ದೇಶ

2025 ರ ವೇಳೆಗೆ ಭಾರತಕ್ಕೆ ಕಾಡಲಿದೆ ನೀರಿನ ಅಭಾವ!

2025 ರ ವೇಳೆಗೆ ಭಾರತದಲ್ಲಿ ನೀರಿನ ಅಭಾವ ವಿಪರೀತವಾಗಲಿದೆ. ಇದು ದೇಶದಲ್ಲಿ ಜಲ ವ್ಯಾಪಾರೀಕರಣಕ್ಕೆ ನಾಂದಿ ಹಾಡಲಿದೆ.

ಮುಂಬೈ: 2025 ರ ವೇಳೆಗೆ ಭಾರತದಲ್ಲಿ ನೀರಿನ ಅಭಾವ ವಿಪರೀತವಾಗಲಿದೆ. ಇದು ದೇಶದಲ್ಲಿ ಜಲ ವ್ಯಾಪಾರೀಕರಣಕ್ಕೆ ನಾಂದಿ ಹಾಡಲಿದೆ.

ಎವ್ರಿಥಿಂಗ್ ಎಬೌಟ್ ವಾಟರ್(ಇಎ)ಎಂಬ ಸಂಸ್ಥೆ ನಡೆಸಿರುವ ಅಧ್ಯಯನ ಇಂತಹದೊಂದು ವಿಚಾರವನ್ನು ಬಹಿರಂಗಪಡಿಸಿದೆ. ದೇಶದ ನೀರಾವರಿಗೆ ಬಳಸಲಾಗುತ್ತಿರುವ ಶೇ.70 , ಗೃಹ ಬಳಕೆಗೆ ಬಳಸುವ ಶೇ. 80 ರಷ್ಟು ನೀರಿನ ಮೂಲವಾಗಿರುವ ಅಂತರ್ಜಲ ಮಟ್ಟ ಬರಿದಾಗುತ್ತಿದೆ ಎಂದು ಸಂಸ್ಥೆ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ.

ಅಂತರ್ಜಲ ಮಟ್ಟ ಕುಸಿಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಬೇಡಿಕೆ ಮತ್ತು ಪೂರೈಕೆಯ ನಡುವೆ ಭಾರಿ ಅಂತರ ಉಂಟಾಗಲಿದೆ. ಈ ಹಿನ್ನೆಲೆಯಲ್ಲಿ ನೀರಿನ ಕ್ಷೇತ್ರದಲ್ಲಿ ಬರೋಬ್ಬರಿ 13 ಶತಕೋಟಿ ಡಾಲರ್ ಹೂಡಿಕೆ ಮಾಡಲು ಸಾಗರೋತ್ತರ ಹೂಡಿಕೆದಾರರು ಮುಂದಾಗಿದ್ದಾರೆ ಎಂದೂ ಅಧ್ಯಯನ ವರದಿ ತಿಳಿಸಿದೆ. ಈ ನಿಟ್ಟಿನಲ್ಲಿ ಹೆಜ್ಜೆಯಿಟ್ಟಿರುವ ರಾಷ್ಟ್ರಗಳಲ್ಲಿ ಕೆನಡಾ, ಇಸ್ರೇಲ್, ಜರ್ಮನಿ, ಇಟಲಿ ಅಮೇರಿಕಾ, ಚೀನಾ, ಬೆಲ್ಜಿಯಂ, ಕೂಡಾ ಸೇರಿವೆ. ಒಟ್ಟಾರೆ ಮುಂದಿನ ಮೂರು ವರ್ಷಗಳಲ್ಲಿ ನೀರಿನ ಕ್ಷೇತ್ರಕ್ಕೆ 18  ಸಾವಿರ ಕೋಟಿ ಹರಿದುಬರಲಿದೆ.

ಮಹಾರಾಷ್ಟ್ರವೇ ನೀರಿನ ಹಬ್: ಮಹಾರಾಷ್ಟ್ರ ನೀರಿನ ಕ್ಷೇತ್ರದ ಹಬ್ ಆಗಿ ಪರಿವರ್ತನೆಗೊಳ್ಳುತ್ತಿದೆ ಎಂಬ ಮಾಹಿತಿಯೂ ಇಎ ಸಂಸ್ಥೆ ನಡೆಸಿರುವ ಅಧ್ಯಯನದ ಮೂಲಕ ತಿಳಿದುಬಂದಿದೆ. ಮುಂಬೈ ಪುಣೆಗಳಲ್ಲಿ ಈಗಾಗಲೇ ಸುಮಾರು 12 ಅಂತಾರಾಷ್ಟ್ರೀಯ ಕಂಪನಿಗಳು ವಿನ್ಯಾಸ ಮತ್ತು ಇಂಜಿನಿಯರಿಂಗ್ ಕೇಂದ್ರಗಳನ್ನು ಸ್ಥಾಪಿಸಿವೆ. ಜತೆಗೆ ಈ ರಾಜ್ಯದಲ್ಲಿ ಸದ್ಯ 1200 ಕ್ಕೂ ಹೆಚ್ಚು ಕಂಪನಿಗಳು ನೀರು ಮತ್ತು ತ್ಯಾಜ್ಯ ನೀರು ಸಂಸ್ಕರಣೆಯಲ್ಲಿ ತೊಡಗಿವೆ. ಇದೆ ವೇಳೆ ಕೇಂದ್ರ ಸರ್ಕಾರ ಗಂಗಾ ನದಿ ಸ್ವಚ್ಛತಾ ಯೋಜನೆ ಮೂಲಕ ನೀರಿನ ಕ್ಷೇತ್ರದಲ್ಲಿ ಭಾರಿ ಹೂಡಿಕೆಗೆ ಮುಂದಾಗಿರುವುದರಿಂದ ಸುಮಾರು 10 ಲಕ್ಷ ಉದ್ಯೋಗಾವಕಾಶ ಸೃಷ್ಟಿಯಾಗಬಹುದ್ದು ಎಂದು ಅಂದಾಜಿಸಲಾಗಿದೆ.

ಮುಂದಿನ ಮೂರು ವರ್ಷಗಳಲ್ಲಿ ಸುಮಾರು 30 ಡಿಸ್ಯಾಲಿನೇಶನ್ ಸ್ಥಾವರಗಳು ಸ್ಥಾಪನೆಯಾಗುವ ಸಾಧ್ಯತೆಯಿದೆ. ಇಂತಹ ನೀರಿನ ವೆಚ್ಚವು ಮುಂದಿನ 5  ವರ್ಷಗಳಲ್ಲಿ ಶೇ.20 ಮತ್ತು 2020 ರ ವೇಳೆಗೆ ಶೇ.50 ರಷ್ಟು ಕಡಿಮೆಯಾಗುವ ನಿರೀಕ್ಷೆ ಇದೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT