ಜಾವಾ ಸಮುದ್ರದಲ್ಲಿ ವಿಮಾನದ ಅವಶೇಷಕ್ಕಾಗಿ ಶೋಧ ನಡೆಸುತ್ತಿರುವ ಸಿಬ್ಬಂದಿ (ಸಂಗ್ರಹ ಚಿತ್ರ) 
ದೇಶ

ಏರ್ ಏಷ್ಯಾ ವಿಮಾನದ 'ಬಾಲ' ಪತ್ತೆ, 'ಬ್ಲಾಕ್ ಬಾಕ್ಸ್' ಸಿಗುವ ಸಾಧ್ಯತೆ

ದುರಂತಕ್ಕೀಡಾಗಿದ್ದ ಏರ್‌ಏಷ್ಯಾ ವಿಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ತಿರುವು ದೊರೆತಿದ್ದು, ವಿಮಾನದ ಬಾಲ(ಹಿಂಭಾಗ) ಜಾವಾ ಸಮುದ್ರದಾಳದಲ್ಲಿ ಪತ್ತೆಯಾಗಿದೆ.

ಜಕಾರ್ತಾ: ಕಳೆದ ಡಿಸೆಂಬರ್ ಅಂತ್ಯದಲ್ಲಿ ದುರಂತಕ್ಕೀಡಾಗಿದ್ದ ಏರ್‌ಏಷ್ಯಾ ವಿಮಾನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ತಿರುವು ದೊರೆತಿದ್ದು, ವಿಮಾನದ ಬಾಲದ ಭಾಗ ಜಾವಾ ಸಮುದ್ರದಾಳದಲ್ಲಿ ಪತ್ತೆಯಾಗಿದೆ. ಇದೇ ವೇಳೆ ವಿಮಾನದ ಬ್ಲಾಕ್‌ಬಾಕ್ಸ್ ದೊರೆಯುವ ಕುರಿತು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಮಾನದ ಶೋಧ ಕಾರ್ಯಾಚರಣೆಗಾಗಿ ಇಂಡೋನೇಷ್ಯಾ ನಿಯೋಜಿಸಿರುವ ವಿಶೇಷ ಜಲಾಂತರ್ಗಾಮಿ ನೌಕೆ ಮತ್ತು ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಮುಳುಗು ತಜ್ಞರು ಜಾವಾ ಸಮುದ್ರದಾಳದಲ್ಲಿ ವಿಮಾನದ ಅವಶೇಷವನ್ನು ಪತ್ತೆ ಹಚ್ಚಿದ್ದಾರೆ ಎಂದು ಶೋಧ ಕಾರ್ಯಾಚರಣೆಯ ನೇತೃತ್ವ ವಹಿಸಿರುವ ಹೆನ್ರಿ ಸೋಲಿಸ್ಟ್ಯೋ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಇನ್ನು ಪ್ರಸ್ತುತ ಪತ್ತೆಯಾಗಿರುವ ವಿಮಾನದ ಅವಶೇಷದ ಕುರಿತು ಭಾರಿ ಕುತೂಹಲವೇರ್ಪಟ್ಟಿದೆ. ಏಕೆಂದರೆ ಸಾಮಾನ್ಯವಾಗಿ ವಿಮಾನದ ಸುರಕ್ಷತೆಗಾಗಿ ಅಳವಡಿಸಲಾಗುವ ಕಾಕ್‌ಪೀಟ್ ವಾಯ್ಸ್ ರೆಕಾರ್ಡರ್, ಫ್ಲೈಟ್ ಡಾಟಾ ರೆಕಾರ್ಡರ್, ಬ್ಲಾಕ್ ಬಾಕ್ಸ್ ನಂತಹ ಪ್ರಮುಖ ಯಂತ್ರೋಪಕರಣಗಳನ್ನು ವಿಮಾನದ ಬಾಲದಂತಹ ಭಾಗದಲ್ಲಿ ಅಳವಡಿಸಲಾಗಿರುತ್ತದೆ. ಹೀಗಾಗಿ ಅತ್ಯಂತ ಗಂಭೀರವಾಗಿ ಇದರ ಶೋಧ ಕಾರ್ಯ ನಡೆಸಲಾಗುತ್ತಿದ್ದು, ಜಾವಾ ಸಮುದ್ರದತ್ತ ನುರಿತ ತಜ್ಞರು ದೌಡಾಯಿಸಿದ್ದಾರೆ.

ಕಳೆದ ಡಿಸೆಂಬರ್ 28ರಂದು ಸುರಬಯಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸಿಂಗಾಪುರದತ್ತ ಟೇಕ್ ಆಫ್ ಆಗಿದ್ದ ಏರ್ ಏಷ್ಯಾ ಸಂಸ್ಥೆಯ 8501 ವಿಮಾನ ದಿಢೀರ್ ನಾಪತ್ತೆಯಾಗಿತ್ತು. ಬಳಿಕ ನಡೆದ ಶೋಧಕಾರ್ಯದಲ್ಲಿ ವಿಮಾನವು ದುರಂತಕ್ಕೀಡಾಗಿರುವುದು ತಿಳಿದುಬಂದಿತ್ತು.

ದುರಂತದಲ್ಲಿ ಸಿಬ್ಬಂದಿಗಳು ಸೇರಿದಂತೆ ವಿಮಾನದಲ್ಲಿದ್ದ ಎಲ್ಲ 155 ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಪೈಕಿ ಈ ವರೆಗೂ ನಡೆದ ಶೋಧ ಕಾರ್ಯದಲ್ಲಿ 40 ಮೃತ ದೇಹಗಳನ್ನು ಪತ್ತೆ ಹಚ್ಚಲಾಗಿದ್ದು, ಬಹುತೇಕ ಮೃತದೇಹಗಳನ್ನು ಸಂಬಂಧಿಕರಿಗೆ ರವಾನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT