ಕೆಎಫ್ ಸಿ ಆಹಾರ 
ದೇಶ

ಕೆಎಫ್ ಸಿ ಆಹಾರದಲ್ಲಿ ಮಾರಕ ರೋಗಾಣು ಪತ್ತೆ

ಮೊನ್ನೆ ಮೊನ್ನೆಯಷ್ಟೇ ಬೇಯಿಸಿದ ಇಲಿ ಸರ್ವ್ ಮಾಡಿದ್ದ ಕೆಎಫ್ ಸಿ ಯ ಆಹಾರಗಳಲ್ಲಿ ಮಾರಕ ರೋಗಾಣುಗಳು ಪತ್ತೆಯಾಗಿವೆ...

ಹೈದರಾಬಾದ್: ಮೊನ್ನೆ ಮೊನ್ನೆಯಷ್ಟೇ ಬೇಯಿಸಿದ ಇಲಿ ಸರ್ವ್ ಮಾಡಿದ್ದ ಕೆಎಫ್ ಸಿ ಯ ಆಹಾರಗಳಲ್ಲಿ ಮಾರಕ ರೋಗಾಣುಗಳು ಪತ್ತೆಯಾಗಿವೆ. ಹೈದರಾಬಾದ್ ನ ಕೆಂಟಕಿ ಫ್ರೈಡ್ ಚಿಕನ್ ಸೆಂಟರ್ ಒಂದರಲ್ಲಿ ಆಹಾರದ  ಸ್ಯಾಂಪಲ್ ನ ಪರೀಕ್ಷೆ ನಡೆಸಿದಾಗ ಈ ರೋಗಾಣಗಳು ಪತ್ತೆಯಾಗಿವೆ. ತೆಲಂಗಾಣ ರಾಜ್ಯ ಆಹಾರ ಪ್ರಯೋಗಾಲಯ ನಡೆಸಿದ ಪರೀಕ್ಷೆಯಲ್ಲಿ ತಿಳಿದು ಬಂದಿದೆ.

ಕೆಎಫ್ ಸಿ ಯಲ್ಲಿ ಕೆಲ ಖಾದ್ಯಗಳಲ್ಲಿ ಮಾರಕ ರೋಗಾಣುಗಳಾದ ಸಾಲ್ಮೋನೆಲ್ಲಾ ಹಾಗೂ ಇ ಕೊಲಿ ಬ್ಯಾಕ್ಟೀರಿಯಾ ಇರುವುದು ಪತ್ತೆಯಾಗಿದೆ. ಈ ಎರಡು ಬ್ಯಾಕ್ಟೀರಿಯಾಗಳು  ಮಾರಕವಾಗಿದ್ದು, ಮಾನವ ದೇಹ ಸೇರಿದರೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಹೈದರಾ ಬಾದ್ ನ ಆಹಾರ ತಜ್ಞೆ ಎವಿ ಕೃಷ್ಣ ಕುಮಾರಿ ತಿಳಿಸಿದ್ದಾರೆ.

ಏನಿವು ರೋಗಾಣುಗಳು:

ಸಾಲ್ಮೋನೆಲ್ಲಾ ಒಂದು ರೋಗ ಹರಡುವ ಬ್ಯಾಕ್ಟೀರಿಯಾ. ಇದರಿಂದ ಗ್ಯಾಸ್ಟ್ರಿಕ್, ಟೈಪಾಯಿಡ್ ಜ್ವರ ಹರಡಲು ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾ ಬೇಯಿಸದ ಮಾಂಸ, ಸೀಫುಡ್ ಬೇಯಿಸದ ಮೊಟ್ಟೆ ಹಾಗೂ ತೊಳೆಯದ ಹಣ್ಣು ಮತ್ತು ತರಕಾರಿಗಳಲ್ಲಿ ಕಂಡು ಬರುತ್ತದೆ.

ಇ ಕೊಲಿ: ಇದೊಂದು ಮಾರಕ ಬ್ಯಾಕ್ಟೀರಿಯಾ ಆಗಿದೆ. ಇದು ಡಯೇರಿಯಾ, ಅನಿಮಿಯಾ ರೋಗಗಳಿಗೆ ಹರಡುವುದಲ್ಲೇ ಕಿಡ್ನಿ ಫೇಲ್ಯೂರ್ ಗೆ ಕಾರಣವಾಗುತ್ತದೆ. ಈ ಬ್ಯಾಕ್ಟೀರಿಯಾ ಇರುವ ಆಹಾರ ಪದಾರ್ಥಗಳನ್ನು 160 ಡಿಗ್ರಿ ಫ್ಯಾರನ್ ಹೀಟ್ ಉಷ್ಣಾಂಶದಲ್ಲಿ ಬೇಯಿಸಿ ತಿನ್ನಬೇಕು. ಇಲ್ಲದಿದ್ದರೇ ಈ ಬ್ಯಾಕ್ಟೀರಿಯಾ ಸಾಯದೇ ಬದುಕುಳಿದು ರೋಗ ಹರಡುತ್ತದೆ.

ಇದು ಹೆಚ್ಚಾಗಿ ಹಾಲಿನ ಉತ್ಪನ್ನಗಳು, ಹಸಿ ತರಕಾರಿಗಳು ಹಾಗೂ ಫ್ಯಾಶ್ಚರೀಕರಿಸದ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಕಂಡು ಬರುತ್ತದೆ.  ಹೀಗಾಗಿ ಕೆಎಫ್ ಸಿ ಆಹಾರ ಪದಾರ್ಥಗಳಿಗೆ ನಿಷೇಧ ಹೇರಬೇಕೆಂದು ಹೈದರಾಬಾದ್ ನ ಎನ್ ಜಿ ಒ  ಒತ್ತಾಯಿಸಿದೆ.
ಆದರೆ ಕೆಎಫ್ ಸಿ ಅಧಿಕಾರಿಗಳು ಈ ಎಲ್ಲಾ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ತಾವು ಉತ್ತಮ ಗುಣಮಟ್ಟದ  ಹೈಜೆನಿಕ್ ಆಹಾರ  ನೀಡುತ್ತಿರುವುದಾಗಿ ಸ್ಪಷ್ಟೀಕರಣ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'Grok ರಚಿಸಿದ ಅಸಭ್ಯ, ಕಾನೂನುಬಾಹಿರ ವಿಷಯಗಳ ತೆಗೆದುಹಾಕಿ': Elon Musk ಎಕ್ಸ್‌ಗೆ ಕೇಂದ್ರ ಸರ್ಕಾರ ಖಡಕ್ ಎಚ್ಚರಿಕೆ!

Ramnath Goenka Sahithya Samman 2025: ಸಾಹಿತಿ ಚಂದ್ರಶೇಖರ ಕಂಬಾರರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

ಬಳ್ಳಾರಿ ಫೈರಿಂಗ್: ನಿನ್ನೆಯಷ್ಟೇ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಪವನ್ ನೆಜ್ಜೂರ್ ಅಮಾನತು

ಭಾರತ ತಂಡಕ್ಕೆ ಭಾರಿ ಆಘಾತ; ಸ್ಟಾರ್ ಆಟಗಾರನ ಮೂಳೆ ಮುರಿತ, ದೀರ್ಘಕಾಲ ಕ್ರಿಕೆಟ್‌ನಿಂದ ದೂರ!

EVM Survey: ಹಳೆಯ ಸಮೀಕ್ಷೆ ಬಳಸಿಕೊಂಡು ಜನರ ದಾರಿತಪ್ಪಿಸುತ್ತಿರುವುದು ವಿಷಾದನೀಯ - ಸಿಎಂ ಸಿದ್ದರಾಮಯ್ಯ

SCROLL FOR NEXT