ವಿ.ಕೆ ಸಿಂಗ್ ಮತ್ತು ಮನೀಶ್ ತಿವಾರಿ 
ದೇಶ

'ಅಸಹ್ಯ'ವಾದರೆ ವಿ.ಕೆ ಸಿಂಗ್ ರಾಜಿನಾಮೆ ನೀಡಲಿ: ಮನೀಶ್ ತಿವಾರಿ

ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ರಾಜ್ಯ ಸಚಿವ ಜನರಲ್ ವಿ ಕೆ ಸಿಂಗ್ "ಅಸಹ್ಯ" ಎಂದು ಟ್ವೀಟ್ ಮಾಡಿರುವುದಕ್ಕೆ...

ನವದೆಹಲಿ: ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದ ವಿದೇಶಾಂಗ ರಾಜ್ಯ ಸಚಿವ ಜನರಲ್ ವಿ ಕೆ ಸಿಂಗ್ "ಅಸಹ್ಯ" ಎಂದು ಟ್ವೀಟ್ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಮಾಜಿ ಕೇಂದ್ರ ಸಚಿವ ಮನೀಶ್ ತಿವಾರಿ, ವಿ.ಕೆ.ಸಿಂಗ್ ಅವರಿಗೆ ಸರ್ಕಾರಗಳ ಬಗ್ಗೆ ಅಸಹ್ಯ ಹುಟ್ಟಿದ್ದರೇ ರಾಜಿನಾಮೆ ನೀಡಲಿ ಎಂದು ಹೇಳಿದ್ದಾರೆ. 

ಪಾಕಿಸ್ತಾನದ ಸಂಭ್ರಮಾಚರಣೆಯಲ್ಲಿ ಭಾರತವನ್ನು ಪ್ರತಿನಿಧಿಸಿದ ವಿ.ಕೆ ಸಿಂಗ್ ಈ ರೀತಿ ಅಸಹ್ಯ ಎಂಬ ಹೇಳಿಕೆಗಳನ್ನು ನೀಡಬಾರದು. ದೇಶವನ್ನು ಪ್ರತಿನಿಧಿಸುವಂತಹ ನಾಯಕರೇ ಇಂತಹ ಹೇಳಿಕೆಗಳನ್ನು ನೀಡಿ, ದೇಶ ತಲೆತಗ್ಗಿಸುವಂತೆ ಮಾಡುತ್ತಾರೆ. ಅವರಿಗೇ ಅಸಹ್ಯವಾದರೇ, ಅದನ್ನು ಟ್ವೀಟ್ ಮಾಡಿ ಹೇಳುವ ಬದಲು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ, ಹೊರಡಲಿ ಎಂದು ಮನೀಷ್ ತಿವಾರಿ ಸವಾಲು ಹಾಕಿದ್ದಾರೆ.

ಮನೀಷ್ ತಿವಾರಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಸುಬ್ರಮಣಿಯನ್ ಅವರು, ಸಿಂಗ್ ಅವರು ಏಕೆ ರಾಜಿನಾಮೆ ನೀಡಬೇಕು. ಕಾಂಗ್ರೆಸ್ ನಾಯಕರಂತೇ "ಜೀ ಹುಜೂರ್' ಎಂದು ತಲೆಯಾಡಿಸುವುದಿಲ್ಲವಲ್ಲ ಅದಕ್ಕಾಗಿಯೇ?. ಬಹುಶಃ ಕಾಂಗ್ರೆಸ್ ನವರಿಗೆ ತಲೆಯಾಡಿಸುವಂತ ಪ್ರತಿನಿಧಿಗಳು ಬೇಕಾಗಿದೆ. ಆದರೆ. ಸಿಂಗ್ ಅದಕ್ಕೆ ವಿರುದ್ಧವಾದವರು ಅದಕ್ಕಾಗಿ ಸಿಂಗ್ ಅವರಿಂದ ರಾಜಿನಾಮೆ ಕೇಳುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ.

ಪಾಕಿಸ್ತಾನ ರಾಷ್ಟ್ರೀಯ ದಿನಾಚರಣೆಯಲ್ಲಿ ಮಾತನಾಡಿದ ಪಾಕಿಸ್ತಾನ ರಾಯಭಾರಿ ಅಬ್ದುಲ್ ಬಸಿತ್ "ಕಾರಣವೇ ಇಲ್ಲದೆ ಸುಮ್ಮನೆ ವಿವಾದ ಸೃಷ್ಟಿಸಬೇಡಿ" ಎಂದು ಹುರಿಯತ್ ನಾಯಕರನ್ನು ಸಂಭ್ರಮಾಚರಣೆಗೆ ಆಹ್ವಾನಿಸಿರುವ ಬಗ್ಗೆ ಪ್ರತಿಕ್ರಿಯಿಸಿದ್ದಲ್ಲದೆ "ನಾವು ಹುರಿಯತ್ ನಾಯಕರನ್ನು ಭೇಟಿ ಮಾಡುತ್ತಿರುವುದನ್ನು ಭಾರತ ಸರ್ಕಾರ ವಿರೋಧಿಸಿಲ್ಲ" ಎಂದು ನುಡಿದಿದ್ದಾರೆ.

ಇದರಿಂದ ಕುಪಿತಗೊಂಡಿರುವ ವಿದೇಶಾಂಗ ಸಚಿವಾಲಯ "ಭಾರತ ಮತ್ತು ಪಾಕಿಸ್ತಾನದ ತೊಂದರೆಗಳನ್ನು ಬಗೆಹರಿಸಿಕೊಳ್ಳಲು ಎರಡೇ ಪಾರ್ಟಿಗಳು ಇರುವುದು. ಮೂರನೆ ಸಂಘಟನೆಯ ಅವಶ್ಯಕತೆ ಇಲ್ಲ" ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸಯ್ಯದ್ ಅಕ್ಬರುದ್ದೀನ್ ತಿಳಿಸಿದ್ದಾರೆ.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜನರಲ್ ವಿಕೆ ಸಿಂಗ್ ಅಲ್ಲಿ ೧೦ ನಿಮಿಷಗಳನ್ನು ಕಳೆದು ಹೊರ ಬಂದ ನಂತರ, ಹುರಿಯತ್ ನಾಯಕರ ಬಗ್ಗೆ ಪಾಕಿಸ್ತಾನ ರಾಯಭಾರಿ ಆಡಿರುವ ಮಾತುಗಳಿಗೆ ಆಕ್ಷೇಪ ವ್ಯಕ್ತಪಡಿಸಿ 'ಅಸಹ್ಯ' ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT