ಸೌರ ವಿದ್ಯುತ್ 
ದೇಶ

ಸೌರ ಉತ್ಪಾದನೆ ಗುರಿ ಹೆಚ್ಚಳ

ಏಳು ವರ್ಷಗಳೊಳಗೆ ಸೌರ ವಿದ್ಯುತ್ ಉತ್ಪಾದನೆ ಗುರಿಯನ್ನು ಕೇಂದ್ರ ಸರ್ಕಾರ ಐದು ಪಟ್ಟು ಹೆಚ್ಚಿಸಿದೆ. ಅಂದರೆ 2022ರ ವೇಳೆಗೆ 1 ಲಕ್ಷ ಮೆಗಾ ವ್ಯಾಟ್...

ನವದೆಹಲಿ:ಏಳು ವರ್ಷಗಳೊಳಗೆ ಸೌರ ವಿದ್ಯುತ್ ಉತ್ಪಾದನೆ ಗುರಿಯನ್ನು ಕೇಂದ್ರ ಸರ್ಕಾರ ಐದು ಪಟ್ಟು ಹೆಚ್ಚಿಸಿದೆ. ಅಂದರೆ 2022ರ ವೇಳೆಗೆ 1 ಲಕ್ಷ ಮೆಗಾ ವ್ಯಾಟ್ ಉತ್ಪಾದಿಸುವ ಗುರಿ
ಹೊಂದಿದೆ. ಇದಕ್ಕಾಗಿ 6 ಲಕ್ಷ ಕೋಟಿ ರು. ಬಂಡವಾಳ ತೊಡಗಿಸಬೇಕಾಗಲಿದೆ. ಜವಾಹರಲಾಲ್ ನೆಹರೂ ನ್ಯಾಷನಲ್ ಸೋಲಾರ್ ಮಿಷನ್(ಜೆಎನ್‍ಎನ್‍ಎಸ್‍ಎಂ) ಈ ಗುರಿ ತಲುಪಲು ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಸಭೆ ನಿರ್ಧರಿಸಿತು. ಕೇಂದ್ರ ಸರ್ಕಾರದ ಈ ನಿರ್ಧಾರ ಶುದ್ಧ ಮತ್ತು ಸುಸ್ಥಿರ ವಿದ್ಯುತ್ ಉತ್ಪಾದಿಸುವಲ್ಲಿ ದೊಡ್ಡ ಹೆಜ್ಜೆಯಾಗಿದೆ
ಎಂದು ಕೇಂದ್ರ ಸಂಪರ್ಕ ಮತ್ತು ಐಟಿ ಸಚಿವ ರವಿಶಂಕರ್ ಪ್ರಸಾದ್ ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಯೋಜನೆ ಸಾಕಾರ ಗೊಂಡ ನಂತರ ಸೌರ ವಿದ್ಯುತ್ ಉತ್ಪಾದನೆ ಯಲ್ಲಿ
ಭಾರತ ಜಗತ್ತಿನ ಅತಿದೊಡ್ಡ ದೇಶವಾಗಲಿದೆ ಎಂದಿದ್ದಾರೆ.
ಡಿಆರ್ ಡಿಒಗೆ ಭೂಮಿ ವರ್ಗಾವಣೆಗೆ ಅಸ್ತು: ಪಶ್ಚಿಮ ಬಂಗಾಳದ ಜಾದವ್ ವಿಶ್ವವಿದ್ಯಾಲಯದ ರಾಷ್ಟ್ರೀಯ ಉಪಕರಣ ವಿಭಾಗಕ್ಕೆ ಸೇರಿದ ಸ್ವಲ್ಪ ಭೂಮಿ ಮತ್ತು ಕಟ್ಟಡಗಳನ್ನು ರಕ್ಷಣಾ
ಸಂಶೋಧನಾ ಕೇಂದ್ರ ಸ್ಥಾಪನೆಗೆ ರಕ್ಷಣಾ ಸಂಶೋಧನೆ ಮತ್ತು ಅಬಿsವೃದಿಟಛಿ ಸಂಸ್ಥೆ (ಡಿಆರ್ ಡಿಒ)ಗೆ ವರ್ಗಾಯಿಸಲು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ದೀರ್ಘಾವಧಿಒಪ್ಪಂದದ ಮೇರೆಗೆ ಭೂಮಿಯನ್ನು ವರ್ಗಾಯಿಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಈ ಸ್ಥಳದಲ್ಲಿ ಡಿಆರ್‍ಡಿಒ ಜಗದೀಶ್ ಚಂದ್ರಬೋಸ್ ಸೆಂಟರ್
ಫಾರ್ ಅಡ್ವಾನ್ಸ್ ಟೆಕ್ನಾಲಜಿ (ಜೆಸಿಬಿಸಿಎಟಿ) ಸ್ಥಾಪಿಸಲಿದೆ. ಸದ್ಯ ರಕ್ಷಣಾ ಇಲಾಖೆಗೆ ಅತಿ ಹೆಚ್ಚಿನ ಸಾಧನಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಕೇಂದ್ರ ಆರಂಭಗೊಂಡ ನಂತರ ಇಲ್ಲೇ ರಕ್ಷಣಾ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸಲಿದ್ದು ಆಮದು ಕಡಿಮೆ
ಯಾಗಲಿದೆ. ರಾಷ್ಟ್ರೀಯ ಉಪಕರಣ ಸಂಸ್ಥೆ ಸರ್ಕಾರಿ ಸ್ವಾಮ್ಯದ್ದಾಗಿದ್ದು ನಷ್ಟದಲ್ಲಿ ಮುಳುಗಿತ್ತು. ಹೀಗಾಗಿ 2009ರಲ್ಲಿ ಪುನಶ್ಚೇತನಾ ಯೋಜನೆ ರೂಪಿಸಿ ಜಾದವ್ ಪುರ್ ವಿವಿಗೆ
ವರ್ಗಾಯಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

West-Asia war: ಅಮೆರಿಕಾ-ಇರಾನ್ ಸಂಘರ್ಷ ಮತ್ತಷ್ಟು ತೀವ್ರ; ಹಾರ್ಮುಜ್ ಜಲಸಂಧಿ ಮೇಲೆ ನೌಕಾ ದಿಗ್ಬಂಧನ, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಆತಂಕ

'ಅಲ್ಪಸಂಖ್ಯಾತರ ಚಾಂಪಿಯನ್‌ ಎನಿಸಿಕೊಂಡವರ ಡಬಲ್‌ ಗೇಮ್‌: ದಾವಣಗೆರೆಯಲ್ಲಿ ನಮ್ಮ ಅಭ್ಯರ್ಥಿಯನ್ನೇ ಸೋಲಿಸಲು ಯತ್ನ'

ಗ್ರಾಮೀಣ ಪ್ರದೇಶಗಳಿಗೆ ಅಗ್ಗದ ದರದಲ್ಲಿ ಔಷಧಿ: ಇಂಡಿಯಾ ಪೋಸ್ಟ್‌ ಮೂಲಕ ಜನೌಷಧಿ ಸೇವೆ ವಿಸ್ತರಿಸಲು ಕೇಂದ್ರ ಸರ್ಕಾರ ಚಿಂತನೆ..!

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

SCROLL FOR NEXT