ಭಾರತದತ್ತ ಧಾವಿಸುತ್ತಿದ್ದ ಶಂಕಿತ ಉಗ್ರರ ಬೋಟ್ ಸ್ಫೋಟಗೊಂಡಿರುವುದು (ಸಂಗ್ರಹ ಚಿತ್ರ) 
ದೇಶ

ಪಾಕ್‌ ದೋಣಿ ಸ್ಫೋಟಿಸಲು ಸೂಚಿಸಿಲ್ಲ: ಡಿಐಜಿ ಬಿ.ಕೆ ಲೋಶಾಲಿ

ಪಾಕಿಸ್ತಾನದ ಮೀನುಗಾರಿಕಾ ದೋಣಿಯನ್ನು ಸ್ಫೋಟಿಸಲು ತಾವು ಆದೇಶ ನೀಡಿಲ್ಲ ಎಂದು ಕರಾವಳಿ ಕಾವಲು ಪಡೆಯ...

ನವದೆಹಲಿ: ಪಾಕಿಸ್ತಾನದ ಮೀನುಗಾರಿಕಾ ದೋಣಿಯನ್ನು ಸ್ಫೋಟಿಸಲು ತಾವು ಆದೇಶ ನೀಡಿಲ್ಲ ಎಂದು ಕರಾವಳಿ ಕಾವಲು ಪಡೆಯ ಡಿಐಜಿ ಬಿ.ಕೆ ಲೋಶಾಲಿ ಸ್ಪಷ್ಟನೆ ನೀಡಿದ್ದಾರೆ.

ಪಾಕ್‌ ಮೀನುಗಾರಿಕಾ ದೋಣಿಯನ್ನು ಸ್ಫೋಟಿಸಲು ಕರಾವಳಿ ಕಾವಲು ಪಡೆಯ ಡಿಐಜಿ ಬಿ.ಕೆ ಲೋಶಾಲಿ ಆದೇಶ ನೀಡಿದ್ದಾಗಿ ಬುಧವಾರ ಆಂಗ್ಲ ಪತ್ರಿಕೆಯೊಂದರಲ್ಲಿ ವರದಿ ಮಾಡಲಾಗಿತ್ತು.

ಈ  ವರದಿಯನ್ನು ಅಲ್ಲಗೆಳೆದಿರುವ ಕರಾವಳಿ ಕಾವಲು ಪಡೆಯ ಡಿಐಜಿ ಬಿ.ಕೆ ಲೋಶಾಲಿ ಅವರು, ಇದು ಆಧಾರ ರಹಿತ ವರದಿಯಾಗಿದ್ದು, ಈ ಕುರಿತು ಸ್ಪಷ್ಟನೆ ನೀಡಿ ಪತ್ರಿಕಾ ಪ್ರಕಟಣೆಯನ್ನೂ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.

‘ದೋಣಿಯನ್ನು ಸ್ಫೋಟಿಸಿಬಿಡಿ, ಉಗ್ರರನ್ನು ವಶಕ್ಕೆ ಪಡೆದು ಅವರಿಗೆ ನಿತ್ಯ ಬಿರಿಯಾನಿ ಪೂರೈಸುವ ಕೆಲಸ ನಮಗೆ ಬೇಕಾಗಿಲ್ಲ’ ಎಂದು ಲೋಶಾಲಿ ಅವರು ಕರಾವಳಿ ಕಾವಲು ಪಡೆ ಸಿಬ್ಬಂದಿಗೆ ಸೂಚಿಸಿದ್ದರು.’ ಎಂದು ಆಂಗ್ಲ ಪತ್ರಿಕೆಯೊಂದರಲ್ಲಿ ವರದಿಯಾಗಿತ್ತು.  

ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಅವರು, ಇದು  ಆಧಾರ ರಹಿತ ಎಂದಿದ್ದಾರೆ. ಪ್ರಕಟಣೆ ಮೂಲಕ ಇದಕ್ಕೆ ಪ್ರತ್ಯುತ್ತರವನ್ನೂ ನೀಡಿದ್ದಾರೆ.

ಡಿಸೆಂಬರ್‌ 31ರ ರಾತ್ರಿ ಸ್ಫೋಟಕಗಳಿಂದ ತುಂಬಿದ್ದ ಪಾಕಿ­ಸ್ತಾನದ ಮೀನುಗಾರಿಕಾ ದೋಣಿಯೊಂದು ಗುಜ­ರಾತ್‌ ಸಮುದ್ರ ವ್ಯಾಪ್ತಿ­ಯಲ್ಲಿ  ಭಾರ­ತದ ಕರಾವಳಿ ಕಾವಲು ಪಡೆಯ ಕಣ್ಣಿಗೆ ಬಿದ್ದ ನಂತರ ಅನುಮಾ­ನಾಸ್ಪದವಾಗಿ ಸ್ಫೋಟಗೊಂಡು, ಕೆಲವು ಗಂಟೆಗಳ ಕಾಲ ಹೊತ್ತಿ ಉರಿದು ನಾಶಗೊಂಡಿತ್ತು.

ಗುಪ್ತಚರ ವಿಭಾಗದ ಮಾಹಿತಿ ಆಧರಿಸಿ ಡಿ.೩೧ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ ಕರಾವಳಿ ಕಾವಲು ಪಡೆ ಈ ದೋಣಿಯನ್ನು ಪತ್ತೆ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಬಡವರಿಗೆ 5 ಲಕ್ಷ ಸೈಟ್, ರೈತ ಚೈತನ್ಯ: 100 ದಿನಗಳ ಆಡಳಿತ ಪೂರೈಸಿದ ಡಿ.ಕೆ ಶಿವಕುಮಾರ್ ಸರ್ಕಾರದಿಂದ ಬಂಪರ್ ಗಿಫ್ಟ್ ಘೋಷಣೆ; Video

ರಾಮನಗರ: KPS ಶಾಲೆಯಲ್ಲಿ ಭಾರೀ ಅಗ್ನಿ ಅವಘಡ; ಹೊತ್ತಿ ಉರಿದ ಕ್ಲಾಸ್​ರೂಮ್, ಪೀಠೋಪಕರಣ ಭಸ್ಮ!

Cricket: 2027 ವಿಶ್ವಕಪ್‌ ಆಡ್ತೀರಾ?; ಕೊನೆಗೂ ಮೌನ ಮುರಿದ Rohit Sharma!

ಪೊಲೀಸ್ ವಾಹನ ಖರೀದಿಗೆ ಬ್ರೇಕ್? ಬಾಡಿಗೆ, ಲೀಸ್ ಮಾದರಿ ಪರಿಶೀಲನೆಗೆ ಕರ್ನಾಟಕ ಸರ್ಕಾರ ಚಿಂತನೆ!

ಅಫ್ಘಾನಿಸ್ತಾನ ವಿರುದ್ಧದ ಟಿ20ಐ ಸರಣಿ, ಏಷ್ಯನ್ ಗೇಮ್ಸ್‌ನಿಂದ ಹರ್ಷಿತ್ ರಾಣಾ ಔಟ್; ಭಾರತ ತಂಡಕ್ಕೆ ಯಶ್ ಠಾಕೂರ್ ಎಂಟ್ರಿ!