ಅಸಾರಾಂ ಬಾಪು(ಸಂಗ್ರಹ ಚಿತ್ರ) 
ದೇಶ

ಅಸಾರಾಂ ಬಾಪುಗಾಗಿ ಕೊಲೆ ಮಾಡಲು 2000 ಅನುಯಾಯಿಗಳು ಸಿದ್ಧ

ಅಸಾರಾಂ ಬಾಪು ಪರ ಸಾಯಲು ಅಥವಾ ಸಾಯಿಸಲು 2000 ಅನುಯಾಯಿಗಳು ಸಿದ್ಧರಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಕೃಪಾಲ್ ಸಿಂಗ್ ಕೊಲೆ ಆರೋಪಿ...

ಅಸಾರಾಂ ಬಾಪು ಪರ ಸಾಯಲು ಅಥವಾ ಸಾಯಿಸಲು 2000 ಅನುಯಾಯಿಗಳು ಸಿದ್ಧರಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಕೃಪಾಲ್ ಸಿಂಗ್ ಕೊಲೆ ಆರೋಪಿ ನಾರಾಯಣ ಪಾಂಡೆ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.

ಅಸಾರಾಂ ಬಾಪು ವಿರುದ್ಧದ ಅತ್ಯಾಚಾರ ಪ್ರಕರಣದಲ್ಲಿ ಸಾಕ್ಷಿ ನುಡಿದಿದ್ದ ಕೃಪಾಲ್ ಸಿಂಗ್ ನನ್ನು ಕೊಲೆ ಮಾಡಿದ್ದ ಆರೋಪದ ಮೇಲೆ ನಾರಾಯಣ ಪಾಂಡೆಯನ್ನು ಪೊಲೀಸರು ಬಂಧಿಸಿದ್ದರು. ಪಾಂಡೆ ವಿಚಾರಣೆ ವೇಳೆ ಕೆಲ ಆಘಾತಕಾರಿ ಸುದ್ದಿಗಳನ್ನು ಪಾಂಡೆ ನೀಡಿದ್ದು, ಬಾಪು ಪರವಾಗಿ ಯಾರೇ ಸಾಕ್ಷಿ ನುಡಿದರು ಅವರನ್ನು ಹತ್ಯೆ ಮಾಡಲು 2 ಸಾವಿರ ಅನುಯಾಯಿಗಳು ಸರ್ವಸನ್ನದ್ಧರಾಗಿದ್ದಾರೆ ಎಂದು ಹೇಳಿದ್ದಾನೆ.

ತನ್ನ ದುಷ್ಕೃತ್ಯವನ್ನು ಮರೆಮಾಚುವ ಸಲುವಾಗಿ ಪಾಂಡೆ ನಾನು ಕ್ರಿಮಿನಲ್ ಅಲ್ಲ. ನಾನು ಎನೇ ಮಾಡಿದ್ದರು ಅದು ಬಾಪುಜಿಗಾಗಿ. ಪ್ರಕರಣವನ್ನು ಹಿಂತೆಗೆದುಕೊಳ್ಳಲು ಸಂತ್ರಸ್ಥೆ ತಂದೆಗೆ 50 ಲಕ್ಷ ಹಾಗೂ ಸಾಕ್ಷಿ ಕೃಪಾಲ್ ಸಿಂಗ್ ಗೆ 25 ಲಕ್ಷ ಬೇಡಿಕೆಯನ್ನು ಅಸಾರಾಂ ಬಾಪುವಿನ ನಿಕಟವರ್ತಿ ಇಟ್ಟಿದ್ದರು. ಇದಕ್ಕೆ ಒಪ್ಪದಕ್ಕೆ ಕೃಪಾಲ್ ಸಿಂಗ್ ನನ್ನು ಹತ್ಯೆ ಮಾಡಲಾಯಿತು ಎಂದು ನಾರಾಯಣ ಪಾಂಡೆ ಹೇಳಿದ್ದಾನೆ.

ಪಾಂಡೆ ಹೇಳಿಕೆ ಹಿನ್ನೆಲೆಯಲ್ಲಿ ಪ್ರಕರಣದ ಪ್ರಮುಖ ಸಾಕ್ಷಿಗಳಿಗೆ ಭದ್ರತೆ ಒದಗಿಸಲಾಗಿದೆ ಎಂದು ಸಜ್ಜನ್ ಪುರ ಪೊಲೀಸ್ ವರಿಷ್ಠಾಧಿಕಾರಿ ಬಾಬ್ಲೋ ಕುಮಾರ್ ಹೇಳಿದ್ದಾರೆ.

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಸ್ವಯಂ ಘೋಷಿತ ದೇವಮಾನವ 72 ವರ್ಷದ ಅಸಾರಾಂ ಬಾಪು ಇದೀಗ ಸೆರೆಮನೆಯಲ್ಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮಹಾರಾಷ್ಟ್ರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ: DCM ಆಗಿ ಅಜಿತ್‌ ಪವಾರ್‌ ಪತ್ನಿ ಸುನೇತ್ರಾ ಆಯ್ಕೆ, ಇಂದು ಸಂಜೆ 5ಕ್ಕೆ ಪ್ರಮಾಣವಚನ ಸ್ವೀಕಾರ?

ರಾಜ್ಯಪಾಲರ ಭಾಷಣ ವಸಾಹತುಶಾಹಿ ಹ್ಯಾಂಗೊವರ್: ಮುಂದುವರೆಸುವ ಔಚಿತ್ಯದ ಬಗ್ಗೆ ಗಂಭೀರ ಚರ್ಚೆಯಾಗಲಿ; ಸುರೇಶ್‌ಕುಮಾರ್‌

ಫೆಬ್ರವರಿ 1 ಕೇಂದ್ರ ಬಜೆಟ್: ಭಾನುವಾರದಂದೇ ಆಯವ್ಯಯ ಮಂಡಿಸುತ್ತಿರುವುದೇಕೆ; ಬ್ರಿಟೀಷ್ ಯುಗದ ಸಂಪ್ರದಾಯ ಮುರಿದದ್ದು ಯಾರು?

ಕರ್ನಾಟಕದ ತೆರಿಗೆ ಪಾಲು ಕನಿಷ್ಟ ಶೇ.4.7 ಮರು ನಿಗದಿಯಾಗಲಿ: ನ್ಯಾಯಕ್ಕಾಗಿ ಕನ್ನಡಿಗರ ಹೋರಾಟ ಹೆಸರಲ್ಲಿ ಸಿಎಂ ಸಿದ್ದರಾಮಯ್ಯ ಅಭಿಯಾನ

ಜ.28ರಿಂದಲೂ ವಿಚಾರಣೆ ನಡೆಸುತ್ತಿದ್ದರು, ರಾಯ್ ಸಾವಿಗೆ IT ಕಿರುಕುಳವೇ ಕಾರಣ: ಸಹೋದರ ಸಿಜೆ.ಬಾಬು ಗಂಭೀರ ಆರೋಪ

SCROLL FOR NEXT