ಉಷ್ಣಗಾಳಿ 
ದೇಶ

ಆಂಧ್ರ ಮತ್ತು ತೆಲಂಗಾಣದಲ್ಲಿ ಉಷ್ಣಗಾಳಿಗೆ 153 ಜನರ ಸಾವು

ಆಂದ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕ್ಷಣ ಕ್ಷಣಕ್ಕೂ ಹವಾಮಾನದಲ್ಲಿ ಉಷ್ಣಾಂಶ ಹೆಚ್ಚುತ್ತಿದ್ದು, ಉಭಯ ರಾಜ್ಯಗಳಲ್ಲಿ ಉಷ್ಣಗಾಳಿಗೆ 153 ಜನರು ಮೃತಪಟ್ಟಿದ್ದು...

ಹೈದರಾಬಾದ್: ಆಂದ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕ್ಷಣ ಕ್ಷಣಕ್ಕೂ ಹವಾಮಾನದಲ್ಲಿ ಉಷ್ಣಾಂಶ ಹೆಚ್ಚುತ್ತಿದ್ದು, ಉಭಯ ರಾಜ್ಯಗಳಲ್ಲಿ ಉಷ್ಣಗಾಳಿಗೆ 153 ಜನರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 200 ದಾಟುವ ಸಾಧ್ಯತೆಗಳಿವೆ.

ಬಿಸಿಲಿನ ತಾಪಕ್ಕೆ ತೆಲಂಗಾಣದಲ್ಲಿ 73 ಮಂದಿ ಬಲಿಯಾಗಿದ್ದರೆ, ಆಂಧ್ರಪ್ರದೇಶದಲ್ಲಿ 80 ಮಂದಿ ಸಾವನ್ನಪ್ಪಿದ್ದಾರೆ ಎಂದು ಎರಡು ರಾಜ್ಯಗಳ ಅಧಿಕಾರಿಗಳು ತಿಳಿಸಿದ್ದಾರೆ.

ಬಿಸಿಲ ತಾಪ ತಡೆಯುವ ಸಾಧನ ಉಪಯೋಗಿಸಿ ಜನರು ಹೊರಗಡೆ ತೆರೆಳಬೇಕೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಕಳೆದ ದಿನಗಳಲ್ಲಿ 45 ಡಿಗ್ರಿ ಸೆಲ್ಸಿಯಸ್ ಬಿಸಿಲ ತಾಪ ಇದ್ದಿದ್ದು, ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಬಿಸಿಲ ಝಳಕ್ಕೆ ಸಿಕ್ಕವರು ತೆಲಂಗಾಣ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅಲ್ಲದೇ ಬಿಸಿಲ ತಾಪಕ್ಕೆ ಸಿಲುಕಿದವರಿಗೆ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಿಕೊಳ್ಳುವಂತೆ ಆಂಧ್ರಪ್ರದೇಶ ಸರ್ಕಾರ ಎಲ್ಲಾ ಜಿಲ್ಲೆಯ ಆಸ್ಪತ್ರೆಗಳಿಗೆ ಸೂಚನೆ ರವಾನಿಸಿದೆ.

ಶುಕ್ರವಾರ ನಲಗೊಂದ, ನಿಜಾಮಾಬಾದ್, ಖಮ್ಮನ್ ಮತ್ತು ರಾಮಗುಂಡಂ ನಗರಗಳಲ್ಲಿ ಪಾದರಸ ೪೭ ಡಿಗ್ರೀ ತಲುಪಿದೆ. ಈ ಹಿಂದೆ ದಾಖಲೆ ಉಷ್ಣಾಂಶ ಕಂಡುಬಂದಿದ್ದು ೧೯೮೪ ರಲ್ಲಿ ರಾಮಗುಂಡಂ ಮತ್ತು ೨೦೦೫ರಲ್ಲಿ ನಿಜಾಮಾಬಾದ್ ನಲ್ಲಿ, ೪೭.೩ ಡಿಗ್ರೀ ಸೆಲ್ಸಿಯಸ್.

ಒಳ್ಳೆಯ ವಿಷಯವೆಂದರೆ ಹೈದರಾಬಾದಿನಲ್ಲಿ ಇನ್ನು ದಾಖಲೆ ಉಷ್ಣಾಂಷಕ್ಕೆ (೪೫.೫ ಡಿಗ್ರಿ) ಏರಿಲ್ಲ. ಈ ಅವಳಿ ನಗರಗಳಲ್ಲಿ ಸದ್ಯಕ್ಕೆ ಉಷ್ಣಾಂಶ ೪೩.೬ಕ್ಕೆ ಏರಿದೆ. ಆದರೆ ಉಷ್ಣ ಗಾಳಿ ಮನೆಯಿಂದ ಜನರು ಹೊರಗೆ ಹೆಚ್ಚು ಹೊತ್ತು ಕಳೆಯುವುದನ್ನು ಅಸಾಧ್ಯವಾಗಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT