ನೇಪಾಳ ಭೂಕಂಪದಿಂದ ಗಾಯಗೊಂಡವರನ್ನು ರಕ್ಷಣೆ ಮಾಡುತ್ತಿರುವ ಸೇನಾ ಪಡೆ 
ದೇಶ

ರಕ್ಷಣೆ ಸಾಕು, ನಿಮ್ಮ ದೇಶಕ್ಕೆ ಹೋಗಿ: ವರದಿ ತಿರಸ್ಕರಿಸಿದ ನೇಪಾಳ ಸರ್ಕಾರ

ಪ್ರಬಲ ಭೂಕಂಪದಿಂದಾಗಿ ನಲುಗಿ ಹೋಗಿದ್ದ ನೇಪಾಳಕ್ಕೆ ನೆರವಾದ ವಿದೇಶಿ ರಕ್ಷಣಾ ಪಡೆಗಳನ್ನು ಅವರವರ ದೇಶಗಳಿಗೆ ಹಿಂತಿರುಗಿವಂತೆ ನೇಪಾಳ ಹೇಳಿದ್ದ ವರದಿಯನ್ನು ನೇಪಾಳ ಸರ್ಕಾರ ಮಂಗಳವಾರ ತಿರಸ್ಕರಿಸಿದೆ...

ಕಠ್ಮಂಡು: ಪ್ರಬಲ ಭೂಕಂಪದಿಂದಾಗಿ ನಲುಗಿ ಹೋಗಿದ್ದ ನೇಪಾಳಕ್ಕೆ ನೆರವಾದ ವಿದೇಶಿ ರಕ್ಷಣಾ ಪಡೆಗಳನ್ನು ಅವರವರ ದೇಶಗಳಿಗೆ ಹಿಂತಿರುಗಿವಂತೆ ನೇಪಾಳ ಹೇಳಿದ್ದ ವರದಿಯನ್ನು ನೇಪಾಳ ಸರ್ಕಾರ ಮಂಗಳವಾರ ತಿರಸ್ಕರಿಸಿದೆ.

ವರದಿ ಕುರಿತಂತೆ ಮಾತನಾಡಿರುವ ಮಾಹಿತಿ ಸಚಿವ ಮಿನೇಂದ್ರ ರಿಜಲ್ ಅವರು, ವಿದೇಶಿ ರಕ್ಷಣಾ ಪಡೆಯನ್ನು ನಾವು ಸ್ವಾಗತಿಸುತ್ತೇವೆ. ನೇಪಾಳಿಗರ ರಕ್ಷಣಾ ಕಾರ್ಯಾಚರಣೆ ಹಲವು ದಿನಗಳಿಂದ ನಡೆಯುತ್ತಲಿದ್ದು, ರಕ್ಷಣಾ ಕಾರ್ಯಾಚರಣೆಯಿಂದ ಜನರಿಗೆ ನೆರವು, ಪರಿಹಾರ ನೀಡುವ ಕಡೆಗೆ ಗಮನ ಹರಿಸಬೇಕಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಭೂಕಂಪದಿಂದಾದ ನಷ್ಟದ ಕುರಿತಂತೆ ಮಾತನಾಡಿರುವ ಅವರು, ಪ್ರಪಂಚದಲ್ಲಿಯೇ ನೇಪಾಳವು ಅತಿ ಬಡ ದೇಶವಾಗಿದ್ದು, ಈ ದೇಶಕ್ಕೆ ಪ್ರವಾಸಿ ತಾಣಗಳಿಂದ ಬರುತ್ತಿದ್ದ ಹಣವೇ ಆರ್ಥಿಕ ನೆರವಾಗಿತ್ತು. ಭೂಕಂಪದಿಂದಾಗಿ ಪ್ರವಾಸಿ ತಾಣಗಳು ನಶಿಸಿಹೋಗಿವೆ. 7,300 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಪ್ರವಾಸಿ ತಾಣಗಳ ಮರುನಿರ್ಮಾಣ ಕಷ್ಟಕರವಾಗಿತ್ತು, ಇವುಗಳ ವೆಚ್ಚ ಎಷ್ಟಾಗುತ್ತದೆ ಎಂದು ಈ ವರೆಗೂ ತಿಳಿದುಬಂದಿಲ್ಲ. ಮರುನಿರ್ಮಾಣಕ್ಕೆ ವಿದೇಶಗಳ ನೆರವು ಅಗತ್ಯವಿದೆ. ಈ ಕುರಿತಂತೆ ಸಚಿವರೊಂದಿಗೆ ಸಾಧ್ಯವಾದಷ್ಟು ಬೇಗ ಗಂಭೀರ ಚರ್ಚೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಭಾರತದಲ್ಲಿನ ನೇಪಾಳದ ರಾಯಭಾರಿಯಾಗಿ ದೀಪ್‌ ಕುಮಾರ್‌ ಉಪಾಧ್ಯಾಯ ಅವರು ಮಾತನಾಡಿ, ರಕ್ಷಣಾ ಕಾರ್ಯಾಚರಣೆ ಮುಕ್ತಾಯವಾಗಿದ್ದು, ವಿದೇಶಿ ರಕ್ಷಣಾ ಪಡೆಯನ್ನು ತಮ್ಮ ದೇಶಕ್ಕೆ ಹಿಂದಿರುಗುವಂತೆ ಹೇಳಲಾಗಿತ್ತು. ಈ ಹೇಳಿಕೆ ಭಾರತಕ್ಕೆ ಬಿಟ್ಟು ಇತರೆ ದೇಶಕ್ಕೆ ಹೇಳಲಾಗಿತ್ತು. ಇದನ್ನು ಯಾವುದೇ ದುರುದ್ದೇಶದಿಂದ ಹೇಳಿಲ್ಲ. ಈ ಹೇಳಿಕೆಯನ್ನು ಧನಾತ್ಮಕ ರೀತಿಯಲ್ಲಿ ತೆಗೆದುಕೊಳ್ಳಬೇಕು.

ಸಂಕಷ್ಟದಲ್ಲಿದ್ದ ನೇಪಾಳದ ನೆರವಿಗೆ ಬಂದ ಭಾರತದ ಸಹಾಯ ಹಸ್ತವನ್ನು ನೇಪಾಳ ಸರ್ಕಾರ ಎಂದಿಗೂ ಮರೆಯುವುದಿಲ್ಲ. ನೇಪಾಳದಲ್ಲಿ ರಕ್ಷಣಾ ಕಾರ್ಯಾಚರಣೆ ಇದೀಗ ಮುಕ್ತಾಯವಾಗಿದ್ದು, ಸಂತ್ರಸ್ತರ ನೆರವಿಗೆ ಸರ್ಕಾರ ಮುಂದಾಗಬೇಕಿದೆ ಎಂದು ಹೇಳಿದ್ದಾರೆ.

ಭೂಕಂಪದಿಂದ ಹಾನಿಗೊಳಗಾಗಿದ್ದ ಪ್ರದೇಶಗಳಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳನ್ನು ಕೈಗೊಳ್ಳಲು ನೇಪಾಳ ಸರ್ಕಾರ ವಿಫಲಾಗಿದ್ದು, ಭಾರತೀಯ ಸೇನೆ ಪೂರ್ಣ ಪ್ರಮಾಣದಲ್ಲಿ ರಕ್ಷಣೆ ಮತ್ತು ಪರಿಹಾರ ವಿತರಣೆ ಕಾರ್ಯಾಚರಣೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಿದೆ ಎಂದು ಭಾರತೀಯ ಮಾಧ್ಯಮಗಳು ವರದಿ ಮಾಡಿದ್ದವು. ಈ ವರದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ ತೊಡಗಿದ್ದವಲ್ಲದೇ, ನೇಪಾಳ ಸರ್ಕಾರದ ವಿರುದ್ಧ ಹಲವು ಟೀಕೆಗಳು ವ್ಯಕ್ತವಾಗಿದ್ದವು. ಇದರಿಂದಾಗಿ ನೇಪಾಳ ಸರ್ಕಾರ ವಿದೇಶಿ ಸೇನಾ ಪಡೆಗಳು ತಮ್ಮ ತಮ್ಮ ದೇಶಗಳಿಗೆ ಹೊರಟು ಹೋಗುವಂತೆ ತಾಕೀತು ಮಾಡಿತ್ತು ಎಂದು ಹೇಳಲಾಗುತ್ತಿತ್ತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT