ಸಾಂದರ್ಭಿಕ ಚಿತ್ರ 
ದೇಶ

ಹಿರಿಯ ನಾಗರಿಕರಿಗೆ ರೈಲಲ್ಲಿ ಬರ್ತ್ ಹತ್ತಲು ಮೆಟ್ಟಿಲು

ರೈಲ್ವೆ ಕೋಚ್‍ನಲ್ಲಿ ಮೇಲಂತಸ್ತಿನ ಬರ್ತ್ ಸಿಕ್ಕಿದ್ದಲ್ಲಿ ಹೇಗಪ್ಪ ಹತ್ತುವುದು ಎಂದು ಯಾರೂ ಸಹ ತಳಮಳಗೊಳ್ಳುವ ಅಗತ್ಯವಿಲ್ಲ. ಏಕೆಂದರೆ ಭಾರತೀಯ...

ನವದೆಹಲಿ: ರೈಲ್ವೆ ಕೋಚ್‍ನಲ್ಲಿ ಮೇಲಂತಸ್ತಿನ ಬರ್ತ್ ಸಿಕ್ಕಿದ್ದಲ್ಲಿ ಹೇಗಪ್ಪ ಹತ್ತುವುದು ಎಂದು
ಯಾರೂ ಸಹ ತಳಮಳಗೊಳ್ಳುವ ಅಗತ್ಯವಿಲ್ಲ. ಏಕೆಂದರೆ ಭಾರತೀಯ ರೈಲ್ವೆ ಮಹಿಳೆಯರು, ವೃದಟಛಿರು ಮೇಲಂತಸ್ತಿನ ಬರ್ತ್‍ಗೆ ಹತ್ತಿಳಿಯಲು ಅನುಕೂಲವಾಗಲೆಂದು ಮೆಟ್ಟಿಲು ವ್ಯವಸ್ಥೆ ಮಾಡುವ ಚಿಂತನೆ ನಡೆಸಿದೆ. ಈ ಬಗ್ಗೆ ಸೋಮವಾರ `ಇಂಡಿಯನ್ ಎಕ್ಸ್‍ಪ್ರೆಸ್' ವರದಿ ಮಾಡಿದೆ.

ಲಿಂಕ್ ಹಾಫ್ಮನ್ ಬುಷ್ (ಎಲ್‍ಎಚ್‍ಬಿ) ಕೋಚ್ ಗಳನ್ನು ತಯಾರಿಸುವ ಕಪೂರ್ತಲ ಮತ್ತು ಚೆನ್ನೈ ಘಟಕಗಳ ಎಂಜಿನಿಯರ್‍ಗಳು ಸಾಧ್ಯವಿರುವ ಮಾದರಿಗಳನ್ನು ರೂಪಿಸಿದ್ದಾರೆ. ಶಾಶ್ವತವಾಗಿರುವ ಮತ್ತು ಅನುಕೂಲಕರವಾದ ಒಂದು ಮಾದರಿಯನ್ನು ಅಂತಿಮಗೊಳಿಸಲಾಗುವುದು. ರೈಲ್ವೆಯಲ್ಲಿ ಸಿಗುತ್ತಿರುವ ಸೇವೆಗಳ ಕುರಿತು ಕೆಲವು ತಿಂಗಳ ಹಿಂದೆ ಪ್ರಯಾಣಿಕರಿಂದ ಹಿಂಮಾಹಿತಿ ಪಡೆಯಲಾಗಿತ್ತು. ಆಗ ಪ್ರಯಾಣಿಕರು ಮುಂದಿಟ್ಟ ಬೇಡಿಕೆಗಳ ಭಾಗವಾಗಿ ಈ ಏಣಿ ಅಭಿವೃದ್ಧಿ ಪಡಿಸಲಾಗುತ್ತಿದೆ.

ಹಲವು ಮಾದರಿಗಳ ಕುರಿತು ಪ್ರಯತ್ನಗಳನ್ನು ನಡೆಸಲಾಗಿದೆ. ಪ್ರಥಮ ದರ್ಜೆ ಎಸಿ ಕೋಚ್‍ಗೆ ಅಳವಡಿಸಬಹುದಾದ ಮಾದರಿ ಅಂತಿಮ ಗೊಳಿಸಲಾಗಿದೆ. 2 ಮತ್ತು 3ನೇ ದರ್ಜೆ ಎಸಿಗೆ ಅಳವಡಿಸಬಹುದಾದ ಮಾದರಿಯ ಅಂತಿಮ ಪ್ರಕ್ರಿಯೆ ನಡೆದಿದೆ ಎಂದು ರೈಲ್ವೆ ಮಂಡಳಿ ಸದಸ್ಯರಾದ ಹೇಮಂತ್ ಕುಮಾರ್ ತಿಳಿಸಿದ್ದಾರೆ.

ಉತ್ತಮವಾದ ಮಾದರಿಗಳಿದ್ದಲ್ಲಿ ಪಡೆಯುವುದಕ್ಕಾಗಿ ಅಹಮದಾಬಾದ್‍ನ ನ್ಯಾಷನಲ್ ಇನ್ಸ್ ಟ್ಯೂಟ್ ಆಫ್ ಡಿಸೈನ್ ನೆರವು ಕೋರಿರುವುದಾಗಿ ಅವರು ಹೇಳಿದ್ದಾರೆ. ಸದ್ಯ 3 ಮೆಟ್ಟಿಲು ಹೊಂದಿರುವ ಕಬ್ಬಿಣದ ಫ್ರೇಮನ್ನು ಕೋಚ್‍ನ ಒಂದು ಬದಿಯಲ್ಲಿ ಜೋಡಿಸಲಾಗುವುದು. ಈ ಮಾದರಿಯಲ್ಲಿ ಅಭ್ಯಾಸ ಇರುವವರು ಸುಲಭವಾಗಿ ಏರಿಳಿಯುತ್ತಾರೆ.

ಇಲ್ಲದವರು ಸ್ವಲ್ಪ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದು ರೈಲ್ವೆ ಇಲಾಖೆ ಹೇಳಿದೆ. ಈ ರೀತಿಯ ಮೆಟ್ಟಿಲು ಅಳವಡಿಸಲು ಪ್ರತಿ ಕೋಚ್‍ಗೆ ರು.20 ಸಾವಿರ ವೆಚ್ಚವಾಗಲಿದೆ. ಹಲವು ಪ್ರಥಮ ದರ್ಜೆ ಎಸಿ ಕೋಚ್‍ಗಳಿಗೆ ಈಗಾಗಲೆ ಈ ಮಾದರಿಯ ಮೆಟ್ಟಿಲು ಅಳವಡಿಸಲಾಗಿದ್ದು ಹಿಂಮಾಹಿತಿ ಪಡೆಯಲಾಗುತ್ತಿದೆ. ಮೂರು ಮೆಟ್ಟಿಲು ಹೊಂದಿರುವ ಈ ಮಾದರಿಯಲ್ಲಿ ಮೂರನೆಯದು ಅತಿದೊಡ್ಡ ಮೆಟ್ಟಿಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT