ಘಟನೆಗೆ ಸಂಬಂಧಿಸಿದ ಚಿತ್ರ 
ದೇಶ

ಗೌಹಾಟಿಯಲ್ಲಿ ಮಹಿಳೆಯನ್ನು ಮಾಟಗಾತಿ ಎಂದು ವಿವಸ್ತ್ರಗೊಳಿಸಿ ಶಿರಚ್ಚೇಧ

ಮನುಷ್ಯರೇ ನಡೆಸಿದ ಈ ಪೈಶಾಚಿಕ ಘಟನೆಯಲ್ಲಿ ೬೩ ವರ್ಷದ ಮಹಿಳೆಯೊಬ್ಬಳನ್ನು ಮಾಟಗಾತಿ ಎಂದು ದೂರಿ ಅವಳನ್ನು ನಗ್ನಗೊಳಿಸಿ ತಲೆ ಕತ್ತರಿಸಿರುವ

ಗೌಹಾಟಿ: ಮನುಷ್ಯರೇ ನಡೆಸಿದ ಈ ಪೈಶಾಚಿಕ ಘಟನೆಯಲ್ಲಿ ೬೩ ವರ್ಷದ ಮಹಿಳೆಯೊಬ್ಬಳನ್ನು ಮಾಟಗಾತಿ ಎಂದು ದೂರಿ ಅವಳನ್ನು ನಗ್ನಗೊಳಿಸಿ ತಲೆ ಕತ್ತರಿಸಿರುವ ಘಟನೆ ಅಸ್ಸಾಮಿನ ಗ್ರಾಮವೊಂದರಲ್ಲಿ ವರದಿಯಾಗಿದೆ.

ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಗಡಿಯಲ್ಲಿರುವ ಬಿಸ್ವನಾಥ್ ಚರೈಲಿ ಜಿಲ್ಲೆಯ ನಂ ೧ ಭೀಮಜೂಲಿ ಗ್ರಾಮದಲ್ಲಿ ಈ ಘಟನೆಯ ವರದಿಯಾಗಿದೆ.

ಸಂತ್ರಸ್ತೆ ಪೋನಿ ಉರಂಗ್ ಐದು ಮಕ್ಕಳ ತಾಯಿ ಬುಡಕಟ್ಟು ಜನಾನಂಗಕ್ಕೆ (ಟಿ ಬುಡಕಟ್ಟು ಸಮುದಾಯ) ಸೇರಿದವಳು. ಇವಳನ್ನು ಕಬ್ರಿ ಸಮುದಾಯಕ್ಕೆ ಸೇರಿದ ಪುರುಷರ ಗುಂಪೊಂದು ಶಿರಚ್ಚೇದ್ಧ ಮಾಡಿದೆ.

ಈ ಘಟನೆಗೆ ಸಂಬಧಿಸಿದಂತೆ ಪೊಲೀಸರು ಏಳು ಜನರನ್ನು ಬಂಧಿಸಿದ್ದಾರೆ.

"ಮಧ್ಯಾಹ್ನದ ವೇಳೆಯ ಜನರ ಗುಂಪೊಂದು ಪೋನಿ ಮನೆಗೆ ಲಗ್ಗೆ ಹಾಕಿ ನದಿ ಬಳಿಗೆ ಎಳೆದೊಯ್ದು ಮಚ್ಚಿನಿಂದ ಕತ್ತು ಕತ್ತರಿಸಿದ್ದಾರೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಗ್ರಾಮದ ಢೋಂಗಿ ವೈದ್ಯೆ ಅಣಿಮಾ ರೊಂಘಾಂಗ್ಪಿ, ಪೋನಿಯನ್ನು ಮಾಟಗಾತಿ-ಮಂತ್ರವಾದಿ ಎಂದು ಹೇಳಿದ್ದಕ್ಕೆ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ. ಈ ವೈದ್ಯೆ ಗ್ರಾಮದಲ್ಲಾದ ರೋಗಗಳಿಗೆ ಮತ್ತು ಸಾವಿಗೆ ಪೋನಿಯೇ ಕಾರಣ ಎಂದು ತಿಳಿಸಿದ್ದಳು ಎಂದು ತಿಳಿದುಬಂದಿದೆ. ತಲೆಮರೆಸಿಕೊಂಡಿರುವ ರೊಂಘಾಂಗ್ಪಿಗಾಗಿ ಹುಡುಕಾಟ ನಡೆದಿದೆ.

"ಸೋಮವಾರ ಪರಿಸ್ಥಿತಿ ಉದ್ವಿಘ್ನವಾಗಿತ್ತು. ಈಗ ನಿಯಂತ್ರಣದಲ್ಲಿದೆ. ಇದು ಎರಡು ಸಮುದಾಯದ ನಡುವಿನ ಕಾದಾಟವಾಗಿರುವುದರಿಂದ ನಾವು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಅಗತ್ಯ ಭದ್ರತಾ ಪಡೆಯನ್ನು ನೇಮಿಸಿದ್ದೇವೆ" ಎಂದು ಎಸ್ ಪಿ ಮನಬೇಂದ್ರ ರಾಯ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 30 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಬೂಕರ್ ಪ್ರಶಸ್ತಿ ಮಹತ್ವ ತಿಳಿದಿದ್ದರೆ ನನ್ನನ್ನು ಟೀಕಿಸುತ್ತಿರಲಿಲ್ಲ, ಸಾಹಿತ್ಯ ಸಮ್ಮೇಳನದ ವಿಡಿಯೋ ತಿರುಚಲಾಗಿದೆ: ಬಾನು ಮುಷ್ತಾಕ್

ಡಿಕೆಶಿ RSS ಗೀತೆ ಹೇಳಿದ್ದೂ ರಾಹುಲ್‌ ಗಾಂಧಿಗೆ ತಲುಪಲಿ: ಶಾಕ್ ಕೊಟ್ಟ ಸತೀಶ್‌ ಜಾರಕಿಹೊಳಿ ಹೇಳಿಕೆ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

SCROLL FOR NEXT