ದೇಶ

ಮಂಗಳಮುಖಿಗೆ ಮೇಯರ್‌ಪಟ್ಟ

Vishwanath S

ರಾಯಗಡ: ಛತ್ತೀಸ್‌ಗಡದ ರಾಯಗಡ ನಗರಸಭೆ ಮೇಯರ್ ಚುನಾವಣೆ ಹೊಸ ಇತಿಹಾಸ ದಾಖಲಿಸಿದೆ.

ಇದೇ ಮೊದಲ ಬಾರಿಗೆ ತೃತೀಯ ಲಿಂಗಿಯೊಬ್ಬರು ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯ್ಲಿಲ ತೃತೀಯ ಲಿಂಗಿ ಮಧು ಕಿನ್ನಾರ್ ಪ್ರತಿಸ್ಪರ್ಧಿ, ಬಿಜೆಪಿಯ ಮಹಾವೀರ್ ಗುರೂಜಿ ಅವರನ್ನು ಮಣಿಸಿದ್ದಾರೆ.

8ನೇ ತರಗತಿವರೆಗೆ ಓದಿರುವ ಮಧು ಈ ಹಿಂದೆ ರೈಲುಗಳಲ್ಲಿ ಹಾಡುವ, ನೃತ್ಯ ಮಾಡುವ ಮೂಲಕ ಹಣ ಸಂಗ್ರಹಿಸುತ್ತಿದ್ದರು. ನಾನು ಚುನಾವಣೆ ಪ್ರಚಾರದ ವೇಳೆ ಕೇವಲ ರು. 60ರಿಂದ 70 ಸಾವಿರವಷ್ಟೇ ಖರ್ಚು ಮಾಡಿದ್ದೆ. ಜನರ ಬೆಂಬಲದಿಂದಾಗಿಯೇ ನಾನು ಚುನಾವಣೆಯಲ್ಲಿ ಸ್ಪರ್ಧಿಸಿದ್ದೆ. ಜನ ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಅವರ ನಿರೀಕ್ಷೆ ಈಡೇರಿಸಲು ನಾನು ಸರ್ವ ರೀತಿಯಲ್ಲೂ ಪ್ರಯತ್ನಿಸುತ್ತೇನೆ ಎಂದು ಮಧು ಹೇಳಿದ್ದಾರೆ.

SCROLL FOR NEXT