ಸಾಂದರ್ಭಿಕ ಚಿತ್ರ 
ದೇಶ

ಹವಾಲ ಮೂಲಕ 2ಜಿ ಹಣ ರವಾನೆ

ಯುಪಿಎ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದ 2ಜಿ ಹಗರಣದೊಂದಿಗೆ ನಂಟು ಹೊಂದಿರುವ ಭಾರಿ ಪ್ರಮಾಣದ ಹವಾಲ ಅಕ್ರಮ ವಹಿವಾಟನ್ನು...

ಮುಂಬೈ: ಯುಪಿಎ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದ್ದ 2ಜಿ ಹಗರಣದೊಂದಿಗೆ ನಂಟು ಹೊಂದಿರುವ ಭಾರಿ ಪ್ರಮಾಣದ ಹವಾಲ ಅಕ್ರಮ ವಹಿವಾಟನ್ನು ಜಾರಿ ನಿರ್ದೇಶನಾಲಯ ಬಯಲಿಗೆಳೆದಿದೆ.
ಸುಮಾರು ರು. 10 ಸಾವಿರ ಕೋಟಿ 2ಜಿ ಹಗರಣದ ಲಂಚ ಹಣವನ್ನು ದುಬೈಗೆ ರವಾನೆ ಮಾಡಲಾಗಿದ್ದು ಇದು ಅತಿದೊಡ್ಡ ಹವಾಲ ಅಕ್ರಮ ವಹಿವಾಟು ಎಂದು ಮೂಲಗಳು ಹೇಳಿವೆ.
ಈ ಪ್ರಕರಣದಲ್ಲಿ ಖಾಸಗಿ ಬ್ಯಾಂಕ್‍ಗಳು ಸಹ ಕೈಮಿಲಾಯಿಸಿವೆ ಎಂಬ ವರದಿಗಳಿದ್ದು ಈ ಕುರಿತೂ ತನಿಖೆ ನಡೆಯುತ್ತಿದೆ. ಮಾಜಿ ಕೇಂದ್ರ ಸಚಿವ ಎ.ರಾಜಾ 2
ಹಗರಣದ ಹಣವನ್ನು ಹವಾಲ ಮೂಲಕ ವಿದೇಶಕ್ಕೆ ರವಾನಿಸಲು ಚೆನ್ನೈ ಮೂಲದ ಕಂಪನಿ ಜೆಪಿ ಗ್ರೂಪ್ ಸಹಕರಿಸಿದೆ. ದುಬೈ  ಮೂಲದ  ಕಂಪನಿ ಮೈಕಾನ್ ಜನರಲ್ ಟ್ರೇಡಿಂಗ್ ಕಂಪನಿಹಗೆ ಈ ಹಣವನ್ನು ಕಳಿಸಲಾಗಿದೆ. ಹಾಂಕಾಂಗ್ ಸೇರಿದಂತೆ ತೆರಿಗೆ  ಸ್ವರ್ಗಗಳೆನಿಸಿದ ಇತರ ದೇಶಗಳಿಗೂ ಹಣ ರವಾನೆಯಾಗಿದೆ ಎಂದು ಮೂಲಗಳು ತಿಳಿಸಿವೆ. 2012-13ರಲ್ಲಿ  ಭಾರತದ ಗುಪ್ತಚಾರ ಸಂಸ್ಥೆ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ಆರ್‍ಎಡಬ್ಲ್ಯು) ನೀಡಿದ ಕೆಲವು ಮಾಹಿತಿಗಳ  ಆಧಾರದ ಮೇಲೆ  ಈ ತನಿಖೆಯನ್ನು ಜಾರಿ ನಿರ್ದೇಶನಾಲಯ ಕೈಗೊಂಡಿದೆ. ಸೂರತ್ ಮೂಲದ ವಜ್ರ ವ್ಯಾಪಾರ ಕಂಪನಿಯೊಂದು ನಡೆಸುತ್ತಿರುವ ಬೃಹತ್  ಹವಾಲ ಜಾಲದ ಕುರಿತು ಅಹಮದಾಬಾದ್ ನ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದ್ದಾಗ ಈ ಹಗರಣ ಬೆಳಕಿಗೆ ಬಂದಿದೆ. ರು. 10 ಸಾವಿರ ಕೋಟಿಗಳನ್ನು ಅಕ್ರಮವಾಗಿ ದುಬೈಗೆ ವರ್ಗಾವಣೆ  ಮಾಡಿರುವುದಕ್ಕೆ ಸಂಬಂಧಿಸಿದ ಸಾಕ್ಷಿಗಳು ಜಾರಿ ನಿರ್ದೇಶನಾಲಯಕ್ಕೆ ಸಿಕ್ಕಿದೆ.

ಇತ್ತೀಚೆಗೆ ಅಹಮದಾಬಾದ್ ಜಾರಿ ನಿರ್ದೇಶನಾಲಯ ಘಟಕ ಹವಾಲ ವ್ಯವಹಾರಕ್ಕೆ ಸಂಬಂಧಿಸಿದಂತೆ ಅಫ್ರೋಜ್ ಘಟ್ಟಾ, ಮದಲ್ ಲಾಲ್ ಜೈನ್ , ಮನೀಷ್ ಷಾ ಮತ್ತು ರಾಕೇಶ್ ಕೊಥಾರಿರನ್ನು ಬಂಧಿಸಿದೆ. ಮನ್ಸೂಕ್‍ಲಾಲ್ ಸಿಂಘ್ವಿ  ಮತ್ತು ದಿಲ್‍ರಾಜ್ ಜೈನ್ ಎಂಬುವರು ತಲೆ ಮರೆಸಿಕೊಂಡಿದ್ದು ವಾರೆಂಟ್ ಜಾರಿ ಮಾಡಲಾಗಿದೆ. ಈ ಹಗರಣದ ಪ್ರಮುಖ ವ್ಯಕ್ತಿ ಎಂದು ಹೇಳಲಾಗಿರುವ ಪೃಥ್ವಿರಾಜ್ ಕೊಥಾರಿಯನ್ನು ಬಂಧಿಸಲು ಜಾರಿ ನಿರ್ದೇಶನಾಲಯ ಬಲೆ ಬೀಸಿದೆ. ಪೃಥ್ವಿರಾಜ್  ಕೊಥಾರಿ ವೃದ್ಧಿಸಿದ್ಧಿ ಬುಲಿಯನ್ ಕಂಪನಿ ಮಾಲೀಕನಾಗಿದ್ದು  ಬೃಹತ್ ಹವಾಲ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ವರದಿಗಳು ಹೇಳಿವೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತದ ಮೇಲೆ ಶೇ.50 ರಷ್ಟು ಸುಂಕಾಸ್ತ್ರ ಜಾರಿ: ಕೊನೆಗೆ ಒಟ್ಟಿಗೆ ಸೇರ್ತಿವಿ! US ಖಜಾನೆ ಮುಖ್ಯಸ್ಥ ಹಿಂಗ್ಯಾಕಂದ್ರು?

ಸಶಸ್ತ್ರ ಪಡೆಗಳು ಮುಂದಿನ ಭದ್ರತಾ ಸವಾಲುಗಳಿಗೆ ಸಿದ್ಧರಾಗಿರಬೇಕು: ರಾಜನಾಥ್ ಸಿಂಗ್

ಹಿಂದೂ ನಂಬಿಕೆ ಒಡೆಯುತ್ತಿರುವ ಬಾನು ಮುಷ್ತಾಕ್: ಶಿವನ ಬೆಟ್ಟವನ್ನೇ 'ಯೇಸು ಬೆಟ್ಟ' ಮಾಡಲು ಹೊರಟವರಿಂದ ಧರ್ಮದ ಪಾಠ ಬೇಡ- ಪ್ರತಾಪ್ ಸಿಂಹ

2030 Commonwealth Games: ಭಾರತದ ಬಿಡ್‌ಗೆ ಕೇಂದ್ರ ಸಂಪುಟ ಅನುಮೋದನೆ! ಅಹಮದಾಬಾದ್ ನಲ್ಲಿ ಆಯೋಜಿಸುವ ಪ್ರಸ್ತಾಪ!

'ಡೆವಿಲ್‌' ಸಿನಿಮಾದ '‘ಇದ್ರೆ ನೆಮ್ಮದಿಯಾಗ್ ಇರ್ಬೇಕ್' ಹಾಡಿಗೆ ಭರ್ಜರಿ ಸ್ಟೆಪ್ ಹಾಕಿದ ವಿನೋದ್ ರಾಜ್! Video

SCROLL FOR NEXT