ಸಂಗ್ರಹ ಚಿತ್ರ 
ದೇಶ

ದೇವಾಲಯದ ಮುಂದೆ ಹಣದ ಮಳೆ ಸುರಿಸಿದ ಕೋತಿ

ಪ್ರವಾಸಕ್ಕೆಂದು ತೆರಳಿದ ಮಹಿಳೆಯ ಪರ್ಸ್ ಕಸಿದುಕೊಂಡ ಕೋತಿ ಮಾಡಿದ್ದೇನು ಗೊತ್ತಾ?...

ಆಗ್ರಾ: ಪ್ರವಾಸಕ್ಕೆಂದು ತೆರಳಿದ ಮಹಿಳೆಯ ಪರ್ಸ್ ಕಸಿದುಕೊಂಡ ಕೋತಿ ಮಾಡಿದ್ದೇನು ಗೊತ್ತಾ? ಪರ್ಸ್ ನಲ್ಲಿದ್ದ 1.5 ಲಕ್ಷ ಹಣವನ್ನು ಎರಚಾಡಿದೆ.

ಹೌದು, ಮುಂಬೈನ ಬೊರಿವಿಲಿಯಿಂದ ಆಗ್ರಾ, ಮಥುರಾ ಹಾಗೂ ಬೃಂದಾವನ ವೀಕ್ಷಿಸಲು ಆಗಮಿಸಿದ್ದ ಕುಟುಂಬವೊಂದರ ಮಹಿಳೆ ಬಳಿ ಇದ್ದ ಬ್ಯಾಗನ್ನು ಬಂಕಿ ಬಿಹಾರಿ ದೇವಾಲಯದ ಬಳಿ ಇದ್ದ ಕೋತಿಯೊಂದು ಕಸಿದಿದೆ. ನಂತರ ಅದರಲ್ಲಿದ್ದ ರು.500 ಮುಖ ಬೆಲೆಯ ಸುಮಾರು ರು. 1.50 ಲಕ್ಷವನ್ನು ಒಂದೊಂದಾಗಿ ಎಸೆದಿದೆ. ಈ ರೀತಿ ಮೇಲಿಂದ ಹಣ ಬೀಳುತ್ತಿದ್ದಂತೆ ಅಲ್ಲಿ ದೇವರ ದರ್ಶನಕ್ಕೆ ಆಗಮಿಸಿದ್ದ ಕೆಲ ಭಕ್ತಾದಿಗಳು ಹಾಗೂ ದೇವಾಲಯದ ಬಳಿ ವ್ಯಾಪಾರ ಮಾಡುತ್ತಿದ್ದ ಮಹಿಳೆಯರು, ಮಕ್ಕಳು ಮತ್ತು ಭಿಕ್ಷುಕರು ಬಿಟ್ರೆ ಸಿಗಲ್ಲ ಎಂಬಂತೆ ನೋಟುಗಳನ್ನು ಆಯ್ದುಕೊಂಡಿದ್ದಾರೆ.

ಕೆಲವರು ಕ್ಷಣಾರ್ಧದಲ್ಲೇ ನಾಲ್ಕೈದು ಸಾವಿರ ರೂ. ಗಳನ್ನು ಸಂಗ್ರಹಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಆದರೆ ತಮ್ಮ ಬಳಿ ಇದ್ದ ಲಕ್ಷಾಂತರ ರುಪಾಯಿ ಅನ್ಯಾಯವಾಗಿ ಬೇರೆಯವರ ಪಾಲಾಗುತ್ತಿರುವುದನ್ನು ಕಂಡರೂ, ಹಣ ಕಳೆದುಕೊಂಡವರು ಅಸಹಾಯಕರಾಗಿ ನೋಡುತ್ತಾ ನಿಂತಿದ್ದರು.

ವೃಂದಾವನದಲ್ಲಿ ಕೋತಿಗಳ ಹಾವಳಿ ಹೆಚ್ಚಾಗಿದ್ದು, ಈ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದರೂ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಇಲ್ಲಿರುವ ಮಂಗಗಳು ಅಲ್ಲಿ ಬರುವಂತಹ ಪ್ರವಾಸಿಗರ ಬಳಿ ಇರುವ ಸನ್ ಗ್ಲಾಸ್, ಕ್ಯಾಮೆರಾ, ಫೋನ್ ಸೇರಿದಂತೆ ವಿವಿಧ ಬೆಲೆಯುಳ್ಳ ವಸ್ತುಗಳನ್ನು ಕಸಿದು ಪರಾರಿಯಾಗುತ್ತವೆ. ಕಳೆದ ಬಾರಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಭೇಟಿ ನೀಡಿದ್ದ ಸಂದರ್ಭದಲ್ಲಿ, ಇದೇ ರೀತಿ ಕೋತಿ ಹಾವಳಿಯಿಂದಾಗಿ 75 ವರ್ಷದ ವೃದ್ಧರೊಬ್ಬರು ಮೃತಪಟ್ಟಿದ್ದರು. ಈ ಬಗ್ಗೆ ಪ್ರಣಬ್ ಮುಖರ್ಜಿ ಅವರು ಎಚ್ಚರಿಸಿದ್ದರು.

ಇಂತಹ ಘಟನೆಗಳು ತಮ್ಮ ಗಮನಕ್ಕೆ ಬಂದಿದೆ ಎಂದಿರುವ ಅಲ್ಲಿನ ಸ್ಥಳೀಯ ಪೊಲೀಸರು, ಈ ಘಟನೆ ಬಗ್ಗೆ ಯಾವುದೇ ಅಧಿಕೃತ ದೂರು ಬಂದಿಲ್ಲ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT