ಸಾಂದರ್ಭಿಕ ಚಿತ್ರ 
ದೇಶ

ಮುರಿದ ಬಾಗಿಲು ತೆರೆದಿಟ್ಟ ಸತ್ಯ

ಜೆರಾಕ್ಸ್ ಯಂತ್ರದ ಮೇಲೆ ಬಿದ್ದಿದ್ದ ಮಹತ್ವದ ಕಾಗದಪತ್ರ, ಕಚೇರಿಯ ಮುರಿದ ಬಾಗಿಲು...!...

ನವದೆಹಲಿ: ಜೆರಾಕ್ಸ್ ಯಂತ್ರದ ಮೇಲೆ ಬಿದ್ದಿದ್ದ ಮಹತ್ವದ ಕಾಗದಪತ್ರ, ಕಚೇರಿಯ ಮುರಿದ ಬಾಗಿಲು...!

ಇವೆರಡು `ಕಾರ್ಪೋರೇಟ್ ಬೇಹುಗಾರಿಕೆ' ಎಂಬ ಅತಿದೊಡ್ಡ ಹಗರಣವನ್ನು ಬಯಲು ಮಾಡಿದ ಮಹತ್ವದ ಅಂಶಗಳು. ಪೆಟ್ರೋಲಿಯಂ ಸಚಿವಾಲಯದಲ್ಲಿ ನಡೆಯುತ್ತಿದ್ದ ಕಾರ್ಪೋರೇಟ್ ಬೇಹುಗಾರಿಕೆ ಬಗ್ಗೆ 8 ತಿಂಗಳ ಹಿಂದೆಯೇ ಸುಳಿವು ಸಿಕ್ಕಿದ್ದು ಹೀಗೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಒಂದು ದಿನ ಬೆಳಗ್ಗೆ ಸಚಿವಾಲಯದ ಕಚೇರಿಯೊಳಗಿರುವ ಛಾಯಾಪ್ರತಿ ಮುದ್ರಿಸುವ ಯಂತ್ರದ ಮೇಲೆ ಪ್ರಮುಖ ದಾಖಲೆಯೊಂದುಕಂಡುಬಂದಿದ್ತು.

ಈ ದಾಖಲೆ ಇಲ್ಲಿ ಹೇಗೆ ಬಂತು ಎಂಬ ಪ್ರಶ್ನೆ ಅಧಿಕಾರಿಗಳನ್ನು ಕಾಡತೊಡಗಿತು. ಇದೇ ವೇಳೆ, ನಿರ್ದೇಶಕರ ಕೊಠಡಿಯ ಬಾಗಿಲೊಂದು ಮುರಿದಿರುವುದು, ಯಾರೋ ಕಚೇರಿಯೊಳಗೆ ಪ್ರವೇಶಿಸಿದ್ದಾರೆ ಎಂಬ ಅನುಮಾನಕ್ಕೂ ಕಾರಣವಾಯಿತು. ಈ ಎಲ್ಲ ಸಂಶಯಗಳನ್ನು ಮುಂದಿಟ್ಟುಕೊಂಡು ತನಿಖೆ ನಡೆಸಿದಾಗ `ಕಾರ್ಪೋರೇಟ್ ಬೇಹು' ಹಗರಣ ಬೆಳಕಿಗೆ ಬಂದು, ಈಗ 12 ಮಂದಿಯ ಬಂಧನದವರೆಗೆ ತಲುಪಿದೆ.

ಹೆಚ್ಚಿನ ಭದ್ರತೆ: ವಿಶೇಷ ಕಾರ್ಯದರ್ಶಿ, ಇಬ್ಬರು ಜಂಟಿ ಕಾರ್ಯದರ್ಶಿಗಳು, ನಿರ್ದೇಶಕರ ಕೊಠಡಿಗಳ ಕೀಗಳನ್ನೂ ನಕಲು ಮಾಡಲಾಗಿತ್ತು. ಒಟ್ಟಾರೆ ರಹಸ್ಯ ದಾಖಲೆಗಳೆಲ್ಲ ಕಾರ್ಪೋರೇಟ್ ಕಂಪನಿಗಳ, ಲಾಬಿದಾರರ ಕೈ ಸೇರುತ್ತಿತ್ತು. ಈ ಹಿನ್ನೆಲೆಯಲ್ಲಿ ಈಗ ಎಲ್ಲ ರಹಸ್ಯ ಫೈಲುಗಳನ್ನು ಕೈಯಲ್ಲೇ ವರ್ಗಾಯಿಸಬೇಕು ಅಥವಾ ಮುಚ್ಚಿದ ಲಕೋಟೆಯಲ್ಲೇ ಕಳುಹಿಸಬೇಕು ಎಂಬ ಆದೇಶ ಹೊರಬಿದ್ದಿದೆ. ಸಚಿವಾಲಯದ ಕಚೇರಿಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT