ಸಾಂದರ್ಭಿಕ ಚಿತ್ರ 
ದೇಶ

ಮುರಿದ ಬಾಗಿಲು ತೆರೆದಿಟ್ಟ ಸತ್ಯ

ಜೆರಾಕ್ಸ್ ಯಂತ್ರದ ಮೇಲೆ ಬಿದ್ದಿದ್ದ ಮಹತ್ವದ ಕಾಗದಪತ್ರ, ಕಚೇರಿಯ ಮುರಿದ ಬಾಗಿಲು...!...

ನವದೆಹಲಿ: ಜೆರಾಕ್ಸ್ ಯಂತ್ರದ ಮೇಲೆ ಬಿದ್ದಿದ್ದ ಮಹತ್ವದ ಕಾಗದಪತ್ರ, ಕಚೇರಿಯ ಮುರಿದ ಬಾಗಿಲು...!

ಇವೆರಡು `ಕಾರ್ಪೋರೇಟ್ ಬೇಹುಗಾರಿಕೆ' ಎಂಬ ಅತಿದೊಡ್ಡ ಹಗರಣವನ್ನು ಬಯಲು ಮಾಡಿದ ಮಹತ್ವದ ಅಂಶಗಳು. ಪೆಟ್ರೋಲಿಯಂ ಸಚಿವಾಲಯದಲ್ಲಿ ನಡೆಯುತ್ತಿದ್ದ ಕಾರ್ಪೋರೇಟ್ ಬೇಹುಗಾರಿಕೆ ಬಗ್ಗೆ 8 ತಿಂಗಳ ಹಿಂದೆಯೇ ಸುಳಿವು ಸಿಕ್ಕಿದ್ದು ಹೀಗೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಒಂದು ದಿನ ಬೆಳಗ್ಗೆ ಸಚಿವಾಲಯದ ಕಚೇರಿಯೊಳಗಿರುವ ಛಾಯಾಪ್ರತಿ ಮುದ್ರಿಸುವ ಯಂತ್ರದ ಮೇಲೆ ಪ್ರಮುಖ ದಾಖಲೆಯೊಂದುಕಂಡುಬಂದಿದ್ತು.

ಈ ದಾಖಲೆ ಇಲ್ಲಿ ಹೇಗೆ ಬಂತು ಎಂಬ ಪ್ರಶ್ನೆ ಅಧಿಕಾರಿಗಳನ್ನು ಕಾಡತೊಡಗಿತು. ಇದೇ ವೇಳೆ, ನಿರ್ದೇಶಕರ ಕೊಠಡಿಯ ಬಾಗಿಲೊಂದು ಮುರಿದಿರುವುದು, ಯಾರೋ ಕಚೇರಿಯೊಳಗೆ ಪ್ರವೇಶಿಸಿದ್ದಾರೆ ಎಂಬ ಅನುಮಾನಕ್ಕೂ ಕಾರಣವಾಯಿತು. ಈ ಎಲ್ಲ ಸಂಶಯಗಳನ್ನು ಮುಂದಿಟ್ಟುಕೊಂಡು ತನಿಖೆ ನಡೆಸಿದಾಗ `ಕಾರ್ಪೋರೇಟ್ ಬೇಹು' ಹಗರಣ ಬೆಳಕಿಗೆ ಬಂದು, ಈಗ 12 ಮಂದಿಯ ಬಂಧನದವರೆಗೆ ತಲುಪಿದೆ.

ಹೆಚ್ಚಿನ ಭದ್ರತೆ: ವಿಶೇಷ ಕಾರ್ಯದರ್ಶಿ, ಇಬ್ಬರು ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರ ಕೊಠಡಿಗಳ ಕೀಗಳನ್ನೂ ನಕಲು ಮಾಡಲಾಗಿತ್ತು. ಒಟ್ಟಾರೆ ರಹಸ್ಯ ದಾಖಲೆಗಳೆಲ್ಲ ಕಾರ್ಪೋರೇಟ್ ಕಂಪನಿಗಳ, ಲಾಬಿದಾರರ ಕೈ ಸೇರುತ್ತಿತ್ತು. ಈ ಹಿನ್ನೆಲೆಯಲ್ಲಿ ಈಗ ಎಲ್ಲ ರಹಸ್ಯ ಫೈಲುಗಳನ್ನು ಕೈಯಲ್ಲೇ ವರ್ಗಾಯಿಸಬೇಕು ಅಥವಾ ಮುಚ್ಚಿದ ಲಕೋಟೆಯಲ್ಲೇ ಕಳುಹಿಸಬೇಕು ಎಂಬ ಆದೇಶ ಹೊರಬಿದ್ದಿದೆ. ಸಚಿವಾಲಯದ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT