ದೇಶ

ಹಿಂಸಾಚಾರಕ್ಕೆ ತಿರುಗಿದ ಕ್ರಿಕೆಟ್ ಪಂದ್ಯ: ಓರ್ವ ವಿದ್ಯಾರ್ಥಿ ಸಾವು

Srinivas Rao BV

ಶ್ರೀಕಾಕುಳಂ: ಕ್ರಿಕೆಟ್ ಆಡುತ್ತಿದ್ದ ವೇಳೆ ಎರಡು ಬಣಗಳ ನಡುವೆ ನಡೆದ ವಾಗ್ವಾದ ವಿಕೋಪಕ್ಕೆ ತಿರುಗಿ ಓರ್ವ ಯುವಕ ಸಾವನ್ನಪ್ಪಿರುವ ಘಟನೆ ಆಂಧ್ರಪ್ರದೇಶದ ಶ್ರೀಕಾಕುಳಂ ನಲ್ಲಿ ನಡೆದಿದೆ.

ಸ್ಥಳೀಯ ಮೈದಾನದಲ್ಲಿ ಎರಡು ತಂಡಗಳು ಕ್ರಿಕೆಟ್ ಆಡುತ್ತಿದ್ದವು. ಕ್ಷುಲ್ಲಕ ಕಾರಣಕ್ಕಾಗಿ ಎರಡು ತಂಡಗಳ ನಡುವೆ ಉಂಟಾದ ವಾಗ್ವಾದ ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಪಟ್ಟ ಅಜಯ್ ಕುಮಾರ್ ಎಂಬ ಪದವಿ ವಿದ್ಯಾರ್ಥಿ ಮೇಲೆ ವಿರೋಧಿ ತಂಡದ ಸದಸ್ಯ ಕಿಶೋರ್ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಹಲ್ಲೆಗೊಳಗಾದ ಅಜಯ್ ಕುಮಾರ್ ಸಾವನ್ನಪ್ಪಿದ್ದಾನೆ.

ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ 21 ವರ್ಷದ ಕಿಶೋರ್, ಕುಮಾರ್ ನ್ನು ಬ್ಯಾಟ್ ನಿಂದ ಥಳಿಸಿದ್ದಾನೆ. ತೀವ್ರವಾಗಿ ಗಾಯಗೊಂಡ ಅಜಯ್ ಕುಮಾರ್ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ಎಸ್.ಪಿ ಎ.ಎಸ್ ಖಾನ್ ಅಪರಾಧಿಯನ್ನು ಬಂಧಿಸುವಂತೆ ಪೊಲೀಸರಿಗೆ ಆದೇಶ ನೀಡಿದ್ದಾರೆ.

SCROLL FOR NEXT