ಜಯಲಲಿತಾ 
ದೇಶ

ಕೇರಳದಲ್ಲಿ ಕಾಂಗ್ರೆಸ್, ತ್ರಿಪುರಾದಲ್ಲಿ ಸಿಪಿಎಂ

ತಮಿಳುನಾಡು ಸಿಎಂ ಜಯಲಲಿತಾಗೆ ಭರ್ಜರಿ ಗೆಲವಿನ ಸಂಭ್ರಮ...

ನವದೆಹಲಿ: ಕೇರಳ, ಮಧ್ಯಪ್ರದೇಶ, ತ್ರಿಪುರಾ ಹಾಗೂ ಮೇಘಾಲಯದಲ್ಲೂ ಉಪಚುನಾವಣೆ ನಡೆದಿತ್ತು. ಎಲ್ಲ 5 ರಾಜ್ಯಗಳ ಫಲಿತಾಂಶವೂ ಮಂಗಳವಾರವೇ ಪ್ರಕಟವಾಗಿದೆ.
ಕೇರಳದ ಅರುವಿಕ್ಕಾರಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‍ನ ಕೆ.ಎಸ್. ಶಬರಿನಾಥನ್ ಅವರು ಜಯಭೇರಿ ಬಾರಿಸಿದ್ದು, ಆಡಳಿತಾರೂಢ ಯುಡಿಎಫ್ ಸರ್ಕಾರಕ್ಕೆ ಜಯ ಸಿಕ್ಕಂತಾಗಿದೆ. ಮಧ್ಯಪ್ರದೇಶದ ಗರೋತ್ ವಿಧಾನಸಭಾ ಸೀಟನ್ನು ಬಿಜೆಪಿ ಉಳಿಸಿಕೊಂಡಿದೆ. ಇಲ್ಲಿ ಬಿಜೆಪಿಯ ಚಂದರ್ ಸಿಂಗ್ ಸಿಸೋಡಿಯಾ ಅವರು ಕಾಂಗ್ರೆಸ್‍ನ ಸುಭಾಶ್ ಕುಮಾರ್ ಸೊಜಾತಿಯಾರನ್ನು ಸೋಲಿಸಿದ್ದಾರೆ. ಇದೇ ವೇಳೆ, ತ್ರಿಪುರಾದಲ್ಲಿ ಎರಡೂ ಸೀಟುಗಳು ಸಿಪಿಎಂ ಪಾಲಾಗಿವೆ. ಮೇಘಾಲಯದ ಚೋಕ್ ಪಾಟ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯ ಸಾಧಿಸಿದ್ದಾರೆ.
ಉಪಚುನಾವಣೆ ಜಯಾ ಜಯಭೇರಿ, ಠೇವಣಿ ಕಳೆದುಕೊಂಡ ಸಿಪಿಐನ ಸಿ.ಮಹೇಂದ್ರನ್
ತಮಿಳುನಾಡು ಸಿಎಂ ಜಯಲಲಿತಾಗೆ ಭರ್ಜರಿ ಗೆಲವಿನ ಸಂಭ್ರಮ. ತಮಿಳುನಾಡಿನ ಆರ್.ಕೆ.ನಗರ ಉಪಚುನಾವಣೆ ಯಲ್ಲಿ ಜಯಲಲಿತಾ ಅವರು 1,50,722 ಮತಗಳ ಅಂತರದಿಂದ ಜಯಸಾ„ಸಿದ್ದಾರೆ. ಇತರೆ ಅಭ್ಯರ್ಥಿಗಳಂತೆ ಜಯಾ ಅವರ ಪ್ರತಿಸ್ಪರ್ಧಿ ಸಿಪಿಐನ ಸಿ. ಮಹೇಂದ್ರನ್ ಠೇವಣಿ ಕಳೆದುಕೊಂಡಿದ್ದಾರೆ. ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಮಾತನಾಡಿದ ಜಯಾ, ``ಇದೊಂದು ಐತಿಹಾಸಿಕ ಗೆಲವು. ಮತದಾರರ ನಿರೀಕ್ಷೆ, ಅಗತ್ಯಗಳನ್ನು ಪೂರೈಸಲು ಅವಿರತವಾಗಿ ಶ್ರಮಿಸುತ್ತೇನೆ ಎಂದಿದ್ದಾg. ಫಲಿತಾಂಶ ಹೊರಬೀಳುತ್ತಿದ್ದಂತೆ ತ.ನಾಡಿನಾದ್ಯಂತ ಹಬ್ಬದ ವಾತಾವರಣ ಮನೆ ಮಾಡಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT