ಮದುವೆ ಮೆರವಣಿಗೆ 
ದೇಶ

ಮದುವೆ ಮೆರವಣಿಗೆ ವೇಳೆ ಹೆಲ್ಮೆಟ್ ಧರಿಸಿದ ದಲಿತ ವರ, ಕಲ್ಲು ತೂರಿದ ಗ್ರಾಮಸ್ಥರು

ಮದುವೆ ಮೆರವಣಿಗೆಗೆ ಸಾಮಾನ್ಯವಾಗಿ ಮಾಡಬೇಕಾದ ಎಲ್ಲಾ ಸಿದ್ಧತೆಗಳ ಜೊತೆಗೆ ಕುದುರೆ ಮೇಲೆ ಮೆರವಣಿಗೆ ಹೋಗುತ್ತಿದ್ದ ವರನಿಗೆ ಬಲವಂತವಾಗಿ...

ಮದುವೆ ಮೆರವಣಿಗೆಗೆ ಸಾಮಾನ್ಯವಾಗಿ ಮಾಡಬೇಕಾದ ಎಲ್ಲಾ ಸಿದ್ಧತೆಗಳ ಜೊತೆಗೆ ಕುದುರೆ ಮೇಲೆ ಮೆರವಣಿಗೆ ಹೋಗುತ್ತಿದ್ದ ವರನಿಗೆ ಬಲವಂತವಾಗಿ ಒಂದು ಗಟ್ಟಿಮುಟ್ಟಾದ ಹೆಲ್ಮೆಟ್ ಹಾಕಿಸಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

ವರ ದಲಿತನಾಗಿದ್ದೆ ಇದಕ್ಕೆ ಕಾರಣ. ಈ ಗ್ರಾಮದಲ್ಲಿ ದಲಿತರು ಅದ್ಧೂರಿ ಮದುವೆ ಮೆರವಣಿಗೆ ಅಥವಾ ಕುದುರೆ ಸವಾರಿ ಮಾಡುವಂತಿಲ್ಲ. ಆದರೆ ವರ ಪವನ್ ಮಾಳವೀಯ ತಾನು ದಲಿತನಾಗಿದ್ದರೂ ಗ್ರಾಮಸ್ಥರನ್ನು ಎದುರು ಹಾಕಿಕೊಂಡು ಕುದುರೆ ಮೇಲೆ ಮೆರವಣಿಗೆ ಹೋರಟಿದ್ದ. ಇದು ಮೇಲ್ವರ್ಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಇದನ್ನು ಅರಿತ ವರನ ತಂದೆ ತಮ್ಮ ಮಗನ ಮೇಲೆ ಮೇಲ್ವರ್ಗದ ಜನ ಕಲ್ಲು ತೂರಬಹುದು ಎಂಬ ಭಯದಿಂದ ಮಗನಿಗೆ ಬಲವಂತವಾಗಿ ಹೆಲ್ಮೆಟ್ ಹಾಕಿಸಿದ್ದರು ಎಂದು ವರದಿ ಮಾಡಲಾಗಿದೆ.

ಭಾನುವಾರ ರಾತ್ರಿ ಮಧ್ಯಪ್ರದೇಶದ ರತ್ಲಂ ಜಿಲ್ಲೆಯ ಹಳ್ಳಿಯೊಂದರಲ್ಲಿ ಈ ಘಟನೆ ನಡೆದಿದ್ದು, ಮೆರವಣಿಗೆಯನ್ನು ಅರ್ಧಕ್ಕೆ ತಡೆದ ಮೇಲ್ಜಾತಿ ಪುರುಷರು, ವರನ ಮೇಲೆ ಕಲ್ಲು ತೂರಾಟ ನಡೆಸಿ, ಕುಟುಂಬ ಸದಸ್ಯರ ಮೇಲೂ ದಾಳಿ ಮಾಡಿದ್ದಾರೆ. ಘಟನೆಯಲ್ಲಿ ವರನ ಕುಟುಂಬದ ಹಲವರಿಗೆ ಗಾಯಗಳಾಗಿವೆ.

ಮೆರವಣಿಗೆಯನ್ನು ಕೆಲ ಸಮಯ ಸ್ಥಗಿತಗೊಳಿಸಿ, ಬಳಿಕ ಪೊಲೀಸ್ ರಕ್ಷಣೆಯಲ್ಲಿ ಮುಂದುವರೆಸಲಾಯಿತು. ಘಟನೆ ಸಂಬಂಧ ಪೊಲೀಸರು 30 ಗ್ರಾಮಸ್ಥರನ್ನು ಬಂಧಿಸಿದ್ದು, ಅವರ ವಿರುದ್ಧ ಅಟ್ರೊಸಿಟಿ ಕೇಸ್ ದಾಖಲಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಂವಿಧಾನಿಕ ಕರ್ತವ್ಯಗಳು ಪ್ರಜಾಪ್ರಭುತ್ವದ ಅಡಿಪಾಯ: ದೇಶದ ನಾಗರಿಕರಿಗೆ ಪ್ರಧಾನಿ ಮೋದಿ ಪತ್ರ

ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್​ ನ್ಯೂಸ್​: ಹಳದಿ ಮಾರ್ಗದ ಸಂಚಾರ ಸೋಮವಾರ ಬೆಳಗ್ಗೆ 5 ಗಂಟೆಯಿಂದಲೇ ಶುರು..!

26/11 ಮುಂಬೈ ದಾಳಿಗೆ 17 ವರ್ಷ: ಕರಾಳ ದಿನ ನೆನೆದ ದೇಶದ ಜನತೆ, ಹುತಾತ್ಮರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಸಿಎಂ ಹುದ್ದೆ ಗುದ್ದಾಟ: ಸಿದ್ದರಾಮಯ್ಯ-ಡಿ ಕೆ ಶಿವಕುಮಾರ್ ಗೆ ಹೈಕಮಾಂಡ್ ದೆಹಲಿಗೆ ಬುಲಾವ್ ಸಾಧ್ಯತೆ

ನವೆಂಬರ್ 28ರಂದು ಉಡುಪಿಗೆ ಪ್ರಧಾನಿ ಮೋದಿ: ಬನ್ನಂಜೆಯಿಂದ ಕಲ್ಸಂಕ ಜಂಕ್ಷನ್‌ವರೆಗೆ ರೋಡ್ ಶೋ

SCROLL FOR NEXT