ದೇಶ

ಹಣಕ್ಕಾಗಿ ಇಸಿಸ್ ಉಗ್ರರಿಂದ ಅಂಗಾಂಗ ಮಾರಾಟ ಜಾಲ!

ಮುಸ್ಲಿಮೇತರ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವ, ಹಣಕ್ಕಾಗಿ ವಿದೇಶಿಗರನ್ನು ಅಪಹರಿಸುವ ಇಸಿಸ್ ಉಗ್ರರು ಅಂಗಾಂಗ ಜಾಲವನ್ನೂ ನಡೆಸುತ್ತಿದ್ದಾರಂತೆ!...

ನ್ಯೂಯಾರ್ಕ್: ಮುಸ್ಲಿಮೇತರ ಹೆಣ್ಣು ಮಕ್ಕಳನ್ನು ಮಾರಾಟ ಮಾಡುವ, ಹಣಕ್ಕಾಗಿ ವಿದೇಶಿಗರನ್ನು ಅಪಹರಿಸುವ ಇಸಿಸ್ ಉಗ್ರರು ಅಂಗಾಂಗ ಜಾಲವನ್ನೂ ನಡೆಸುತ್ತಿದ್ದಾರಂತೆ!

ಹೌದು, ಉಗ್ರರು ಶಸ್ತ್ರಾಸ್ತ್ರ ಖರೀದಿಗಾಗಿ ಮಾದಕ ವಸ್ತುಗಳ ಮಾರಾಟಗಳಂಥ ಹೀನ ಕೃತ್ಯಗಳಲ್ಲಿ ತೊಡಗಿರುವುದು ಹೊಸದೇನಲ್ಲ. ಆದರೆ, ಇದೇ ಮೊದಲ ಬಾರಿಗೆ ಇಸಿಸ್ ಉಗ್ರರು ಅಂಗಾಂಗ ಮಾರಾಟದಂಥ ಕೃತ್ಯಗಳಲ್ಲಿ ಪಾಲ್ಗೊಂಡಿರುವ ಆರೋಪವೂ ಕೇಳಿ ಬಂದಿದೆ. ಈ ಸಂಬಂಧ ಇರಾಕ್ ವಿಶ್ವಸಂಸ್ಥೆಗೂ ದೂರು ನೀಡಿದೆ. ವಿಶ್ವಸಂಸ್ಥೆ ಈಗ ತನಿಖೆ ಆರಂಭಿಸಿದೆ.

ಯಾಕೆ ಅನುಮಾನ?: ಇಸಿಸ್ ಉಗ್ರರು ಹತ್ಯೆ ಮಾಡಿದ ವ್ಯಕ್ತಿಗಳ ದೇಹ ಛಿದ್ರ ಛಿದ್ರವಾಗಿರುತ್ತದೆ. ಅಲ್ಲದೆ, ಬಹುತೇಕ ಅವರ ಅಂಗಾಂಗಗಳು ನಾಪತ್ತೆಯಾಗಿರುತ್ತವೆ. ಅಂದರೆ ಈ ರೀತಿಯ ಬರ್ಬರ ಹತ್ಯೆಯ ಹಿಂದೆ ಅಂಗಾಂಗ ಮಾರಾಟದ ಸಾಧ್ಯತೆಯೂ ಇದೆ ಎಂದೇ ಅರ್ಥ ಎಂದು ವಿಶ್ವಸಂಸ್ಥೆಯಲ್ಲಿರುವ ಇರಾಕ್ ರಾಯಭಾರಿ ಮೊಹಮ್ಮದ್ ಅಲ್ಹಾಕಿಮ್ ಹೇಳಿದ್ದಾರೆ.

ಇಸಿಸ್ ನಂಥ ಉಗ್ರ ಸಂಘಟನೆಗಳು ಮಾನವೀಯ ಮೌಲ್ಯಗಳನ್ನು ಸಂಪೂರ್ಣವಾಗಿ ನಾಶ ಮಾಡಿವೆ. ಸುನ್ನಿ, ಶಿಯಾ, ಕ್ರಿಶ್ಚಿಯನ್ನರು, ತುರ್ಕರು, ಶಬಕರು ಸೇರಿದಂತೆ ಇರಾಕ್ ನಲ್ಲಿರುವ ಎಲ್ಲ ಜನಾಂಗೀಯರ ಜತೆಗೂ ಅವರು ಬರ್ಬರವಾಗಿ ನಡೆದುಕೊಂಡಿದ್ದಾರೆ. ಉಗ್ರರು ಸಾರ್ವಜನಿಕರ ಅಂಗಾಂಗಗಳನ್ನು ಕತ್ತರಿಸಿ ಹಾಕುತ್ತಿದ್ದಾರೆಂದರೆ ಅಂಗಾಂಗಗಳ ವ್ಯಾಪಾರ ನಡೆಯುತ್ತಿರುವುದರಲ್ಲಿ ಅನುಮಾನವೇ ಇಲ್ಲ. ಇದು ಇಡೀ ಮಾನವತ್ವ ಕಗ್ಗೊಲೆ ಮಾಡುವಂಥ ಕೃತ್ಯ. ಇದಕ್ಕೆ ಅಂತಾರಾಷ್ಟ್ರೀಯ ಕಾನೂನಿನಂತೆ ಶಿಕ್ಷೆಯಾಗಬೇಕು ಎಂದು ಅವರು ತಿಳಿಸಿದ್ದಾರೆ.

ಉಗ್ರರು ಅಂಗಾಂಗ ಮಾರಾಟ ನಡೆಸುತ್ತಿದ್ದರೆ ವಿಶೇಷವೇನಿಲ್ಲ ಎಂದು ತಜ್ಞರೂ ಅಭಿಪ್ರಾಯಪಡುತ್ತಾರೆ. ಯುದ್ಧ, ನಾಗರಿಕ ಸಂಘರ್ಷದ ಸಮಯದಲ್ಲಿ ಅಂಗಾಂಗಗಳ ಕಳ್ಳತನ ಹೊಸದೇನಲ್ಲ ಎಂದು ಬರ್ಕ್ಲಿ ವಿವಿಯ ಶೀಪರ್ ಹಗ್ಸ್ ಅವರು ಅಭಿಪ್ರಾಯ ಪಡುತ್ತಾರೆ. ಇಸಿಸ್ ಉಗ್ರರು ಜನವರಿ ಯೊಂದರಲ್ಲೇ 790 ಮಂದಿಯನ್ನು ಹತ್ಯೆ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯಲ್ಲಿರುವ ಇರಾಕ್ ನ ಈ ಹಿಂದಿನ ರಾಯಭಾರಿ ನಿಕೊಲಯ್ ಮಾಲ್ಡೆನೊವ್ ಹೇಳುತ್ತಾರೆ. ಅಂಗಾಂಗ ಮಾರಾಟ ಮಾಡಿಗಳಿಸಿದ ಹಣವನ್ನೇ ಬಳಸಿಕೊಂಡು ಉಗ್ರರು ಶಕ್ತಿವೃದ್ಧಿಸಿಕೊಳ್ಳುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

GBA ಆಯ್ತು.. ಈಗ ಗ್ರೇಟರ್ ಮೈಸೂರು ಸಿಟಿ ಕಾರ್ಪೋರೇಷನ್ ಗೆ ಸಂಪುಟ ಅನುಮೋದನೆ!

'ಮಾತು' ಜಗತ್ತಿಗೆ ಉತ್ತಮವಾಗದ ಹೊರತು ಅದು ಶಕ್ತಿಯಲ್ಲ; ಡಿಕೆಶಿ ಪೋಸ್ಟ್​​ಗೆ CM ಸಿದ್ದರಾಮಯ್ಯ ಕೌಂಟರ್

ಸಂಸತ್ತಿನಲ್ಲಿ 'ವಂದೇ ಮಾತರಂ', 'ಜೈ ಹಿಂದ್' ಘೋಷಣೆಗಳಿಗೆ ಆಕ್ಷೇಪಣೆ ಯಾಕೆ?: ಬಿಜೆಪಿ ಪ್ರಶ್ನಿಸಿದ ಕಾಂಗ್ರೆಸ್

ಯುದ್ಧ ಸಾರಿದ ನ್ಯೂಜಿಲೆಂಡ್, 25 ಲಕ್ಷ Stone Cold Killers ನಿರ್ಮೂಲನೆ ಮಾಡುವ ಶಪಥ!

ಸಿದ್ದರಾಮಯ್ಯ ಹೈಕಮಾಂಡ್ ಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾರೆ: CM ಪುತ್ರ ಯತೀಂದ್ರ ಸ್ಫೋಟಕ ಹೇಳಿಕೆ; Video

SCROLL FOR NEXT