ದೇಶ

ತೆಲಂಗಾಣ: 2 ದಿನದಲ್ಲಿ ಬಿಸಿಗಾಳಿ ಅಬ್ಬರಕ್ಕೆ 30 ಮಂದಿ ಬಲಿ

Vishwanath S

ಹೈದರಾಬಾದ್‌: ಎರಡು ದಿನಗಳಿಂದ ತೆಲಂಗಾಣದಲ್ಲಿ ಉಷ್ಣ ಗಾಳಿ ಅಬ್ಬರಕ್ಕೆ ಇಲ್ಲಿವಯವರೆಗೂ ಒಟ್ಟು 30 ಜನರು ಮೃತಪಟ್ಟಿದ್ದಾರೆ.

ನಲ್ಗೊಂಡ, ನಿಜಾಮಾಬಾದ್‌ ಮತ್ತು ಕರೀಂ ನಗರ ಬಿಸಿಗಾಳಿಯ ಪ್ರತಾಪಕ್ಕೀಡಾಗಿದ್ದು, ಇದು ಹೀಗೆ ಮುಂದುವರೆಯಲಿದ್ದು ಮುಂಬರುವ ದಿನಗಳಲ್ಲಿ ಬಿಸಿ ಗಾಳಿ ಜನರನ್ನು ಮತ್ತಷ್ಟು ಬಾಧಿಸಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಮಾಹಿತಿಗಳ ಪ್ರಕಾರ ಬಿಸಿ ಗಾಳಿಗೆ ಬಲಿಯಾದವರ ಸಂಖ್ಯೆ 30 ಆಗಿದೆ ಎಂದು ಕಂದಾಯ ಕಾರ್ಯದರ್ಶಿ ಬಿ ಆರ್‌ ಮೀಣ ತಿಳಿಸಿದ್ದಾರೆ.

ದಿನದ ಉಷ್ಣತೆಯು ಗರಿಷ್ಠ ಪ್ರಮಾಣದಲ್ಲಿರುವಾಗ ಜನರು ಹೊರಗೆ ಹೋಗ ಕೂಡದೆಂದು ಎಚ್ಚರಿಸಿರುವ ರಾಜ್ಯ ಸರಕಾರ, ಇಂತಹ ವಿಷಮ ಸಂದರ್ಭದಲ್ಲಿ ಜನರು ಮಾಡಬೇಕಾದ್ದು ಮತ್ತು ಮಾಡಬಾರದ್ದು ಯಾವುವು ಎಂಬುದನ್ನು ಪಟ್ಟಿಮಾಡಿ ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಮಾಡುತ್ತಿದೆ.

SCROLL FOR NEXT