ಬಿಜೆಪಿ ನಾಯಕ ಶ್ಯಾಮಲ್ ಗೋಸ್ವಾಮಿ 
ದೇಶ

ಪ್ರತಿ ಹಿಂದೂ ಮಹಿಳೆ 5 ಮಕ್ಕಳನ್ನು ಹೆರಬೇಕು

ಬಿರ್‌ಭೂಮ್: ಹಿಂದೂ ಧರ್ಮ ರಕ್ಷಣೆಗಾಗಿ ಹಿಂದು ಮಹಿಳೆಯು 4 ಮಕ್ಕಳನ್ನು ಹೆರಬೇಕು ಎಂಬ ಬಿಜೆಪಿ ನಾಯಕನ ಹೇಳಿಕೆ ದೇಶಾದ್ಯಂತ ತೀವ್ರ ಸಂಚಲನ ಮೂಡಿಸಿದ್ದ ಬೆನ್ನಲ್ಲೆ ಮತ್ತೊಬ್ಬ ಬಿಜೆಪಿ ನಾಯಕ, ಹಿಂದೂ ಧರ್ಮ ರಕ್ಷಣೆಗಾಗಿ ಪ್ರತಿ ಹಿಂದು ಮಹಿಳೆಯು 5 ಮಕ್ಕಳನ್ನು ಹೆರಬೇಕು ಎಂಬ ಹೇಳಿಕೆ ತೀವ್ರ ಸಂಚಲನ ಮೂಡಿಸಿದೆ.

ಬಿಜೆಪಿ ಸಂಸದ ಸಾಕ್ಷಿಮಹರಾಜ್ ಇತ್ತೀಚೆಗೆಷ್ಟೇ ಹಿಂದೂ ಧರ್ಮ ರಕ್ಷಣೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಬಾರಿ ಚರ್ಚೆಗೆ ಗ್ರಾಸವಾಗಿದ್ದರು. ಹಿಂದೂ ಧರ್ಮ ರಕ್ಷಣೆ ಮಾಡುವ ಸಲುವಾಗಿ ಪ್ರತಿ ಹಿಂದು ಮಹಿಳೆಯರು ನಾಲ್ಕು ಮಕ್ಕಳನ್ನು ಹೆರಬೇಕು ಎಂದು ಹೇಳಿಕೆ ನೀಡಿದ್ದು, ಇದಕ್ಕೆ ಬಿಜೆಪಿ ಕೆಂಡಾಮಂಡಲವಾಗಿತ್ತು. ಈ ಸಂಬಂಧ ಬಿಜೆಪಿಯು ಸಾಕ್ಷಿ ಮಹಾರಾಜ್‌ಗೆ ಶೋಕಾಸ್ ನೊಟೀಸ್ ಸಹ ನೀಡಿತ್ತು.

ಇದೀಗ ಈ ಹೇಳಿಕೆ ಮಾಸುವ ಮುನ್ನವೇ, ಬಂಗಾಳದ ಬಿಜೆಪಿ ನಾಯಕ ಶ್ಯಾಮಲ್ ಗೋಸ್ವಾಮಿ, ಹಿಂದೂ ಧರ್ಮ ಪಾಲನೆಗೆ ಪ್ರತಿ ಹಿಂದು ಮಹಿಳೆಯು ಐದು ಮಕ್ಕಳನ್ನು ಹೆರಬೇಕು ಎಂದು ವಿವಾದದ ಬಾಂಬ್ ಸ್ಫೋಟಿಸಿರುವುದು ಸಂಚಲನಕ್ಕೆ ಕಾರಣವಾಗಿದೆ.

ಇತ್ತೀಚಿನ ಪರಿಸ್ಥಿತಿಯಲ್ಲಿ ಹಿಂದೂ ಧರ್ಮ ಅವನತಿಯ ಹಾದಿ ಹಿಡಿದಿದ್ದು, ಭವಿಷ್ಯದಲ್ಲಿ ಹಿಂದು ಧರ್ಮ ಪಾಲನೆ ಮಾಡಬೇಕಾದರೆ, ಹಿಂದುಗಳ ಸಂಖ್ಯೆ ಹೆಚ್ಚಾಗುವುದು ಅನಿವಾರ್ಯವಾಗಿದೆ. ಸನಾತನ ಧರ್ಮದ ಉಳಿವಿಗಾಗಿ ಪ್ರತಿ ಹಿಂದೂ ಮಹಿಳೆಯ 5 ಮಕ್ಕಳನ್ನು ಹೆರಬೇಕು ಎಂದು ಗೋಸ್ವಾಮಿ ಸಾರ್ವಜನಿಕ ಭಾಷಣದ ವೇಳೆ ಹೇಳಿರುವುದು ಅಚ್ಚರಿ ಮೂಡಿಸಿದೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪಶ್ಚಿಮ ಬಂಗಾಳ ವೈದ್ಯಕೀಯ ವಿದ್ಯಾರ್ಥಿನಿ ಗ್ಯಾಂಗ್ ರೇಪ್ ಕೇಸ್: ಮೂವರ ಬಂಧನ

ಯುದ್ಧ ತೀವ್ರ: ಪಾಕಿಸ್ತಾನದ ಏರ್ ಸ್ಟ್ರೈಕ್ ಗೆ ಅಫ್ಘಾನಿಸ್ತಾನದಿಂದ ಕ್ಷಿಪಣಿ ದಾಳಿ ಉತ್ತರ

20 ವರ್ಷ ಸಾಕಿ ಬೆಳೆಸಿದ 'ಅಶ್ವತ್ಥ'ಕ್ಕೆ ಕಿಡಿಗೇಡಿಗಳ ಕೊಡಲಿ ಪೆಟ್ಟು, ಬಿಕ್ಕಿ ಬಿಕ್ಕಿ ಅತ್ತ 'ವೃಕ್ಷಮಾತೆ', ಇಬ್ಬರ ಬಂಧನ, video viral

2nd Test, Day 3: ಮೊದಲ ಇನ್ನಿಂಗ್ಸ್ ನಲ್ಲಿ 248 ರನ್ ಗೆ ವಿಂಡೀಸ್ ಆಲೌಟ್, ಫಾಲೋಆನ್ ಹೇರಿದ ಭಾರತ

ಇತಿಹಾಸ ಬರೆದ Sherry Singh, 48 ವರ್ಷಗಳಲ್ಲಿ ಮೊದಲ ಬಾರಿಗೆ ಭಾರತಕ್ಕೆ 'ಮಿಸ್ ಯೂನಿವರ್ಸ್' ಕಿರೀಟ!

SCROLL FOR NEXT