ಶ್ರೀಲಂಕಾ ಬಂದಿರಿನಲ್ಲಿ ಚೀನಾದ ಸಬ್‌ಮೆರಿನ್ (ಸಂಗ್ರಹ ಚಿತ್ರ) 
ದೇಶ

ಭಾರತದ ಅಸಮಾಧಾನಕ್ಕೆ ಕಾರಣವಾದ 'ಸಬ್‌ಮೆರಿನ್‌'

ಚೀನಾದ ಸಬ್‌ಮೆರಿನ್‌ಗೆ ಶ್ರೀಲಂಕಾ ಸರ್ಕಾರ ಜಾಗ ಒದಗಿಸಿದ್ದರಿಂದ ಭಾರತ ಅಸಮಾಧಾನಗೊಂಡಿತ್ತು...

ನವದೆಹಲಿ: ಚೀನಾದ ಸಬ್‌ಮೆರಿನ್‌ಗೆ ಶ್ರೀಲಂಕಾ ಸರ್ಕಾರ ಜಾಗ ಒದಗಿಸಿದ್ದರಿಂದ ಭಾರತ ಅಸಮಾಧಾನಗೊಂಡಿತ್ತು.

2005ರಲ್ಲಿ ಅಧಿಕಾರಕ್ಕೇರಿದ ಮಹಿಂದಾ ರಾಜಪಕ್ಸೆ ಎಲ್‌ಟಿಟಿಇ ವಿರೋಧಿ ಎನ್ನುವುದು ಎಲ್ಲರಿಗೂ ಗೊತಿತ್ತು. ಆದರೆ ಅವರು ಮುಂದೆ ಹೋಗಿ ಭಾರತ ವಿರೋಧಿ ನಿಲುವು ತಳೆದಿದ್ದು ನೆರೆಯ ದೇಶವನ್ನು ಇರುಸುಮುರುಸುಗೆ ಗುರಿಯಾಗಿಸಿತ್ತು. ರಾಜಪಕ್ಸೆ 2 ವರ್ಷದ ಅಧಿಕಾರಾವಧಿಯಲ್ಲಿ ಏಳು ಬಾರಿ ಚೀನಾಗೆ ಹೋಗಿ ಬಂದಿದ್ದರು. ಎಲ್‌ಟಿಟಿಇ ಮಟ್ಟಹಾಕುವಲ್ಲಿ ಚೀನಾದ ನೆರವು ಪಡೆದರು.

ಅಭಿವೃದ್ದಿಯಲ್ಲೂ ನೆರೆಯ ಭಾರತವನ್ನು ಬದಿಗಿಟ್ಟು ಚೀನಾವನ್ನು ಹತ್ತಿರ ಕರೆದರು. ಈ ವಿಚಾರ ಭಾರತಕ್ಕೆ ಸ್ವಲ್ಪಮಟ್ಟಿಗಿನ ತಲೆನೋವು ತಂದಿಟ್ಟಿದ್ದರೂ ಆತಂಕಪಡುವಂಥದ್ದೇನೂ ಇರಲಿಲ್ಲ. ಆದರೆ, ನಿಜವಾದ ಆತಂಕ ಶುರುವಾದದ್ದು ಚೀನಾದ ಜಲಾಂತರ್ಗಾಮಿಗಳಿಂದ. ಯಾವಾಗ ಚೀನಾದ ಜಲಾಂತರ್ಗಾಮಿಗಳಿಗೆ ಶ್ರೀಲಂಕಾ ನೆಲೆ ಒದಗಿಸಿತೋ ಆಗಲೇ ಭಾರತಕ್ಕೆ ಆತಂಕ ಶುರುವಾಗಿದ್ದು, ನೆರೆಯ ರಾಷ್ಟ್ರದ ಅಭಿಪ್ರಾಯವನ್ನೂ ಕೇಳದೆ ರಾಜಪಕ್ಸೆ ಈ ರೀತಿಯ ಆಟವಾಡಿದ್ದು ಭಾರತವನ್ನು ತೀವ್ರವಾಗಿ ಕೆರಳಿಸಿತು. ಈ ವಿಚಾರವಾಗಿ ಪ್ರಧಾನಿ ಮೋದಿ ಅವರು ರಾಜಪಕ್ಸೆ ಅವರಲ್ಲಿ ತಮ್ಮ ಕಳವಳ ವ್ಯಕ್ತಪಡಿಸಿದ್ದರು.

ಆದರೆ, ರಾಜಪಕ್ಸೆ ಅಷ್ಟೊತ್ತಿಗಾಗಲೇ ಚೀನಾದ ಆಟದ ಗೊಂಬೆಯಾಗಿ ಬಿಟ್ಟಿದ್ದರು. ಮೂಲಗಳ ಪ್ರಕಾರ ಈ ವೇಳೆಯಲ್ಲೇ ಭಾರತ ಶ್ರೀಲಂಕಾದ ರಾಜಕೀಯದಲ್ಲಿ ಹೆಚ್ಚು ಕುತೂಹಲ ಬೆಳೆಸಿಕೊಂಡದ್ದು, ಪ್ರತಿಪಕ್ಷಗಳ ಬೆನ್ನಿಗೆ ನಿಂತದ್ದು. ಶ್ರೀಲಂಕಾದ ಮಾಧ್ಯಮದ ವರದಿಯನ್ನೇ ನಂಬುವುದಾದರೆ ರಾಜಪಕ್ಸೆಯನ್ನು ಮಣಿಸುವಲ್ಲಿ 'ರಾ' ದ ಅಧಿಕಾರಿ. ಶ್ರೀಲಂಕಾದಲ್ಲಿ ಒಳಗೊಳಗೆ ನಡೆಯುತ್ತಿದ್ದ ಈ ರಾಜಕೀಯ ಬದಲಾವಣೆಯನ್ನು ಅರಿತುಕೊಳ್ಳುವಲ್ಲಿ ವಿಳಂಬ ಮಾಡಿದಕ್ಕೇ ಚೀನಾ ಈಗ ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಮೈತ್ರಿಪಾಲ ಸಿರಿಸೇನೆ ನೇತೃತ್ವದ ಪ್ರತಿಪಕ್ಷ ಶ್ರೀಲಂಕಾವನ್ನು ಮತ್ತೊಂದು ವಸಾಹತು (ಚೀನಾದ ಕಾಲನಿ) ಮಾಡಲು ಬಿಡಲ್ಲ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಾಗಲೇ ಚೀನಾ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಪರಿಣಾಮ ಸಿರಿಸೇನಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಚೀನಾವಿರೋಧಿ ನಿಲುವು ತಳೆಯುವ ಸ್ಪಷ್ಟ ಸೂಚನೆಯನ್ನೂ ಅವರು ಈಗಾಗಲೇ ತಳೆದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

ಯುಕ್ರೇನ್-ರಷ್ಯಾ ಶಾಂತಿ ಒಪ್ಪಂದ ಸನಿಹ: ಸುಳಿವು ನೀಡಿದ ಯುಕ್ರೇನ್

2026 T20 ವಿಶ್ವಕಪ್: ಕೊಲಂಬೋದಲ್ಲಿ ಫೆ.15 ರಂದು ಭಾರತ- ಪಾಕ್ ಪಂದ್ಯ

SCROLL FOR NEXT