ಪಿಕೆ ಚಿತ್ರದ ಪೋಸ್ಟರ್ (ಸಂಗ್ರಹ ಚಿತ್ರ) 
ದೇಶ

'ಪಿಕೆ' ವಿರುದ್ಧ ಕೃತಿಚೌರ್ಯ ಆರೋಪ

ಆಮೀರ್ ಖಾನ್ ನಟನೆಯ ಪಿಕೆ ಚಿತ್ರದ ವಿರುದ್ಧ ಕೃತಿಚೌರ್ಯ ಆರೋಪ ಕೇಳಿಬಂದಿದ್ದು, ಚಿತ್ರಕಥೆ ತಮ್ಮ ಕೃತಿ...

ನವದೆಹಲಿ: ಆಮೀರ್ ಖಾನ್ ನಟನೆಯ ಪಿಕೆ ಚಿತ್ರದ ವಿರುದ್ಧ ಕೃತಿಚೌರ್ಯ ಆರೋಪ ಕೇಳಿಬಂದಿದ್ದು, ಚಿತ್ರಕಥೆ ತಮ್ಮ ಕೃತಿಯಾಧಾರಿತವಾಗಿದೆ ಎಂದು ಲೇಖಕರೊಬ್ಬರು ದೂರಿದ್ದಾರೆ.

ಕಪಿಲ್ ಇಸಾಪುರಿ ಎಂಬ ಲೇಖಕ ಈ ಆರೋಪ ಮಾಡಿದ್ದು, 2013ರಲ್ಲಿ ತಾನು ರಚಿಸಿದ್ದ 'ಫರಿಷ್ಟಾ' ಕೃತಿಯಲ್ಲಿನ ಕಥೆಯನ್ನು ಕದಿಯಲಾಗಿದೆ ಎಂದು ಆರೋಪಿಸಿದ್ದಾರೆ. ಈ ಬಗ್ಗೆ ಜ್ಯೋತಿಕಾ ಕಲ್ರಾ ಎಂಬ ವಕೀಲರ ಮೂಲಕ ನ್ಯಾಯಾಲಯದ ಮೆಟ್ಟಿಲೇರಿರುವ ಇಸಾಪುರಿ ಅವರು 1 ಕೋಟಿ ರು. ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ.

'ಪಿಕೆ' ಚಿತ್ರದ ನಿರ್ದೇಶಕ ರಾಜ್ ಕುಮಾರ್ ಹಿರಾನಿ, ನಿರ್ಮಾಪಕ ವಿನೋದ್ ಚೋಪ್ರಾ, ಚಿತ್ರಕಥೆ ಬರಹಗಾರ ಅಭಿಜಿತ್ ಜೋಷಿ ವಿರುದ್ಧ ಕಪಿಲ್ ಇಸಾಪುರಿ ನ್ಯಾಯಾಲಯದಲ್ಲಿ ದೂರು ಸಲ್ಲಿಸಿದ್ದಾರೆ. ಚಿತ್ರಕ್ಕಾಗಿ ತಮ್ಮ ಕೃತಿಯ ಪಾತ್ರಗಳನ್ನು, ವಿಚಾರಗಳ ಅಭಿವ್ಯಕ್ತಿ ಮತ್ತು ಸನ್ನಿವೇಶಗಳನ್ನು ಕದಿಯಲಾಗಿದೆ ಎಂದು ಲೇಖಕರು ಆರೋಪಿಸಿದ್ದಾರೆ.

 'ಚಿತ್ರವನ್ನು ತಾವು ಬಹಳ ತಡವಾಗಿ ವೀಕ್ಷಿಸಿದ್ದು, ಚಿತ್ರದ ಬಹುತೇಕ ಪಾತ್ರಗಳು ತಮ್ಮ ಕೃತಿಯದ್ದೇ ಆಗಿವೆ. ದೇವಮಾನವರನ್ನು ಮೂಢವಾಗಿ ನಂಬುವ ಭಕ್ತರು ಅವರನ್ನು ಯಾವುದೇ ರೀತಿಯಲ್ಲಿಯೂ ಪ್ರಶ್ನಿಸದೇ ಅವರು ಹೇಳಿದ್ದೇ ವೇದವಾಕ್ಯ ಎನ್ನುವಂತೆ ಪಾಲಿಸುತ್ತಾರೆ. ಇದನ್ನು ನಾನು ನನ್ನ ಕೃತಿಯಲ್ಲಿ ಹೇಳಿದ್ದೇನೆ.

ಆದರೆ ಪಿಕೆ ಚಿತ್ರದಲ್ಲಿ ಇದೇ ಕಥೆಯನ್ನು ಹಿನ್ನಲೆಯಾಗಿಟ್ಟುಕೊಳ್ಳಲಾಗಿದೆ. ಕೇವಲ ಕಥೆ ಮಾತ್ರವಲ್ಲದೇ ಚಿತ್ರದ ಬಹುತೇಕ ಪಾತ್ರಗಳನ್ನು, ಅಭಿವ್ಯಕ್ತಿ ವಿಚಾರಗಳನ್ನು ಮತ್ತು ಸನ್ನಿವೇಶಗಳನ್ನು ಕೂಡ ಕದಿಯಲಾಗಿದೆ. ಈ ವಿಚಾರ ತಿಳಿಯದಂತೆ ಮಾಡಲು ಪಾತ್ರಗಳನ್ನು ಅಲ್ಪ ಪ್ರಮಾಣದಲ್ಲಿ ತಿರುಚಲಾಗಿದೆ. ಚಿತ್ರದಲ್ಲಿನ ಹಲವು ಸನ್ನಿವೇಶಗಳು ತಮ್ಮ ಕೃತಿಯಲ್ಲಿರುವಂತೆಯೇ ಇದೆ ಎಂದು ಲೇಖಕ ಇಸಾಪುರಿ ಆರೋಪಿಸಿದ್ದಾರೆ. ಪ್ರಸ್ತುತ ಪ್ರಕರಣ ದಾಖಲಸಿಕೊಂಡಿರುವ ನ್ಯಾಯಾಲಯ ಚಿತ್ರತಂಡಕ್ಕೆ ನೋಟಿಸ್ ನೀಡಿದ್ದು, ಸ್ಪಷ್ಟನೆ ಕೇಳಿದೆ.

ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಈ ಹಿಂದಿನ ಚಿತ್ರ 3 ಇಡಿಯಟ್ಸ್ ಕೂಡ ಈ ಹಿಂದೆ ಇಂತಹುದೇ ಕೃತಿಚೌರ್ಯ ಆರೋಪ ಎದುರಿಸಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನ್ಯಾಯಾಂಗದಲ್ಲಿ ಭ್ರಷ್ಟಾಚಾರದ ಪಾಠ: ಕೇಂದ್ರ ಕ್ಷಮೆಯಾಚಿಸುತ್ತಿದ್ದಂತೆ NCERT ಪಠ್ಯ ಪುಸ್ತಕ ಬ್ಯಾನ್, ಪ್ರತಿಗಳನ್ನು ವಶಕ್ಕೆ ಪಡೆಯಲು ಸುಪ್ರೀಂ ಸೂಚನೆ

'ನಿಮ್ಮ ಭಾಷಣ ನಾಚಿಕೆಯಿಲ್ಲದೆ ಸಮರ್ಥನೆ ಮಾಡಿಕೊಂಡಂತೆ ಇತ್ತು': 1947ರ ಐನ್ ಸ್ಟೈನ್ ನೆಹರೂಗೆ ಬರೆದ ಪತ್ರ ಉಲ್ಲೇಖಿಸಿ Modi ಟೀಕಿಸಿದ ಕಾಂಗ್ರೆಸ್

Ranji Trophy final: ಔಕಿಬ್ ನಬಿ ಬೌಲಿಂಗ್ ಮ್ಯಾಜಿಕ್‌ಗೆ ಬೆರಗಾದ ಕೆಎಲ್ ರಾಹುಲ್; ಆರಂಭದಲ್ಲೇ ಕರ್ನಾಟಕಕ್ಕೆ ಸಂಕಷ್ಟ!

T20 World cup 2026: 'ಆಕ್ರಮಣಕಾರಿ ಶೈಲಿ ಮುಂದುವರಿಸಿ': ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಅನಿಲ್ ಕುಂಬ್ಳೆ ಎಚ್ಚರಿಕೆ

ರಿಯಲ್ ಲೈಫ್‌ನಲ್ಲೂ ಒಂದಾದ ರೀಲ್ ಜೋಡಿ: ತೆಲುಗು ಸಂಪ್ರದಾಯದಂತೆ ರಶ್ಮಿಕಾ–ವಿಜಯ್ ವಿವಾಹ, ಸಂಜೆ ಕೊಡವ ಸಂಪ್ರದಾಯದಲ್ಲಿ ಮತ್ತೊಂದು ಸಮಾರಂಭ

SCROLL FOR NEXT