ಏರ್‌ಏಷ್ಯಾ ವಿಮಾನದ ಅವಶೇಷಗಳನ್ನು ಸಾಗಿಸುತ್ತಿರುವ ನೌಕಾದಳದ ಸಿಬ್ಬಂದಿ (ಸಂಗ್ರಹ ಚಿತ್ರ) 
ದೇಶ

ವಾಯು ಒತ್ತಡದಿಂದಾಗಿ ಏರ್‌ಏಷ್ಯಾ ವಿಮಾನ ಸ್ಫೋಟ..!

ವಾಯು ಒತ್ತಡದಲ್ಲಿನ ಬದಲಾವಣೆಯಿಂದಾಗಿ ಏರ್‌ಏಷ್ಯಾ ವಿಮಾನ ಸ್ಫೋಟಗೊಂಡಿರಬಹುದು ಎಂದು..

ಜಕಾರ್ತ: ವಾಯು ಒತ್ತಡದಲ್ಲಿನ ಬದಲಾವಣೆಯಿಂದಾಗಿ ಏರ್‌ಏಷ್ಯಾ ವಿಮಾನ ಸ್ಫೋಟಗೊಂಡಿರಬಹುದು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ವಿಮಾನವು ಸಮುದ್ರದಲ್ಲಿ ಬೀಳುವುದಕ್ಕೂ ಮೊದಲೇ ಆಗಸದಲ್ಲೇ ಸ್ಫೋಟಗೊಂಡಿದೆ. ವಿಮಾನದಲ್ಲಿ ವಾಯು ಒತ್ತಡ ತೀವ್ರ ಪ್ರಮಾಣದಲ್ಲಿ ಏರುಪೇರಾಗಿದ್ದರಿಂದ ವಿಮಾನ ಸ್ಫೋಟಗೊಂಡಿರಬಹುದು ಎಂದು ಹಿರಿಯ ತನಿಖಾಧಿಕಾರಿ ಸುಪ್ರಿಯದಿ ಹೇಳಿದ್ದಾರೆ. ರಾಷ್ಟ್ರೀಯ ಶೋಧನಾ ಮತ್ತು ರಕ್ಷಣಾ ಏಜೆನ್ಸಿಯ ಸಂಯೋಜಕರಾಗಿರುವ ಸುಪ್ರಿಯದಿ ಅವರು ಹೇಳಿರುವಂತೆ, 'ನನ್ನ ಸಂಶೋಧನೆಗಳ ಪ್ರಕಾರ ಮತ್ತು ವಿಮಾನದ ಅವಶೇಷಶಗಳನ್ನು ಪರೀಕ್ಷಿಸಿದಾಗ ವಿಮಾನವು ತೀವ್ರ ವಾಯು ಒತ್ತಡದಿಂದಾಗಿ ಸ್ಫೋಟಗೊಂಡಿರಬಹುದು. ಆ ಬಳಿಕ ಸಮುದ್ರಕ್ಕೆ ಬಿದ್ದಿದೆ. ವಿಮಾನದ ಎಡಭಾಗದ ಲೋಹದ ತಡೆಗೋಡೆಯಲ್ಲಿ ಉಂಟಾದ ಬಿರುಕು ವಿಮಾನದಲ್ಲಿ ತೀವ್ರ ವಾಯು ಒತ್ತಡ ಹೆಚ್ಚಾಗುವಂತೆ ಮಾಡಿದೆ. ಹೀಗಾಗಿ ವಿಮಾನ ಸ್ಫೋಟಗೊಂಡಿರಬಹುದು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಇಂದು ಬೆಳಗ್ಗೆ ಏರ್‌ಏಷ್ಯಾ ವಿಮಾನದ ಎರಡೂ ಬ್ಲಾಕ್‌ಬಾಕ್ಸ್ ಗಳ ಪತ್ತೆಯಾಗಿದ್ದು, ವಿಮಾನ ಪತನಗೊಳ್ಳುವ ಮುನ್ನ ಪೈಲಟ್ ಆಡಿದ ಮಾತುಗಳನ್ನು ಆಧರಿಸಿ ವಿಮಾನ ಹೇಗೆ ಪತನಗೊಂಡಿತು ಎನ್ನುವುದರ ಮಾಹಿತಿ ದೊರೆಯಲಿದೆ. ಈಗಾಗಲೇ ಎರಡೂ ಬ್ಲಾಕ್‌ಬಾಕ್ಸ್ ಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದ್ದು, ತಜ್ಞರು ಬ್ಲಾಕ್‌ಬಾಕ್ಸ್ ನಲ್ಲಿ ರೆಕಾರ್ಡ್ ಆಗಿರುವ ಮಾಹಿತಿಗಳನ್ನು ಡಿಕೋಡ್ ಮಾಡುವ ಕಾರ್ಯದಲ್ಲಿ ತೊಡಗಲಿದ್ದಾರೆ.

ಕಳೆದ ಡಿಸೆಂಬರ್ 28ರಂದು ಸುರಬಯಾ ವಿಮಾನ ನಿಲ್ದಾಣದಿಂದ ಸಿಂಗಾಪುರದತ್ತ ಪ್ರಯಾಣ ಬೆಳೆಸಿದ್ದ ಏರ್‌ಏಷ್ಯಾ ವಿಮಾನ ಟೇಕ್‌ಆಫ್ ಆದ ಕೆಲವೇ ಗಂಟೆಗಳಲ್ಲಿ ಪತನಗೊಂಡು, ಜಾವಾ ಸಮುದ್ರದಲ್ಲಿ ಬಿದ್ದಿತ್ತು. ಇಂದು ಬೆಳಗ್ಗೆ 7.30ರ ವೇಳೆಯಲ್ಲಿ ವಿಮಾನದ ಬ್ಲಾಕ್‌ಬಾಕ್ಸ್ ಅನ್ನು ನೀರಿನಿಂದ ಹೊರತೆಗೆಯಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT