ಕೆಎಫ್ ಸಿ ಆಹಾರ 
ದೇಶ

ಕೆಎಫ್ ಸಿ ಆಹಾರದಲ್ಲಿ ಮಾರಕ ರೋಗಾಣು ಪತ್ತೆ

ಮೊನ್ನೆ ಮೊನ್ನೆಯಷ್ಟೇ ಬೇಯಿಸಿದ ಇಲಿ ಸರ್ವ್ ಮಾಡಿದ್ದ ಕೆಎಫ್ ಸಿ ಯ ಆಹಾರಗಳಲ್ಲಿ ಮಾರಕ ರೋಗಾಣುಗಳು ಪತ್ತೆಯಾಗಿವೆ...

ಹೈದರಾಬಾದ್: ಮೊನ್ನೆ ಮೊನ್ನೆಯಷ್ಟೇ ಬೇಯಿಸಿದ ಇಲಿ ಸರ್ವ್ ಮಾಡಿದ್ದ ಕೆಎಫ್ ಸಿ ಯ ಆಹಾರಗಳಲ್ಲಿ ಮಾರಕ ರೋಗಾಣುಗಳು ಪತ್ತೆಯಾಗಿವೆ. ಹೈದರಾಬಾದ್ ನ ಕೆಂಟಕಿ ಫ್ರೈಡ್ ಚಿಕನ್ ಸೆಂಟರ್ ಒಂದರಲ್ಲಿ ಆಹಾರದ  ಸ್ಯಾಂಪಲ್ ನ ಪರೀಕ್ಷೆ ನಡೆಸಿದಾಗ ಈ ರೋಗಾಣಗಳು ಪತ್ತೆಯಾಗಿವೆ. ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯ ನಡೆಸಿದ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಕೆಎಫ್ ಸಿ ಯಲ್ಲಿ ಕೆಲ ಖಾದ್ಯಗಳಲ್ಲಿ ಮಾರಕ ರೋಗಾಣುಗಳಾದ ಸಾಲ್ಮೋನೆಲ್ಲಾ ಹಾಗೂ ಇ ಕೊಲಿ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಈ ಎರಡು ಬ್ಯಾಕ್ಟೀರಿಯಾಗಳು  ಮಾರಕವಾಗಿದ್ದು, ಮಾನವ ದೇಹ ಸೇರಿದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೈದರಾ ಬಾದ್ ನ ಆಹಾರ ತಜ್ಞೆ ಎವಿ ಕೃಷ್ಣ ಕುಮಾರಿ ತಿಳಿಸಿದ್ದಾರೆ.

ಏನಿವು ರೋಗಾಣುಗಳು:

ಸಾಲ್ಮೋನೆಲ್ಲಾ ಒಂದು ರೋಗ ಹರಡುವ ಬ್ಯಾಕ್ಟೀರಿಯಾ. ಇದರಿಂದ ಗ್ಯಾಸ್ಟ್ರಿಕ್, ಟೈಪಾಯಿಡ್ ಜ್ವರ ಹರಡಲು ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾ ಬೇಯಿಸದ ಮಾಂಸ, ಸೀಫುಡ್ ಬೇಯಿಸದ ಮೊಟ್ಟೆ ಹಾಗೂ ತೊಳೆಯದ ಹಣ್ಣು ಮತ್ತು ತರಕಾರಿಗಳಲ್ಲಿ ಕಂಡು ಬರುತ್ತದೆ.

ಇ ಕೊಲಿ: ಇದೊಂದು ಮಾರಕ ಬ್ಯಾಕ್ಟೀರಿಯಾ ಆಗಿದೆ. ಇದು ಡಯೇರಿಯಾ, ಅನಿಮಿಯಾ ರೋಗಗಳಿಗೆ ಹರಡುವುದಲ್ಲೇ ಕಿಡ್ನಿ ಫೇಲ್ಯೂರ್ ಗೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾ ಇರುವ ಆಹಾರ ಪದಾರ್ಥಗಳನ್ನು 160 ಡಿಗ್ರಿ ಫ್ಯಾರನ್ ಹೀಟ್ ಉಷ್ಣಾಂಶದಲ್ಲಿ ಬೇಯಿಸಿ ತಿನ್ನಬೇಕು. ಇಲ್ಲದಿದ್ದರೇ ಈ ಬ್ಯಾಕ್ಟೀರಿಯಾ ಸಾಯದೇ ಬದುಕುಳಿದು ರೋಗ ಹರಡುತ್ತದೆ.

ಇದು ಹೆಚ್ಚಾಗಿ ಹಾಲಿನ ಉತ್ಪನ್ನಗಳು, ಹಸಿ ತರಕಾರಿಗಳು ಹಾಗೂ ಫ್ಯಾಶ್ಚರೀಕರಿಸದ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.  ಹೀಗಾಗಿ ಕೆಎಫ್ ಸಿ ಆಹಾರ ಪದಾರ್ಥಗಳಿಗೆ ನಿಷೇಧ ಹೇರಬೇಕೆಂದು ಹೈದರಾಬಾದ್ ನ ಎನ್ ಜಿ ಒ  ಒತ್ತಾಯಿಸಿದೆ.
ಆದರೆ ಕೆಎಫ್ ಸಿ ಅಧಿಕಾರಿಗಳು ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ತಾವು ಉತ್ತಮ ಗುಣಮಟ್ಟದ  ಹೈಜೆನಿಕ್ ಆಹಾರ  ನೀಡುತ್ತಿರುವುದಾಗಿ ಸ್ಪಷ್ಟೀಕರಣ ನೀಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತದ ಚುನಾವಣಾ ವ್ಯವಸ್ಥೆಯ ವಿಶ್ವಾಸಾರ್ಹತೆ ಬಗ್ಗೆ ಜಾಗತಿಕವಾಗಿ ಅತ್ಯುತ್ತಮ ಸ್ಪಷ್ಟ ಅಭಿಪ್ರಾಯ- ಟ್ರಂಪ್ ಹೇಳಿಕೆ ಬೆನ್ನಲ್ಲೇ MEA ಪ್ರತಿಕ್ರಿಯೆ!

ಮಾಜಿ ಸಚಿವ ಬಿ. ಸಿ. ನಾಗೇಶ್ ನಿಧನ: ನಾಳೆ ತಿಪಟೂರಿನಲ್ಲಿ ಅಂತ್ಯಕ್ರಿಯೆ!

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ ನಕಲಿ ಔಷಧಿ ಮರುಪ್ಯಾಕಿಂಗ್ ಬೃಹತ್ ಜಾಲ ಪತ್ತೆ: 5 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ!

ಪಸಿಂದು ಗೋಲ್ಡನ್ ಡಕೌಟ್: ಆಡಿದ 2ನೇ ಪಂದ್ಯದಲ್ಲೇ ಕುಂಬ್ಳೆ ದಾಖಲೆ ಸರಿಗಟ್ಟಿದ Team India ಯುವ ಸ್ಪಿನ್ನರ್ ಮಾನವ್ ಸುತಾರ್!

ದೇವೇಗೌಡರ ಕೂಸನ್ನು ಹಾದಿ ತಪ್ಪಿಸಿ ಯಾರಪ್ಪನಿಗೆ ಕೊಡಲು ಹೊರಟಿದ್ದೀರಿ ಮಿಸ್ಟರ್ ಡಿ.ಕೆ. ಶಿವಕುಮಾರ್? ತಾಕತ್ ಇದ್ರೆ ಚರ್ಚೆಗೆ ಬನ್ನಿ, ಕುಮಾರಸ್ವಾಮಿ ಸವಾಲು!