ಅಬ್ದುಲ್ ಕಲಾಂ 
ದೇಶ

ಅಬ್ದುಲ್ ಕಲಾಂ ನಿಧನಕ್ಕೆ ಗಣ್ಯರ ಸಂತಾಪ ನುಡಿಗಳು

ಕಲಾಂ ಅವರ ನಿಧನ ನನಗೆ ತುಂಬಾ ನಷ್ಟವುಂಟು ಮಾಡಿದೆ. ಅವರೊಂದಿಗಿನ ನನ್ನ ಬಾಂಧವ್ಯ ಸದಾ ನೆನಪಿನಲ್ಲಿರುವಂಥದು. ರಾಷ್ಟ್ರಪತಿಯಾಗಿ ಅವರ ಜನಪ್ರಿಯತೆ ಅಪ್ರತಿಮ...

ಕಲಾಂ ಅವರ ನಿಧನ ನನಗೆ ತುಂಬಾ ನಷ್ಟವುಂಟು ಮಾಡಿದೆ. ಅವರೊಂದಿಗಿನ ನನ್ನ ಬಾಂಧವ್ಯ ಸದಾ ನೆನಪಿನಲ್ಲಿರುವಂಥದು. ರಾಷ್ಟ್ರಪತಿಯಾಗಿ ಅವರ ಜನಪ್ರಿಯತೆ ಅಪ್ರತಿಮ. ಡಾ. ಕಲಾಂ ಜನರ ರಾಷ್ಟ್ರಪತಿಯಾಗಿದ್ದರು ಮತ್ತು ಮುಂದೆಯೂ ಹಾಗೇ ಇರುತ್ತಾರೆ.
-ಪ್ರಣಬ್ ಮುಖರ್ಜಿ, ರಾಷ್ಟ್ರಪತಿ

ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಕ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ದ  ಕಲಾಂಜೀ ಒಬ್ಬ ನಿಜ ಮಾರ್ಗದರ್ಶಕ. ಅವರೊಂದಿಗಿನ ನನ್ನ ಒಡನಾಟ ಸದಾ ಸ್ಮರಣೀಯ
-ನರೇಂದ್ರ ಮೋದಿ ಪ್ರಧಾನ ಮಂತ್ರಿ

ನನ್ನ ಆತ್ಮೀಯ ಸ್ನೇಹಿತ ಹಾಗೂ ಅದ್ಭುತ ವಿಜ್ಞಾನಿಯೊಬ್ಬರನ್ನು ಕಳೆದುಕೊಂಡು ನಾನು ಬಡವಾಗಿದ್ದೇನೆ. ಅಬ್ದುಲ್ ಕಲಾಂ ಜತೆಗಿನ ನನ್ನ ಸ್ನೇಹ 40 ವರ್ಷದಷ್ಟು ಸುದೀರ್ಘದ್ದು.
- ಸಿ.ಎನ್.ಆರ್.ರಾವ್, ಭಾರತ ರತ್ನ

ವಿಜ್ಞಾನ, ಬಾಹ್ಯಾಕಾಶ ಕ್ಷೇತ್ರಕ್ಕೆ ಅಪರಿಮಿತ ಶ್ರಮಿಸಿ ಮಿಸೈಲ್ ಮ್ಯಾನ್ ಎಂದೆನಿಸಿಕೊಂಡಿದ್ದರು. ಮಕ್ಕಳ ಮೇಲೆ ಅಪಾರ ಪೀತಿ ಹೊಂದಿದ್ದರು.
- ಮಲ್ಲಿಕಾರ್ಜುನ ಖರ್ಗೆ

ಲೋಕಸಭೆಯ ವಿಪಕ್ಷದ ನಾಯಕ ಬೆಂಗಳೂರಿಗೆ ಬಂದಾಗ, ಕ್ರಯೋಜೆನಿಕ್ ಎಂಜಿನ್ ಕುರಿತ ಪ್ರಗತಿ ಕಂಡು ಹರ್ಷಿಸಿದ್ದರು. ಬಾಹ್ಯಾಕಾಶದಲ್ಲಿ ಭಾರತ ಸ್ವಾವಲಂಬಿಯಾಗುವ ಕನಸು ಅವರದ್ದು.
- ಎ.ಎಸ್. ಕಿರಣಕುಮಾರ್, ಅಧ್ಯಕ್ಷ ಇಸ್ರೊ

ಯುವಜನತೆಯ ಒಡನಾಡಿ ಹಾಗೂ ಎಲ್ಲ ಮತದ ಜನರನ್ನು ಒಗ್ಗೂಡಿಸುವ ಕೆಲಸದಲ್ಲಿ ಸಕ್ರಿಯರಾಗಿದ್ದ ವ್ಯಕ್ತಿ. ಒಮ್ಮೆ, ನನ್ನೊಂದಿಗೆ ವೀಣೆ ಕೂಡ ನುಡಿಸಿದ್ದರು.
- ಶ್ರೀಶ್ರೀ ರವಿಶಂಕರ ಆರ್ಟ್ ಆಫ್ ಲಿವಿಂಗ್

ಬಡವ, ಶ್ರೀಮಂತ, ಯುವಜನಾಂಗ, ವಯೋವೃದ್ಧರೆನ್ನದೆ ದೇಶದ ಪ್ರತಿಯೊಬ್ಬ ಪ್ರಜೆಯೂ ಇಷ್ಟಪಡುತ್ತಿದ್ದ ವ್ಯಕ್ತಿ ಕಲಾಂ ನಿಧನದಿಂದ ದೇಶಕ್ಕೆ ಅಪಾರ ಹಾನಿ.
-ಅನಂತಕುಮಾರ ಕೇಂದ್ರ ಸಚಿವ

ಮಿಸೈಲ್ ಮ್ಯಾನ್ ಆಫ್ ಇಂಡಿಯಾ ಅಬ್ದುಲ್ ಕಲಾಂ ಅವರು ತಮ್ಮ ಮಿಷನ್ ಅನ್ನು ಕೊನೆಯ ಕ್ಷಣದವರೆಗೂ ನಿರ್ವಹಿಸಿದ್ದು, ವಿದ್ಯಾರ್ಥಿಗಳಿಗೆ ತಮ್ಮ ಅನುಭವ ಹಂಚಿದ್ದಾರೆ.
-ಎಸ್.ಎಂ. ಕೃಷ್ಣ ಮಾಜಿ ಮುಖ್ಯಮಂತ್ರಿ

ಅವರ ಕೊನೆಯ ಉಸಿರಿನವರೆಗೂ ತಮ್ಮ ದೃಷ್ಟಿಕೋನವನ್ನು ತಾವು ಅತಿಯಾಗಿ ಪ್ರೀತಿಸುತ್ತಿದ್ದ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದಾರೆ. ರಾಷ್ಟ್ರದ ಅತಿ ಶ್ರೇಷ್ಠ ರಾಷ್ಟ್ರಪತಿ ಕಲಾಂ.
-ಪ್ರಹ್ಲಾದ್ ಜೋಶಿ ಬಿಜೆಪಿ ರಾಜ್ಯಾಧ್ಯಕ್ಷ

ಕಲಾಂ ಅವರ ವಿಷನ್-2020ನಲ್ಲಿ ಅವರಿಗೆ ರಾಷ್ಟ್ರದ ಬಗ್ಗೆ ಇದ್ದ ಪ್ರೀತಿ ಮತ್ತು ದೂರದೃಷ್ಟಿ ಪ್ರತಿಫಲವಾಗಿತ್ತು. ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಅವರಿಂದ ಪ್ರೇರಣೆಗೊಂಡಿದ್ದೆ.
-ಎಚ್.ಡಿ. ಕುಮಾರಸ್ವಾಮಿ ಮಾಜಿ ಸಿಎಂ

ಮಕ್ಕಳಿಗೆ ಪ್ರೀತಿಯ ಕಾರಂಜಿಯಾಗಿ, ಯುವಕರಿಗೆ ಅನುಕರಿಸಬಹುದಾದ ಜ್ಞಾನಪರ್ವತವಾಗಿದ್ದ ಕಲಾಂ ಅವರು ಜನಸಾಮಾನ್ಯರ ರಾಷ್ಟ್ರಪತಿ ಎಂದೇ ಜನಜನಿತರಾಗಿದ್ದರು.
-ಸಿದ್ದರಾಮಯ್ಯ ಮುಖ್ಯಮಂತ್ರಿ

ಕಲಾಂ ಅವರು ಈ ದೇಶ ಕಂಡ ಅಪ್ರತಿಮ ನಾಯಕ. ಪ್ರಾಮಾಣಿಕವಾಗಿ ಹೇಳ್ತೇನೆ, ಅವರ ನಿಧನ ದೇಶಕ್ಕೆ ತುಂಬಲಾರದ ನಷ್ಟವಾಗಿದೆ.
-ಎಚ್ ಡಿ ದೇವೇಗೌಡ ಮಾಜಿ ಪ್ರಧಾನಿ

ಭಾರತ ರಾಷ್ಟ್ರಪತಿಗಳ ಪರಂಪರೆಗೆ ಘನತೆ, ಹೆಮ್ಮೆ ಮತ್ತು ಜ್ಞಾನದ ಸ್ಪರ್ಶ ನೀಡಿದ ಭಾರತದ ಮಿಸೈಲ್ ಮ್ಯಾನ್ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಆತ್ಮಕ್ಕೆ ಶಾಂತಿ ಸಿಗಲಿ.
-ರಾಜೀವ್ ಚಂದ್ರಶೇಖರ್ ಸಂಸದ

ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ನಿಧನಕ್ಕೆ ನಾನು ಸಂತಾಪ ವ್ಯಕ್ತಪಡಿಸುತ್ತೇನೆ. ನಾವು ದೇಶದ ಹೆಮ್ಮೆಯ ನಾಗರಿಕನನ್ನು ಕಳೆದುಕೊಂಡಿದ್ದೇವೆ.
-ಅರುಣ್ ಜೇಟ್ಲಿ ಹಣಕಾಸು ಸಚಿವ

ತನ್ನ ಪ್ರೀತಿ ಮತ್ತು ಬುದ್ಧಿಯಿಂದ ಇಡೀ ದೇಶದ ಹೃನ್ಮನ ಗೆದ್ದಿದ್ದ ಅಪರೂಪದ ವ್ಯಕ್ತಿಯ ಅಗಲಿಕೆ ನನಗೆ ಅಪಾರ ನೋವು ತಂದಿದೆ.
-ರಾಹುಲ್ ಗಾಂಧಿ ಕಾಂಗ್ರೆಸ್ ಉಪಾಧ್ಯಕ್ಷ

ಅವರು ಜ್ಞಾನ ಮತ್ತು ವಿಜ್ಞಾನ ಎರಡರಲ್ಲೂ ಸಾಟಿ ಇಲ್ಲದಂತೆ ಮೆರೆದವರು. ಒಂದು ಕ್ಷಣವೂ ಪೋಲಾಗದಂತೆ ಬದುಕಿದವರು.
-ಡಾ. ವೀರೇಂದ್ರ ಹೆಗ್ಗಡೆ ಧರ್ಮಸ್ಥಳ ಧರ್ಮಾಧಿಕಾರಿ

ಕಲಾಂ ಅವರ ನಿಧನದಿಂದ ರಾಷ್ಟ್ರ ನಿಜ ಭಾರತ ರತ್ನವನ್ನು ಕಳೆದುಕೊಂಡಿದೆ. ಅವರ ಸಾವಿನ ಸುದ್ದಿ ನಿಜಕ್ಕೂ ದುಃಖ ತಂದಿದೆ.
-ಅರವಿಂದ ಕೇಜ್ರಿವಾಲ್ ದಿಲ್ಲಿ ಮುಖ್ಯಮಂತ್ರಿ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ನನ್ನ ಕುರ್ಚಿ'ಗೆ ಪ್ರಧಾನಿ ಮೋದಿ ಗೌರವ ನೀಡಬೇಕು: ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕಿಡಿ!

SCROLL FOR NEXT