ಏರ್‌ಏಷ್ಯಾ ವಿಮಾನದ ಅವಶೇಷಗಳನ್ನು ಸಾಗಿಸುತ್ತಿರುವ ನೌಕಾದಳದ ಸಿಬ್ಬಂದಿ (ಸಂಗ್ರಹ ಚಿತ್ರ) 
ದೇಶ

ವಾಯು ಒತ್ತಡದಿಂದಾಗಿ ಏರ್‌ಏಷ್ಯಾ ವಿಮಾನ ಸ್ಫೋಟ..!

ವಾಯು ಒತ್ತಡದಲ್ಲಿನ ಬದಲಾವಣೆಯಿಂದಾಗಿ ಏರ್‌ಏಷ್ಯಾ ವಿಮಾನ ಸ್ಫೋಟಗೊಂಡಿರಬಹುದು ಎಂದು..

ಜಕಾರ್ತ: ವಾಯು ಒತ್ತಡದಲ್ಲಿನ ಬದಲಾವಣೆಯಿಂದಾಗಿ ಏರ್‌ಏಷ್ಯಾ ವಿಮಾನ ಸ್ಫೋಟಗೊಂಡಿರಬಹುದು ಎಂದು ತನಿಖಾಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ವಿಮಾನವು ಸಮುದ್ರದಲ್ಲಿ ಬೀಳುವುದಕ್ಕೂ ಮೊದಲೇ ಆಗಸದಲ್ಲೇ ಸ್ಫೋಟಗೊಂಡಿದೆ. ವಿಮಾನದಲ್ಲಿ ವಾಯು ಒತ್ತಡ ತೀವ್ರ ಪ್ರಮಾಣದಲ್ಲಿ ಏರುಪೇರಾಗಿದ್ದರಿಂದ ವಿಮಾನ ಸ್ಫೋಟಗೊಂಡಿರಬಹುದು ಎಂದು ಹಿರಿಯ ತನಿಖಾಧಿಕಾರಿ ಸುಪ್ರಿಯದಿ ಹೇಳಿದ್ದಾರೆ. ರಾಷ್ಟ್ರೀಯ ಶೋಧನಾ ಮತ್ತು ರಕ್ಷಣಾ ಏಜೆನ್ಸಿಯ ಸಂಯೋಜಕರಾಗಿರುವ ಸುಪ್ರಿಯದಿ ಅವರು ಹೇಳಿರುವಂತೆ, 'ನನ್ನ ಸಂಶೋಧನೆಗಳ ಪ್ರಕಾರ ಮತ್ತು ವಿಮಾನದ ಅವಶೇಷಶಗಳನ್ನು ಪರೀಕ್ಷಿಸಿದಾಗ ವಿಮಾನವು ತೀವ್ರ ವಾಯು ಒತ್ತಡದಿಂದಾಗಿ ಸ್ಫೋಟಗೊಂಡಿರಬಹುದು. ಆ ಬಳಿಕ ಸಮುದ್ರಕ್ಕೆ ಬಿದ್ದಿದೆ. ವಿಮಾನದ ಎಡಭಾಗದ ಲೋಹದ ತಡೆಗೋಡೆಯಲ್ಲಿ ಉಂಟಾದ ಬಿರುಕು ವಿಮಾನದಲ್ಲಿ ತೀವ್ರ ವಾಯು ಒತ್ತಡ ಹೆಚ್ಚಾಗುವಂತೆ ಮಾಡಿದೆ. ಹೀಗಾಗಿ ವಿಮಾನ ಸ್ಫೋಟಗೊಂಡಿರಬಹುದು' ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇನ್ನು ಇಂದು ಬೆಳಗ್ಗೆ ಏರ್‌ಏಷ್ಯಾ ವಿಮಾನದ ಎರಡೂ ಬ್ಲಾಕ್‌ಬಾಕ್ಸ್ ಗಳ ಪತ್ತೆಯಾಗಿದ್ದು, ವಿಮಾನ ಪತನಗೊಳ್ಳುವ ಮುನ್ನ ಪೈಲಟ್ ಆಡಿದ ಮಾತುಗಳನ್ನು ಆಧರಿಸಿ ವಿಮಾನ ಹೇಗೆ ಪತನಗೊಂಡಿತು ಎನ್ನುವುದರ ಮಾಹಿತಿ ದೊರೆಯಲಿದೆ. ಈಗಾಗಲೇ ಎರಡೂ ಬ್ಲಾಕ್‌ಬಾಕ್ಸ್ ಗಳನ್ನು ಲ್ಯಾಬ್‌ಗೆ ಕಳುಹಿಸಲಾಗಿದ್ದು, ತಜ್ಞರು ಬ್ಲಾಕ್‌ಬಾಕ್ಸ್ ನಲ್ಲಿ ರೆಕಾರ್ಡ್ ಆಗಿರುವ ಮಾಹಿತಿಗಳನ್ನು ಡಿಕೋಡ್ ಮಾಡುವ ಕಾರ್ಯದಲ್ಲಿ ತೊಡಗಲಿದ್ದಾರೆ.

ಕಳೆದ ಡಿಸೆಂಬರ್ 28ರಂದು ಸುರಬಯಾ ವಿಮಾನ ನಿಲ್ದಾಣದಿಂದ ಸಿಂಗಾಪುರದತ್ತ ಪ್ರಯಾಣ ಬೆಳೆಸಿದ್ದ ಏರ್‌ಏಷ್ಯಾ ವಿಮಾನ ಟೇಕ್‌ಆಫ್ ಆದ ಕೆಲವೇ ಗಂಟೆಗಳಲ್ಲಿ ಪತನಗೊಂಡು, ಜಾವಾ ಸಮುದ್ರದಲ್ಲಿ ಬಿದ್ದಿತ್ತು. ಇಂದು ಬೆಳಗ್ಗೆ 7.30ರ ವೇಳೆಯಲ್ಲಿ ವಿಮಾನದ ಬ್ಲಾಕ್‌ಬಾಕ್ಸ್ ಅನ್ನು ನೀರಿನಿಂದ ಹೊರತೆಗೆಯಲಾಗಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!

"ಮದುವೆ ಅಂದ್ರೆ ಗುಲಾಮಗಿರಿಯಲ್ಲ, ಮನೆಗೆಲಸ ಮಾಡು-ಅತ್ತೆ-ಮಾವನ ನೋಡ್ಕೋ ಅನ್ನೋಕೆ ಗಂಡನಿಗೆ ಹಕ್ಕಿಲ್ಲ": ಹೈಕೋರ್ಟ್ ಮಹತ್ವದ ತೀರ್ಪು..!

ಬಿಡದಿ ಟೌನ್‌ಶಿಪ್‌ ಯೋಜನೆ: ರೈತರ ಭೂಮಿ ಕಸಿಯಲ್ಲ, denotification ಮಾಡಲ್ಲ- ಸಿಎಂ ಡಿಕೆ. ಶಿವಕುಮಾರ್ ಸ್ಪಷ್ಟನೆ