ಕಲ್ಲಿದ್ದಲು 
ದೇಶ

ರಿಲಯನ್ಸ್‌ಗೆ ಕೋಲ್ ಗಣಿ

ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ನಡೆದ ಕಲ್ಲಿದ್ದಲು ಗಣಿಗಳ ಇ-ಹರಾಜಿನಲ್ಲಿ ಉದ್ಯಮಿ ಅನಿಲ್ ಅಂಬಾನಿ...

ನವದೆಹಲಿ: ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಇದೇ ಮೊದಲ ಬಾರಿಗೆ ನಡೆದ ಕಲ್ಲಿದ್ದಲು ಗಣಿಗಳ ಇ-ಹರಾಜಿನಲ್ಲಿ ಉದ್ಯಮಿ ಅನಿಲ್ ಅಂಬಾನಿ ಮಾಲೀಕತ್ವದ ರಿಲಯನ್ಸ್ ಸಿಮೆಂಟ್ ಮೊದಲ ಗಣಿ ಖರೀದಿಸಿದೆ. ಒಸಿಎಲ್ ಐರನ್ ಮತ್ತು ಸ್ಟೀಲ್ ಹಾಗೂ ಹಿಂದುಸ್ಥಾನ್ ಝಿಂಕ್ ಲಿ.ನ ಸ್ಫರ್ಧೆಯನ್ನು ಹಿಂದಿಕ್ಕಿ ಮಧ್ಯಪ್ರದೇಶದ ಸಿಯಾಲ್ ಘೋಗ್ರಿಯ ಗಣಿಯನ್ನು ರಿಲಯನ್ಸ್ ಖರೀದಿ ಮಾಡಿದೆ.

ರು.798 ಕೋಟಿಗೆ ಈ ಖರೀದಿ ಪ್ರಕ್ರಿಯೆ ನಡೆದಿದೆ.  ಈ ಗಣಿ ಒಟ್ಟು 29.38 ದಶಲಕ್ಷ ಟನ್ ಕಲ್ಲಿದ್ದಲು ನಿಕ್ಷೇಪ ಹೊಂದಿದೆ. ಇದರಲ್ಲಿ 5.69 ದಶಲಕ್ಷ ಟನ್ ಕಲ್ಲಿದ್ದನ್ನಷ್ಟೇ ಹೊರತೆಗೆಯಬಹುದು. ಕಂಪನಿಯು ಪ್ರತಿ ಕಲ್ಲಿದ್ದಲಿಗಾಗಿ ರು.1,402 ಟನ್ ಪಾವತಿ ಮಾಡಲು ಒಪ್ಪಿದೆ. ಘೋಗ್ರಿಯಾ ಗಣಿಯನ್ನು ಮೊದಲು ಪ್ರಿಸಂ ಸಿಮೆಂಟ್‌ಗೆ ನೀಡಲಾಗಿತ್ತು. ವಿದ್ಯುತ್ತೇತ್ತರ ಉದ್ದೇಶಕ್ಕಾಗಿ ಈ ಗಣಿಯನ್ನು ಮೀಸಲಿಡಲಾಗಿತ್ತು.

ಈ ಮಧ್ಯೆ, ಒಡಿಶಾದ ತಲಬಿರಾ-1ಕಲ್ಲಿದ್ದಲು ಬ್ಲಾಕ್‌ನ ಹರಾಜು ಪ್ರಕ್ರಿಯೆ ಮುಂದುವರೆದಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

2030 Commonwealth Games: ಭಾರತದ ಬಿಡ್‌ಗೆ ಕ್ಯಾಬಿನೆಟ್ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

Theaterisation: 'ಥಿಯೇಟರ್ ಕಮಾಂಡ್‌' ರಚನೆ: ಪ್ರಯತ್ನದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆಯೇ? ಆಡ್ಮಿರಲ್ ಡಿಕೆ ತ್ರಿಪಾಠಿ ಹೇಳಿದ್ದು ಹೀಗೆ...

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

'ಪಾಕಿಸ್ತಾನದೊಂದಿಗೆ ಯುದ್ಧ ನಿಲ್ಲಿಸಲು ಟ್ರಂಪ್ 24 ಗಂಟೆ ಕಾಲಾವಕಾಶ ನೀಡಿದ್ದರು, ಮೋದಿ ಕೇವಲ 5 ಗಂಟೆಗಳಲ್ಲಿ ಪಾಲಿಸಿದರು': ರಾಹುಲ್ ಗಾಂಧಿ

'ಧಮ್ ಇದ್ರೆ.. ಸನಾತನಧರ್ಮ, ಬಿಹಾರಿಗಳ ಕುರಿತ ಹೇಳಿಕೆ ಮತ್ತೆ ಹೇಳ್ತೀರಾ?': MK Stalin ಗೆ ಬಿಜೆಪಿ-ಜೆಡಿಯು ಸವಾಲು!

SCROLL FOR NEXT