ನೇಪಾಳದಲ್ಲಿ ಭೂಕಂಪಕ್ಕೆ ನೆಲಸಮವಾದ ಕಟ್ಟಡ 
ದೇಶ

2 ವರ್ಷದಲ್ಲಿ ನೇಪಾಳ ಪುನರ್ ನಿರ್ಮಾಣ

ಪ್ರಬಲ ಭೂಕಂಪದಿಂದ ಹೆಚ್ಚು ಕಡಿಮೆ ನಾಶವಾದಂತಾಗಿರುವ ನೇಪಾಳವನ್ನು ಇನ್ನೆರಡು ವರ್ಷಗಳಲ್ಲಿ ಪುನರ್ ನಿರ್ಮಾಣ ಮಾಡುವುದಾಗಿ...

ಕಠ್ಮಂಡು: ಪ್ರಬಲ ಭೂಕಂಪದಿಂದ ಹೆಚ್ಚು ಕಡಿಮೆ ನಾಶವಾದಂತಾಗಿರುವ ನೇಪಾಳವನ್ನು ಇನ್ನೆರಡು ವರ್ಷಗಳಲ್ಲಿ ಪುನರ್ ನಿರ್ಮಾಣ ಮಾಡುವುದಾಗಿ ಅಲ್ಲಿನ ಪ್ರಧಾನಿ ಸುಶಿಲ್ ಕೊಯಿರಾಲ ತಿಳಿಸಿದ್ದಾರೆ.

ದೇಶ ಕಟ್ಟುವ ಕಾರ್ಯಕ್ಕೆ ಸಾಥ್ ನೀಡುವಂತೆ ಸಾರ್ವಜನಿಕರು, ನೆರೆ ದೇಶಗಳು ಮತ್ತು ಪ್ರವಾಸಿಗರಲ್ಲಿ ಅವರು ಮನವಿ ಮಾಡಿದ್ದಾರೆ. 2 ವಾರಗಳ ಹಿಂದೆ ಸಂಭವಿಸಿದ 7.9 ಪ್ರಮಾಣದ ಭೂಕಂಪದಿಂದಾಗಿ ಹಾನಿಗೀಡಾದ ಕಟ್ಟಡಗಳನ್ನು ಪುನಾರಚಿಸಲು ರು.2 ಸಾವಿರ ಕೋಟಿ ಸಂಗ್ರಹ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.

ಧಾರ್ಮಿಕ ಕ್ಷೇತ್ರಗಳು, ಸ್ಮಾರಕಗಳು ಹಾಗೂ ಸಾಂಸ್ಕೃತಿಕ ಪ್ರದೇಶಗಳನ್ನು 5 ವರ್ಷದೊಳಗೆ ನರ್ ನಿರ್ಮಿಸಲಾಗುವುದು ಎಂದು ಕೊಯಿರಾಲಳಿದ್ದಾರೆ. ನೇಪಾಳದ ಯಾವುದೇ ಪ್ರಜೆಯೂ ನೆಲೆ ಇಲ್ಲದೆ ವಾಸಿಸುವಂತೆ ಮಾಡುವುದಿಲ್ಲ, ಜತೆಗೆ ಅಪೌಷ್ಠಿಕತೆ ಕಾಡದಂತೆ ನೋಡಿಕೊಳ್ಳುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಕಚ್‍ನಲ್ಲಿ ಭೂಕಂಪ
ಗುಜರಾತ್‍ನ ಕಚ್ ಜಿಲ್ಲೆಯಲ್ಲಿ ಶನಿವಾರ ಮುಂಜಾನೆ 6.30ರ ಸುಮಾರಿಗೆ 4.3 ಪ್ರಮಾಣದ ಭೂಕಂಪನ ನಡೆದಿದೆ. ಭಾಛೌ ನಗರದ ವಾಯುವ್ಯ ದಿಕ್ಕಿನಿಂದ 22 ಕಿ.ಮೀ. ದೂರದಲ್ಲಿ ಈ ಕಂಪನ ಸಂಭವಿಸಿದೆ. ಇದರ ಬಳಿಕ 7.47ಕ್ಕೆ ಮತ್ತೊಮ್ಮೆ ಭೂಮಿ ಕಂಪಿಸಿರುವುದು ವರದಿಯಾಗಿದ್ದು, ರಿಕ್ಟರ್ ಮಾಪನದಲ್ಲಿ ತೀವ್ರತೆ 2 ಪ್ರಮಾಣದ ಕಂಪನವಾಗಿರುವುದು ದಾಖಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

SCROLL FOR NEXT