ದೇಶ

ಉಗ್ರ ಹಣ ಸುಳಿವು

Mainashree

ಬೆಂಗಳೂರು: ಭಟ್ಕಳ ಮೂಲದ ನಾಲ್ವರು ಶಂಕಿತ ಉಗ್ರರಿಗೆ ವಿದೇಶಗಳಿಂದ ಬರುತ್ತಿದ್ದ ಹವಾಲಾ ಹಣವನ್ನು ಸ್ಥಳೀಯರೇ ತಲುಪಿಸುತ್ತಿದ್ದರೆನ್ನುವ ಮಹತ್ವದ ಮಾಹಿತಿ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಬಯಲಾಗಿದೆ.

ದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಲು ಅಗತ್ಯ ಹಣವನ್ನು ವಿದೇಶಗಳಲ್ಲಿನ ಉಗ್ರ ಸಂಘಟೆಗಳು ಪೂರೈಸುತ್ತಿದ್ದವು. ಆದರೆ, ಆ ಹಣವನ್ನು ಬಂಧಿತರಿಗೆ ತಲುಪಿಸುವ ಕೆಲಸವನ್ನು ಬೆಂಗಳೂರು ಹಾಗೂ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿರುವ ಸ್ಥಳೀಯ ಏಜೆನ್ಸಿಗಳು ಮಾಡುತ್ತಿವೆ. ಈ ಬಗ್ಗೆ ಸುಳಿವು ಲಭ್ಯವಾಗಿದ್ದು ಅವರ ಬಂಧನಕ್ಕೆ ಕಾರ್ಯಾಚರಣೆ ನಡೆದಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.

SCROLL FOR NEXT