ಇಂದಿರಾಗಾಂಧಿ ಮತ್ತು ಜವಾಹರ್ ಲಾಲ್ ನೆಹರೂ 
ದೇಶ

ವಿಕಿಪೀಡಿಯ ಪುಟದಲ್ಲಿ ನೆಹರೂ ವೈಯಕ್ತಿಕ ಮಾಹಿತಿ ತಿದ್ದಿದ ಕೇಂದ್ರ ಸರ್ಕಾರ

ವಿಕಿಪೀಡಿಯ ಪುಟದಲ್ಲಿರುವ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಅವರ ವೈಯಕ್ತಿಕ ಮಾಹಿತಿಯನ್ನು ಕೇಂದ್ರ ಸರ್ಕಾರ ತಿದ್ದಿರುವುದಾಗಿ ಬುಧವಾರ ತಿಳಿದುಬಂದಿದೆ...

ನವದೆಹಲಿ: ವಿಕಿಪೀಡಿಯ ಪುಟದಲ್ಲಿರುವ ಭಾರತದ ಮೊದಲ ಪ್ರಧಾನಮಂತ್ರಿ ಜವಾಹರ್ ಲಾಲ್ ನೆಹರೂ ಅವರ ವೈಯಕ್ತಿಕ ಮಾಹಿತಿಯನ್ನು ಕೇಂದ್ರ ಸರ್ಕಾರ ತಿದ್ದಿರುವುದಾಗಿ ಬುಧವಾರ ತಿಳಿದುಬಂದಿದೆ.

ಕೇಂದ್ರ ಸರ್ಕಾರ ಕಚೇರಿಯ ಐಪಿ ವಿಳಾಸದಿಂದ ನೆಹರೂ ಅವರ ವೈಯಕ್ತಿಕ ಮಾಹಿತಿಯನ್ನು ಬದಲು ಮಾಡಲಾಗಿದ್ದು, ಬದಲಾಗಿರುವ ಮಾಹಿತಿಯ ಪ್ರಕಾರ, ನೆಹರೂ ಅವರ ಅಜ್ಜ ಗಂಗಾಧರ್ ನೆಹರು ಅವರು ಮುಸ್ಲಿಂ ಸಮಾಜಕ್ಕೆ ಸೇರಿದವರಾಗಿದ್ದು, ನೆಹರೂ ಅವರು ಅಲಹಬಾದ್ ನ ರೆಡ್ ಲೈಟ್ ಪ್ರದೇಶದಲ್ಲಿ ಹುಟ್ಟಿದವರಾಗಿದ್ದಾರೆಂದು ತಿಳಿಸಲಾಗಿದೆ.  ನೆಹರೂ ಅವರ ವೈಯಕ್ತಿಕ ಮಾಹಿತಿ ಬದಲಾಯಿಸಿರುವ ವ್ಯಕ್ತಿ ಯಾರೆಂಬುದು ತಿಳಿದುಬಂದಿಲ್ಲ. ಆದರೆ, ಮಾಹಿತಿ ತಿದ್ದಿರುವುದು ಸರ್ಕಾರಕ್ಕೆ ಸಂಬಂಧಿಸಿದ ಐಪಿ ವಿಳಾಸದಿಂದಲೇ ಎಂದು ಹೇಳಲಾಗುತ್ತಿದೆ.

ಐಪಿ ವಿಳಾಸ ನೀಡುವುದು ಎನ್ಐಸಿ (ನೆಟ್ ವರ್ಕ್ ಇಂಟರ್ ಫೇಸ್ ಕಂಟ್ರೋಲರ್) ಸಂಸ್ಥೆ. ಹಾಗಾಗಿ ಎನ್ಐಸಿ ನೆಟ್ ವರ್ಕ್ ನಲ್ಲಿ ಬಹಳ ಜನ ಇರುವುದರಿಂದ ಅವರಲ್ಲಿ ಯಾರು ಈ ರೀತಿಯಾಗಿ ಮಾಹಿತಿ ತಿದ್ದಿದ್ದಾರೆ ಎಂಬುದನ್ನು ಹುಡುಕುವುದು ಕಷ್ಟಕರವಾಗಿದೆ ಎಂದು ಅಂತರ್ಜಾಲ ಮತ್ತು ಸಮಾಜ ಸಂಸ್ಥೆಯ ನೀತಿ ನಿರ್ದೇಶಕ ಪ್ರಾಣೇಶ್ ಪ್ರಕಾಶ್ ಹೇಳಿದ್ದಾರೆ.

ನೆಹರು ಅವರ ವೈಯಕ್ತಿಕ ಮಾಹಿತಿ ತಿದ್ದಿರುವ ಕುರಿತಂತೆ ಈಗಾಗಲೇ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸುತ್ತಿದ್ದು, ನೆಹರು ಹಾಗೂ ಅವರ ತಂದೆ ಮೋತಿಲಾಲ್ ನೆಹರೂ ಅವರು ಹಿಂದು ಆದರೇನು ಅಥವಾ ಮುಸ್ಲಿಂ ಆದರೇನು ಅದರಿಂದ ಏನು ಆಗಬೇಕಿದೆ. ಅವರೊಬ್ಬ ಭಾರತೀಯ ಎಂಬುದಷ್ಟೇ ಮುಖ್ಯವಾಗುತ್ತದೆ. ನೆಹರು ಅವರ ವೈಯಕ್ತಿಕ ಮಾಹಿತಿ ತಿದ್ದಿರುವುದನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಈ ವಿಚಾರವನ್ನು ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಂಡು ಕೂಡಲೇ ತನಿಖೆ ನಡೆಸಬೇಕೆಂದು ಆಗ್ರಹಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

US ವಲಸೆ ನೀತಿ ಮತ್ತಷ್ಟು ಕಠಿಣ: ಅರ್ಜಿದಾರರಿಗೆ ಟ್ರಂಪ್‌ ಸರ್ಕಾರ ಶಾಕ್‌: ವಿಶ್ವದಾದ್ಯಂತ VISA ಸಂದರ್ಶನಗಳಿಗೆ ಬ್ರೇಕ್‌!

TMCಗೆ ಸೆಡ್ಡು ಹೊಡೆದ ಬಂಡಾಯ ಸಂಸದರಿಗೆ ಶಾಕ್‌: 20 ಮಂದಿಗೆ ಲೋಕಸಭಾ ಸಚಿವಾಲಯ ನೋಟಿಸ್‌, 7 ದಿನಗಳೊಳಗೆ ಉತ್ತರಿಸುವಂತೆ ಸೂಚನೆ..!

ಬಡವರ ಬದುಕಿಗೆ ಬೆಲೆ ಏರಿಕೆ ಬರೆ: ‘ಅಚ್ಛೇ ದಿನ್ ಆಯ್ತು ದುಬಾರಿ ದಿನ್: ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ..!

ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ಸಾಧ್ಯತೆ; ನಾಲ್ವರು ಮುಖ್ಯಮಂತ್ರಿಗಳಿಗೆ ಸ್ಥಾನ?

ಇರಾನ್‌ ತೈಲ ವಹಿವಾಟಿಗೆ ಅಮೆರಿಕಾ ಬ್ರೇಕ್: ಭಾರತದ 4 ಕಂಪನಿಗಳು ಕಪ್ಪುಪಟ್ಟಿಗೆ, 3 ಪ್ರಜೆಗಳ ಮೇಲೂ ನಿರ್ಬಂಧ..!