ದೇಶ

ಮಗನ ಮಾಂಸದ ಅಡುಗೆ ಮಾಡಿ ಹೆತ್ತ ತಾಯಿಗೇ ಉಣಿಸಿದ ಇಸಿಸ್!

ಇದಕ್ಕಿಂತ ನೀಚ, ಹೇಯ ಕೌರ್ಯ ಬೇರಿನ್ಯಾವುದಾದರೂ ಇದೆಯೇ? ತಾಯಿಯ ಮುಂದೆಯೇ ಮಗನ ಹತ್ಯೆ ಮಾಡುವಂಥ ಅನೇಕ ಮನಸ್ಥಿತಿಗಳ ಕುರಿತು ನಾವು ಕೇಳಿಯೇ ಇದ್ದೇವೆ...

ಲಂಡನ್: ಇದಕ್ಕಿಂತ ನೀಚ, ಹೇಯ ಕೌರ್ಯ ಬೇರಿನ್ಯಾವುದಾದರೂ ಇದೆಯೇ? ತಾಯಿಯ ಮುಂದೆಯೇ ಮಗನ ಹತ್ಯೆ ಮಾಡುವಂಥ ಅನೇಕ ಮನಸ್ಥಿತಿಗಳ ಕುರಿತು ನಾವು ಕೇಳಿಯೇ ಇದ್ದೇವೆ. ಆದರೆ, ಹೆತ್ತ ತಾಯಿಗೇ ಮಗನ ಮಾಂಸವನ್ನೇ ಉಣ್ಣಿಸುವಷ್ಟು ಕಟುಕರು ಈ ಜಗತ್ತಿನಲ್ಲಿದ್ದಾರಾ?...

ಇದ್ದಾರೆ. ಇಸಿಸ್‍ನಲ್ಲಿದ್ದಾರೆ! ಮಾನವತ್ವಕ್ಕೇ ಸವಾಲೆಸೆಯುವಂಥ ಉಗ್ರರ ಈ ಮುಖವನ್ನು ಕುರ್ದಿಶ್ ಹೋರಾಟಗಾರ ಯಾಸಿರ್ ಅಬ್ದುಲ್ಲಾ ಎಂಬಾತ ಬಹಿರಂಗಪಡಿಸಿದ್ದಾನೆ. ಆ ನತದೃಷ್ಟ ತಾಯಿ ಕಥೆಯನ್ನು ಇಡೀ ಜಗತ್ತಿನ ಮುಂದೆ ತೆರೆದಿಟ್ಟಿದ್ದಾನೆ. ಇತ್ತೀಚೆಗೆ ಇರಾಕ್‍ನ ಹಳ್ಳಿಯೊಂದರ ಮೇಲೆ ದಾಳಿ ನಡೆಸಿದ್ದ ಇಸಿಸ್ ಉಗ್ರರು ಕುರ್ದಿಶ್ ಜನಾಂಗದ ಹಲವರನ್ನು ಹೊತ್ತೊಯ್ದಿದ್ದರು. ಹೀಗೆ ಉಗ್ರರು ಹೊತ್ತೊಯ್ದವರಲ್ಲಿ ಈ ತಾಯಿಯ ಪುತ್ರನೂ ಇದ್ದ. ಅಪಹೃತರೊಂದಿಗೆ ಉಗ್ರರು ಯೊವ ರೀತಿ ನಡೆದುಕೊಳ್ಳುತ್ತಾರೆನ್ನುವುದನ್ನು ಈ ತಾಯಿಗೆ ಚೆನ್ನಾಗಿ ಗೊತ್ತು. ಹಾಗಾಗಿ ಆತನನ್ನು ಹೇಗಾದರೂ ಮಾಡಿ ಬಿಡಿಸಿಕೊಂಡು ಬರಲು ಆಕೆ ನಿರ್ಧರಿಸುತ್ತಾಳೆ.

ಉಗ್ರರ ಕಾಲಿಗೆ ಬಿದ್ದಾದರೂ ಮಗನನ್ನು ಬಿಡಿಸಿಕೊಂಡು ಬರುತ್ತೇನೆಂದುಕೊಂಡು ಇಸಿಸ್ ಉಗ್ರರ ಕಾರಸ್ಥಾನವಾದ ಮಸೂಲ್‍ಗೆ ತೆರಳುತ್ತಾಳೆ. ಮಗನನ್ನು ತೋರಿಸಿ ಎಂದು ಉಗ್ರರಿಗೆ ದುಂಬಾಲು ಬೀಳುತ್ತಾಳೆ. ಈ ತಾಯಿಯ ಕಣ್ಣೀರು ನೋಡಿದ ಉಗ್ರರು, ಮೊದಲು ದಣಿವಾರಿಸಿಕೊಳ್ಳಿ. ಹೊಟ್ಟೆ ತುಂಬಿಸಿಕೊಳ್ಳಿ. ನಂತರ ಮಗನನ್ನು ನೋಡುವಿರಂತೆ ಎಂದು ಹೇಳುತ್ತಾರೆ. ಕೆಲವೇ ಹೊತ್ತಿನಲ್ಲಿ ಆಕೆಯ ಮುಂದೆ ಚಹಾ ತಂದಿಡುತ್ತಾರೆ. ಕೆಲಹೊತ್ತಿನ ಬಳಿಕ ಆಕೆಗೆ ಮಾಂಸದ ಊಟವನ್ನೂ ಬಡಿಸಲಾಗುತ್ತದೆ.

ಕೌರ್ಯಕ್ಕೆ ಹೆಸರುವಾಸಿಯಾದ ಉಗ್ರರ ಈ ಉಪಚಾರ ಕಂಡು ಒಂದು ಕ್ಷಣ ಈ ತಾಯಿಗೆ ನಂಬಿಕೆಯೇ ಬರಲಿಲ್ಲ. ಆದರೂ ಉಗ್ರರ ಈ ಅಪರೂಪದ ಉಪಚಾರ ಕಂಡು ಮನಸ್ಸಿನೊಳಗೇ ಕೃತಜ್ಞತೆ ಅರ್ಪಿಸುತ್ತಾಳೆ. ಹೊಟ್ಟೆತುಂಬಿದ ಬಳಿಕ ಮಗ ಎಲ್ಲಿ ಎಂದಾಗ, ಗಹಗಹಿಸಿ ನಕ್ಕ ಉಗ್ರರು ಕೊಟ್ಟದ್ದು ಒಂದೇ ಉತ್ತರ. `ನೀನೇ ಈಗ ತಿಂದೆಯಲ್ಲ'! ಈ ಉತ್ತರ ಕಿವಿಗೆ ಬೀಳುತ್ತಿದ್ದಂತೆ ವೃದ್ಧ ತಲೆತಿರುಗಿ ಬೀಳುವುದೊಂದೇ ಬಾಕಿ.ಯಾರಿಗಾಗಿ ಅಷ್ಟೊಂದು ದೂರದಿಂದ ಜೀವವನ್ನೇ ಪಣವಾಗಿಟ್ಟು ಬಂದಿದ್ದಳೋ, ಆಕೆಯನ್ನೇ ಉಗ್ರರು ತುಂಡು ತುಂಡಾಗಿ ಕತ್ತರಿಸಿ ಅಡುಗೆ ಮಾಡಿ ಬಡಿಸಿದ್ದರು ಈ ನಿರ್ದಯಿ ಮೃಗಗಳು!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

IPL 2026 Eliminator: ವಿಶ್ವದಾಖಲೆಯ ಹೊಸ್ತಿಲಲ್ಲಿ ಎಡವಿದ Vaibhav Suryavanshi, ಮತ್ತೊಂದು ರೆಕಾರ್ಡ್ ಜಸ್ಟ್ ಮಿಸ್!

ಬೆಂಗಳೂರು: ಮಾಜಿ ಪ್ರೇಯಸಿ ಕರೆದಳೆಂದು ಮನೆಗೆ ಹೋದ ಪ್ರಿಯಕರ ದುರಂತ ಸಾವು: ಅಷ್ಟಕ್ಕೂ ಆಗಿದ್ದೇನು?

ಸಿದ್ದರಾಮಯ್ಯ ರಾಜೀನಾಮೆ ಸುದ್ದಿ: ಕಣ್ಣೀರಿಟ್ಟ CM ಕಚೇರಿ ಸಿಬ್ಬಂದಿ; ಬೆಂಬಲಿಗರಿಂದ ಪ್ರತಿಭಟನೆ

SCROLL FOR NEXT