ಶ್ರೀಲಂಕಾ ಬಂದಿರಿನಲ್ಲಿ ಚೀನಾದ ಸಬ್‌ಮೆರಿನ್ (ಸಂಗ್ರಹ ಚಿತ್ರ) 
ದೇಶ

ಭಾರತದ ಅಸಮಾಧಾನಕ್ಕೆ ಕಾರಣವಾದ 'ಸಬ್‌ಮೆರಿನ್‌'

ಚೀನಾದ ಸಬ್‌ಮೆರಿನ್‌ಗೆ ಶ್ರೀಲಂಕಾ ಸರ್ಕಾರ ಜಾಗ ಒದಗಿಸಿದ್ದರಿಂದ ಭಾರತ ಅಸಮಾಧಾನಗೊಂಡಿತ್ತು...

ನವದೆಹಲಿ: ಚೀನಾದ ಸಬ್‌ಮೆರಿನ್‌ಗೆ ಶ್ರೀಲಂಕಾ ಸರ್ಕಾರ ಜಾಗ ಒದಗಿಸಿದ್ದರಿಂದ ಭಾರತ ಅಸಮಾಧಾನಗೊಂಡಿತ್ತು.

2005ರಲ್ಲಿ ಅಧಿಕಾರಕ್ಕೇರಿದ ಮಹಿಂದಾ ರಾಜಪಕ್ಸೆ ಎಲ್‌ಟಿಟಿಇ ವಿರೋಧಿ ಎನ್ನುವುದು ಎಲ್ಲರಿಗೂ ಗೊತಿತ್ತು. ಆದರೆ ಅವರು ಮುಂದೆ ಹೋಗಿ ಭಾರತ ವಿರೋಧಿ ನಿಲುವು ತಳೆದಿದ್ದು ನೆರೆಯ ದೇಶವನ್ನು ಇರುಸುಮುರುಸುಗೆ ಗುರಿಯಾಗಿಸಿತ್ತು. ರಾಜಪಕ್ಸೆ 2 ವರ್ಷದ ಅಧಿಕಾರಾವಧಿಯಲ್ಲಿ ಏಳು ಬಾರಿ ಚೀನಾಗೆ ಹೋಗಿ ಬಂದಿದ್ದರು. ಎಲ್‌ಟಿಟಿಇ ಮಟ್ಟಹಾಕುವಲ್ಲಿ ಚೀನಾದ ನೆರವು ಪಡೆದರು.

ಅಭಿವೃದ್ದಿಯಲ್ಲೂ ನೆರೆಯ ಭಾರತವನ್ನು ಬದಿಗಿಟ್ಟು ಚೀನಾವನ್ನು ಹತ್ತಿರ ಕರೆದರು. ಈ ವಿಚಾರ ಭಾರತಕ್ಕೆ ಸ್ವಲ್ಪಮಟ್ಟಿಗಿನ ತಲೆನೋವು ತಂದಿಟ್ಟಿದ್ದರೂ ಆತಂಕಪಡುವಂಥದ್ದೇನೂ ಇರಲಿಲ್ಲ. ಆದರೆ, ನಿಜವಾದ ಆತಂಕ ಶುರುವಾದದ್ದು ಚೀನಾದ ಜಲಾಂತರ್ಗಾಮಿಗಳಿಂದ. ಯಾವಾಗ ಚೀನಾದ ಜಲಾಂತರ್ಗಾಮಿಗಳಿಗೆ ಶ್ರೀಲಂಕಾ ನೆಲೆ ಒದಗಿಸಿತೋ ಆಗಲೇ ಭಾರತಕ್ಕೆ ಆತಂಕ ಶುರುವಾಗಿದ್ದು, ನೆರೆಯ ರಾಷ್ಟ್ರದ ಅಭಿಪ್ರಾಯವನ್ನೂ ಕೇಳದೆ ರಾಜಪಕ್ಸೆ ಈ ರೀತಿಯ ಆಟವಾಡಿದ್ದು ಭಾರತವನ್ನು ತೀವ್ರವಾಗಿ ಕೆರಳಿಸಿತು. ಈ ವಿಚಾರವಾಗಿ ಪ್ರಧಾನಿ ಮೋದಿ ಅವರು ರಾಜಪಕ್ಸೆ ಅವರಲ್ಲಿ ತಮ್ಮ ಕಳವಳ ವ್ಯಕ್ತಪಡಿಸಿದ್ದರು.

ಆದರೆ, ರಾಜಪಕ್ಸೆ ಅಷ್ಟೊತ್ತಿಗಾಗಲೇ ಚೀನಾದ ಆಟದ ಗೊಂಬೆಯಾಗಿ ಬಿಟ್ಟಿದ್ದರು. ಮೂಲಗಳ ಪ್ರಕಾರ ಈ ವೇಳೆಯಲ್ಲೇ ಭಾರತ ಶ್ರೀಲಂಕಾದ ರಾಜಕೀಯದಲ್ಲಿ ಹೆಚ್ಚು ಕುತೂಹಲ ಬೆಳೆಸಿಕೊಂಡದ್ದು, ಪ್ರತಿಪಕ್ಷಗಳ ಬೆನ್ನಿಗೆ ನಿಂತದ್ದು. ಶ್ರೀಲಂಕಾದ ಮಾಧ್ಯಮದ ವರದಿಯನ್ನೇ ನಂಬುವುದಾದರೆ ರಾಜಪಕ್ಸೆಯನ್ನು ಮಣಿಸುವಲ್ಲಿ 'ರಾ' ದ ಅಧಿಕಾರಿ. ಶ್ರೀಲಂಕಾದಲ್ಲಿ ಒಳಗೊಳಗೆ ನಡೆಯುತ್ತಿದ್ದ ಈ ರಾಜಕೀಯ ಬದಲಾವಣೆಯನ್ನು ಅರಿತುಕೊಳ್ಳುವಲ್ಲಿ ವಿಳಂಬ ಮಾಡಿದಕ್ಕೇ ಚೀನಾ ಈಗ ಕೈಕೈ ಹಿಸುಕಿಕೊಳ್ಳುವಂತಾಗಿದೆ.

ಮೈತ್ರಿಪಾಲ ಸಿರಿಸೇನೆ ನೇತೃತ್ವದ ಪ್ರತಿಪಕ್ಷ ಶ್ರೀಲಂಕಾವನ್ನು ಮತ್ತೊಂದು ವಸಾಹತು (ಚೀನಾದ ಕಾಲನಿ) ಮಾಡಲು ಬಿಡಲ್ಲ ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಾಗಲೇ ಚೀನಾ ಎಚ್ಚೆತ್ತುಕೊಳ್ಳಬೇಕಿತ್ತು. ಆದರೆ ಪರಿಣಾಮ ಸಿರಿಸೇನಾ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಚೀನಾವಿರೋಧಿ ನಿಲುವು ತಳೆಯುವ ಸ್ಪಷ್ಟ ಸೂಚನೆಯನ್ನೂ ಅವರು ಈಗಾಗಲೇ ತಳೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕಟ್ಟಡ ಕುಸಿತಕ್ಕೂ ಕೆಲವೇ ಕ್ಷಣಗಳ ಮುನ್ನ 22 CRPF ಸೈನಿಕರ ರಕ್ಷಣೆ, Indian Army ಹೆಲಿಕಾಪ್ಟರ್ ರಣರೋಚಕ ಕಾರ್ಯಾಚರಣೆ! video

Dharmasthala: Mahesh Shetty Thimarodi ಮನೆ ಮಹಜರು, ಪತ್ನಿ-ಮಕ್ಕಳ ಮೊಬೈಲ್ ವಶಕ್ಕೆ, 3 ತಲ್ವಾರ್ ಕೂಡ ಪತ್ತೆ!

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

Tamil Nadu: ನಟ-ರಾಜಕಾರಣಿ ದಳಪತಿ ವಿಜಯ್ ಬೌನ್ಸರ್ ಗಳಿಂದ ವ್ಯಕ್ತಿಯ ಮೇಲೆ ಹಲ್ಲೆ ಆರೋಪ! ಕೇಸ್ ದಾಖಲು, ವಿಡಿಯೋದಲ್ಲಿ ಏನಿದೆ?

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

SCROLL FOR NEXT