ಸ್ಪೈವೇರ್ 
ದೇಶ

ಇಟಲಿ ಕಂಪನಿಯಿಂದ ಹ್ಯಾಕಿಂಗ್ ಸಾಫ್ಟ್ ವೇರ್ ಖರೀದಿಸಿದ್ದ ಯುಪಿಎ!

ದೂರವಾಣಿ ಕದ್ದಾಲಿಸುವ, ಕಂಪ್ಯೂಟರ್ ಮಾಹಿತಿ ಕದಿಯಲು ನೆರವು ನೀಡುವ ಸಾಫ್ಟ್ ವೇರ್ ಗಳನ್ನು ಪೂರೈಸುವ ಇಟಲಿಯ ವಿವಾದಾತ್ಮಕ...

ಲಂಡನ್: ದೂರವಾಣಿ ಕದ್ದಾಲಿಸುವ, ಕಂಪ್ಯೂಟರ್ ಮಾಹಿತಿ ಕದಿಯಲು ನೆರವು ನೀಡುವ ಸಾಫ್ಟ್ ವೇರ್ ಗಳನ್ನು ಪೂರೈಸುವ ಇಟಲಿಯ ವಿವಾದಾತ್ಮಕ ಕಂಪನಿಗೆ
ಭಾರತದಲ್ಲೂ ಗ್ರಾಹಕರಿದ್ದಾರಂತೆ! ಭಾರತೀಯ ಗುಪ್ತಚರ ಸಂಸ್ಥೆ, ವಿವಿಧ ರಾಜ್ಯ ಪೊಲೀಸರ ಜತೆಗೆ ಯುಪಿಎ ಸರ್ಕಾರದ ಹೆಸರೂ ಗ್ರಾಹಕರ ಪಟ್ಟಿಯಲ್ಲಿದೆ. ವಿಕಿಲೀಕ್ಸ್ ಬಿಡುಗಡೆ ಮಾಡಿದ ಇ-ಮೇಲ್‍ಗಳಿಂದ ಈ ಸತ್ಯಬಹಿರಂಗವಾಗಿದೆ ಎಂದು ``ಎನ್‍ಡಿಟಿವಿ'' ವರದಿ ಮಾಡಿದೆ.
ಗಿಜ್ಮೊಡೋ ಹ್ಯಾಕಿಂಗ್ ತಂಡ ಕಂಪನಿ ಕಾನೂನು ರೀತಿಯಲ್ಲಿ ದೂರವಾಣಿ ಕದ್ದಾಲಿಸುವ ಸಾಫ್ಟ್ ವೇರ್  ಅಭಿವೃದ್ಧಿಪಡಿಸುತ್ತಿರುವುದಾಗಿ ಹಾಗೂ ಇವುಗಳನ್ನು ವಿಶ್ವಾದ್ಯಂತ ಗುಪ್ತಚರ ಸಂಸ್ಥೆಗಳು, ಪೊಲೀಸರು ಬಳಸುತ್ತಿರುವುದಾಗಿ ಹೇಳಿದೆ. ಆದರೆ, ಅಂತಾರಾಷ್ಟ್ರೀಯ ಮಾಧ್ಯಮಗಳ ಪ್ರಕಾರ, ಇಟಲಿಯ ಈ ಕಂಪನಿ ಮಾರಾಟ ಮಾಡುತ್ತಿರುವ ಕೆಲ ಸಾಫ್ಟ್ ವೇರ್‍ಗಳನ್ನು ಬ್ಲ್ಯಾಕ್‍ಬೆರ್ರಿ, ಆಂಡ್ರಾಯ್ಡ್  ಆ್ಯ ಪಲ್ ಫೋನ್‍ಗಳಿಗೆ ಮೊದಲೇ ಲೋಡ್ ಮಾಡಬಹುದು. ಈ ತಂತ್ರಜ್ಞಾನ ವನ್ನು ಕಂಪನಿ ರಷ್ಯಾ, ಸೌದಿ ಅರೇಬಿಯಾ ಸೇರಿ ಮಾನವ ಹಕ್ಕುಗಳ ಉಲ್ಲಂಘನೆಗೆ ಹೆಸರುವಾಸಿಯಾದ ಇತರೆ ದೇಶಗಳಿಗೂ ಮಾರಾಟ ಮಾಡಿದೆ. ಇದೊಂದು ವಿಶ್ವದ ಕುಪ್ರಸಿದಟಛಿ ಕಣ್ಗಾವಲು ಸಾಫ್ಟ್ ವೇರ್ ಕಂಪನಿ. ಇದರ ಇ-ಮೇಲ್‍ವೊಂದರಲ್ಲಿ ಭಾರತದಲ್ಲಿ ಕಣ್ಗಾವಲು ಸಾಫ್ಟ್ ವೇರ್, ಸಾಧನಗಳಿಗೆ ಬಹುದೊಡ್ಡ ಮಾರುಕಟ್ಟೆಯಿದೆ ಎಂದೂ ಹೇಳಲಾಗಿದೆ. ಆಘಾತಕಾರಿ ಅಂಶವೆಂದರೆ ಪಾಕ್ ಕೂಡ ಇದರ ಗ್ರಾಹಕ. ವಿಕಿಲೀಕ್ಸ್ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ, ಕಂಪನಿಯ ಕಾರ್ಯನಿರ್ವಾಹಕ ಅಧಿಕಾರಿಗಳು 2014 ರ ಫೆಬ್ರವರಿಯಲ್ಲಿ ಭಾರತಕ್ಕೆ ಪ್ರವಾಸ ಮಾಡಿದ್ದಾರೆ. ಫೋನ್ ಕದ್ದಾಲಿಕೆ ಸಾಫ್ಟ್ ವೇರ್‍ಗಳನ್ನು ಯಾವ ರೀತಿ ಬಳಸಬೇಕು ಎನ್ನುವ ಕುರಿತು ಪ್ರದರ್ಶನ ನೀಡಿದ್ದಾರೆ. ಇಟಲಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯ
ನಿರ್ದೇಶನದಂತೆ ಕಂಪನಿ ಅಧಿಕಾರಿಗಳು ಭಾರತಕ್ಕೆ ಭೇಟಿ ನೀಡಿದ್ದರು. ಭಾರತದ ಜತೆಗೆ ವ್ಯವಹಾರ ಕುದುರಿಸಲು ಈ ಕಂಪನಿ ಇಸ್ರೇಲ್ ಮೂಲದ ಕಂಪನಿಯಾದ ಎನ್
ಐಸಿಇ ಜತೆಗೆ ಸಹಭಾಗಿತ್ವ ಮಾಡಿಕೊಂಡಿತ್ತು ಎನ್ನಲಾಗಿದೆ. ಆಂಧ್ರಪೊಲೀಸರು ಮಾತ್ರವಲ್ಲದೆ, ಮಹಾರಾಷ್ಟ್ರ, ದೆಹಲಿ ಮತ್ತು ಕರ್ನಾಟಕ ಪೊಲೀಸರು ಈ ಕಂಪನಿಯ ಹ್ಯಾಕಿಂಗ್ ಸಾಫ್ಟ್  ವೇರ್ ಬಳಸುತ್ತಿದ್ದಾರೆ ಎಂದು ಬ್ಯುಸಿನೆಸ್ ಟುಡೆ ವರದಿ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

ಹಗರಣ ರಹಿತ ಹುದ್ದೆ ಭರ್ತಿಗೆ ಕ್ರಮ: ಯುವಕರು ಧೈರ್ಯವಾಗಿರಿ, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ, ಸದ್ಯದಲ್ಲೇ ಸಂದೇಶ ನೀಡುತ್ತೇವೆ; ಡಿ ಕೆ ಶಿವಕುಮಾರ್

ದಲಿತಾಸ್ತ್ರದ ಮೂಲಕ ಕಟ್ಟಿಹಾಕಲು ಸಿದ್ದು ಬಣ ಕಸರತ್ತು: ತೆರಮರೆಯಲ್ಲಿ ಡಿಕೆಶಿ ಬೆಂಬಲಿಗರ ಮಸಲತ್ತು; ಅಂತರ್ಯುದ್ಧದಲ್ಲಿ ಯಾರಿಗಿದೆ ಗೆಲ್ಲುವ ತಾಕತ್ತು?

Gold Rate Today: ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟಿದೆ? ಇಲ್ಲಿದೆ ವಿವರ...

ಆರೋಗ್ಯ ಇಲಾಖೆಯಿಂದ ಉರ್ದು ಭಾಷೆ ಆಹ್ವಾನ ಪತ್ರಿಕೆ: ಜನರನ್ನು ದಾರಿ ತಪ್ಪಿಸಲೇಬೇಕು ಎಂಬ ಹಠಕ್ಕೆ ಬಿದ್ದಿದ್ದೀರಾ?

SCROLL FOR NEXT