್ಯಕ್ತಪಡಿಸಿದ್ದ 6 ಖೈದಿಗಳು ಬುಧವಾರ ನಿನ್ನೆ ಜೈಲಿನಲ್ಲಿದ್ದ ಸುಮಾರು 5 ಮಂದಿ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿರಿಸಿಕೊಂಡು ತಮ್ಮನ್ನು ಬಿಡುಗಡೆ ಮಾಡುವಂತೆ ಅಲ್ಲಿನ ಸರ್ಕಾರವನ್ನು ಒತ್ತಾಯಿಸಿದ್ದರು. ಆದರೆ ಇದಕ್ಕೆ ಒಪ್ಪದ ಸರ್ಕಾರ ಅವರಿಗೆ ಮನವರಿಕೆ ಮಾಡಲು ಯತ್ನಿಸಿತ್ತು ಇದಕ್ಕೆ ಒಪ್ಪದ ಖೈದಿಗಳು ಒಪ್ಪಿಗೆ ನೀಡಿರಲಿಲ್ಲ.

ನಂತರ ಕಾರ್ಯಾಚರಣೆಗೆ ಮುಂದಾದ ಸರ್ಕಾರ ತಮ್ಮ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿ ಖೈದಿಗಳ ಬಳಿ ಇದ್ದ ಶಸ್ತ್ರಾಸ್ತಗಳನ್ನು ವಶಪಡಿಸಿಕೊಂಡು ಒತ್ತೆಯಾಳಾಗಿದ್ದ ಸಿಬ್ಬಂದಿಗಳನ್ನು ಬಿಡುಗಡೆಗೊಳಿಸಿ, ಖೈದಿಗಳನ್ನು ಸೆರೆಮನೆಯಲ್ಲಿರಿಸಲಾಗಿತ್ತು. ತಮ್ಮ ಒತ್ತಾಸೆ ಈಡೇರದ ಕಾರಣ ನೊಂದ ಖೈದಿಗಳು ತಾವು ಅವತಿಟ್ಟಿದ್ದ ಒಂದು ಪಿಸ್ತೂಲಿಂದ ಒಬ್ಬರಿಗೊಬ್ಬರು ಗುಂಡು ಹೊಡೆದುಕೊಂಡು ಇಂದು ಮುಂಜಾನೆ ಆತ್ಮಹತ್ಯೆ ಕೈಗೊಂಡಿದ್ದಾರೆ.

ಸಿಬ್ಬಂದಿಗಳನ್ನು ಒತ್ತೆಗಳನ್ನಾಗಿರಿಸಿಕೊಂಡಿದ್ದ ಸಂದರ್ಭದಲ್ಲಿ ಪತ್ರಿಕೆಯೊಂದರ ಜೊತೆ ಮೊಬೈಲ್ ಮೂಲಕ ಮಾತನಾಡಿದ್ದ ಅಲ್ಲಿನ ಖೈದಿಗಳು, ಈ ಕುರಿತಂತೆ ನಾವು ಹಲವು ದಿನಗಳಿಂದ ಯೋಜನೆ ರೂಪಿಸುತ್ತಿದ್ದೆವು. ನಾವು ತಪ್ಪು ಮಾಡಿದ್ದೇವೆ ಆದರೆ ಜೀವಮಾನ ಸೆರೆಮನೆ ವಾಸದ ಶಿಕ್ಷೆ ಅಪ್ರಾಮಾಣಿಕವಾದದ್ದು ಎಂದು ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT