ಬಂಧಿತ ಆರೋಪಿ ಡಾ.ಅಫಾಕ್ 
ದೇಶ

ಪಾಕ್‌ನಂತೆ ಭಟ್ಕಳ ಬಿಂಬಿಸುತ್ತಿದ್ದಾರೆ ಪೊಲೀಸರು: ಅಫಾಕ್ ಪರ ವಕೀಲ ಆರೋಪ

ಮಾಧ್ಯಮಗಳ ದುರ್ಬಳಕೆ ಮಾಡಿಕೊಂಡು ಪೊಲೀಸರು ಭಟ್ಕಳವನ್ನು ಪಾಕಿಸ್ತಾನದಂತೆ...

ಬೆಂಗಳೂರು: ಮಾಧ್ಯಮಗಳ ದುರ್ಬಳಕೆ ಮಾಡಿಕೊಂಡು ಪೊಲೀಸರು ಭಟ್ಕಳವನ್ನು ಪಾಕಿಸ್ತಾನದಂತೆ ಬಿಂಬಿಸುತ್ತಿದ್ದಾರೆ ಎಂದು ಬಂಧಿತ ಆರೋಪಿ ಡಾ.ಅಫಾಕ್ ಪರ ವಕೀಲ ಸುಲ್ತಾನ್ ಬೆರ್ರಿ ಆರೋಪಿಸಿದರು.

ಭಾರತ-ಪಾಕ್ ಮೊದಲು ಒಂದೇ ರಾಷ್ಟ್ರ ಆಗಿತ್ತು. ವಿಭಜನೆಯ ನಂತರ ಪಾಕ್ ಜೊತೆ ಭಾರತದ ಮುಸಲ್ಮಾನರು ಸಂಬಂಧ ಕಡಿದುಕೊಳ್ಳಲು ಸಾಧ್ಯವಿಲ್ಲ. ಇದೇ ಕಾರಣದಿಂದ ಪಾಕ್ ಉಗ್ರರ ಜೊತೆ ಸಂಪರ್ಕ ಇದೆ ಎಂದು ಭಟ್ಕಳ ಯುವಕರನ್ನು ಬಂಧಿಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪೊಲೀಸರು ಎಫ್‌ಐಆರ್‌ನಲ್ಲಿ ಮೂವರು ಬಂಧಿತ ಭಟ್ಕಳ ಯುವಕರ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಲಾಗಿದೆ. ಮನೆಯಲ್ಲಿ ಬಂಧಿಸಿರುವುದಾಗಿ ಹೇಳಿದ್ದಾರೆ. ಆದರೆ ಅಫಾಕ್ ಮನೆಯಲ್ಲೇ ಇರಲಿಲ್ಲ. ಬಂಧಿತ ಕುಟುಂಬಿಕರ ನೋವನ್ನು ಪೊಲೀಸರು ಅರ್ಥ ಮಾಡಿಕೊಳ್ಳುತ್ತಿಲ್ಲ. ತಮ್ಮ ಪಾಡಿಗೆ ವೃತ್ತಿ ಮಾಡಿಕೊಂಡಿದ್ದ ಹೋಮಿಯೋಪತಿ ವೈದ್ಯ ಅಫಾಕ್, ಸಬೂರ್, ಸದ್ದಾಂ ಹುಸೇನ್ ಎಂಬ ಅಮಾಯಕರನ್ನು ಬಂಧಿಸಿರುವುದು ಸರಿಯಲ್ಲ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT