ದೇಶ

ಪ್ರವಾಹದ ಎಚ್ಚರಿಕೆ ಕೊಡುವ ಉಪಗ್ರಹ ಸದ್ಯದಲ್ಲೇ ಉಡ್ಡಯನ!

ಬರ ನಿರ್ವಹಣೆ ಮತ್ತು ಪ್ರವಾಹದ ಕುರಿತು ಎಚ್ಚರಿಕೆ ನೀಡಲು ನಾಸಾ ಹೊಸ ಉಪಗ್ರಹವೊಂದನ್ನು...

ವಾಷಿಂಗ್ಟನ್: ಬರ ನಿರ್ವಹಣೆ ಮತ್ತು ಪ್ರವಾಹದ ಕುರಿತು ಎಚ್ಚರಿಕೆ ನೀಡಲು ನಾಸಾ ಹೊಸ ಉಪಗ್ರಹವೊಂದನ್ನು ಇದೇ ಜನವರಿಯಲ್ಲಿ ಉಡಾವಣೆ ಮಾಡಲಿದೆ.

ಮಣ್ಣಿನ ತೇವಾಂಶದಲ್ಲಿನ ಏರಿಳಿತವನ್ನು ಪತ್ತೆ ಹಚ್ಚುವ ಉಪಗ್ರಹ (ಎಸ್‌ಎಂಎಪಿ)ವು ಒಂದು ಧ್ರುವದಿಂದ ಇನ್ನೊಂದು ಧ್ರುವದಲ್ಲಿ ಭೂಮಿಯ ತೇವಾಂಶ ಹೇಗೆ ಬದಲಾಗುತ್ತದೆ ಎನ್ನುವ ಕುರಿತು ಸಮಗ್ರ ಮಾಹಿತಿ ನೀಡಲಿದೆ.

ಬರದ ಸ್ವರೂಪ ಹೇಗೆ ಪ್ರಾರಂಭವಾಗುತ್ತದೆ ಹಾಗೂ ಮುಗಿಯುತ್ತದೆ. ಜತೆಗೆ ಉಳಿದ ಪ್ರದೇಶಗಳಿಗೆ ಹೇಗೆ ವಿಸ್ತರಣೆಯಾಗುತ್ತದೆ ಎಂಬ ಬಗ್ಗೆ ಕೂಲಂಕುಷವಾಗಿ ವಿಜ್ಞಾನಿಗಳು ಇದರ ಸಹಾಯದಿಂದ ಅರಿಯಲಿದ್ದಾರೆ. ಇದರಿಂದ ಮಳೆ ನಂಬಿಕೊಂಡು ಕೃಷಿ ಮಾಡುವ ರೈತರಿಗೆ ತುಂಬಾ ಅನುಕೂಲವಾಗಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರ.

ಇದಲ್ಲದೆ ಪ್ರವಾಹ ಬರುವ ಮುನ್ಸೂಚನೆಯನ್ನೂ ಮಣ್ಣಿನ ತೇವಾಂಶದ ಸ್ಥಿತಿಗತಿ ಮೇಲೆ ಅರಿಯಬಹುದಾಗಿದೆ. ಚಂಡಮಾರುತ ಬರುವ ಮುನ್ಸೂಚನೆಯ್ನೂ ಇದರಿಂದ ಪಡೆಯಬಹುದಾಗಿದೆ. ಭೂಮಿಯ ಟಾಪ್ 5 ಸೆ.ಮೀ. ಮಣ್ಣಿನ ತೇವಾಂಶ ಹಂತದ ದಾಖಲೆಯನ್ನು ಪ್ರತಿ ಮೂರು ದಿನಗಳಿಗೊಮ್ಮೆ ಈ ಸೆಟಲೈಟ್ ರವಾನಿಸಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT