ದೇಶ

ಸಲ್ಮಾನ್ ಮುಸ್ಲಿಂ ಆಗಿದ್ದಕ್ಕೆ ಜಾಮೀನು ಸಿಕ್ತಂತೆ

Mainashree

ನವದೆಹಲಿ: ಸಲ್ಮಾನ್ ಖಾನ್ ಮುಸ್ಲಿಂ ಆಗಿದ್ದರಿಂದ ಬಹುಬೇಗನೇ ಜಾಮೀನು ಸಿಕ್ಕಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ನಾಯಕಿ ಸಾದ್ವಿ ಪ್ರಾಚಿ ಮತ್ತೊಂದು ಬಾರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

2002ರ ಗುದ್ದೋಡು(ಹಿಟ್ಆ್ಯಂಡ್ ರನ್) ಪ್ರಕರಣದಲ್ಲಿ ಸಲ್ಮಾನ್ ಖಾನ್ ಅವರಿಗೆ ಜಾಮೀನು ಸಿಕ್ಕಿದ್ದ ವಿಚಾರಕ್ಕೆ ಸಾದ್ವಿ ಪ್ರಾಚಿ ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಒಂದು ವೇಳೆ ಆತ ಮುಸ್ಲಿಂ ಆಗಿರದಿದ್ದರೆ ಬಡ ಸಂತ್ರಸ್ತನಿಗೆ ನ್ಯಾಯ ಸಿಗುತ್ತಿತ್ತು ಎಂದು ಅವರು ತಿಳಿಸಿದ್ದಾರೆ.

ಇದೇ ವೇಳೆ ಮಾಲೇಗಾಂವ್ ಸ್ಫೋಟ ಪ್ರಕರಣದಲ್ಲಿ ಜೈಲು ಸೇರಿರುವ ಸಾದ್ವಿ ಪ್ರಗ್ನಾ ಸಿಂಗ್ ಅವರನ್ನೂ ಕೂಡಲೇ ಬಿಡುಗಡೆಗೊಳಿಸಬೇಕೆಂದು ಅವರು ಒತ್ತಾಯಿಸಿದ್ದಾರೆ.

ಬೀದಿ ಬದಿ ಮಲಗಿರುವವರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಲಿವುಡ್ ಗಾಯಕ ಅಭಿಜಿತ್ ಅವರನ್ನು ಕೂಡ ಬಂಧಿಸಬೇಕೆಂದು ಆಗ್ರಹಿಸಿದ್ದಾರೆ. ಪದೇ ಪದೆ ವಿವಾದಾತ್ಮಕ ಹೇಳಿಕೆಗಳನ್ನು ನೀಡಿ ಸುದ್ದಿಯಲ್ಲಿದ್ದ ಸಾದ್ವಿ ಪ್ರಾಚಿ ಅವರಿಗೆ ವಿವಾದಿತ ಹೇಳಿಕೆ ನೀಡದಂತೆ ಬಿಜೆಪಿ ಎಚ್ಚರಿಸಿತ್ತು.

SCROLL FOR NEXT