ನಟ ಅನುಪಮ್ ಖೇರ್ (ಸಂಗ್ರಹ ಚಿತ್ರ) 
ದೇಶ

ಪತ್ರಕರ್ತೆಗೆ ಕ್ಷಮೆಯಾಚಿಸಿದ ನಟ ಅನುಪಮ್ ಖೇರ್

ಅಸಹಿಷ್ಣುತೆ ವಿರೋಧಿ ಚಳುವಳಿಯನ್ನು ವಿರೋಧಿಸಿ ನಟ ಅನುಪಮ್ ಖೇರ್ ನಡೆಸಿದ ಜಾಥಾದಲ್ಲಿ ಪತ್ರಕರ್ತೆಯೊಬ್ಬರನ್ನು ನಿಂದನೆ ಮಾಡಿ, ಕಿರುಕುಳ ನೀಡಿದ ಘಟನೆಯೊಂದು ಭಾನುವಾರ ವರದಿಯಾಗಿದೆ...

ನವದೆಹಲಿ: ಅಸಹಿಷ್ಣುತೆ ವಿರೋಧಿ ಚಳುವಳಿಯನ್ನು ವಿರೋಧಿಸಿ ನಟ ಅನುಪಮ್ ಖೇರ್ ನಡೆಸಿದ ಜಾಥಾದಲ್ಲಿ ಪತ್ರಕರ್ತೆಯೊಬ್ಬರನ್ನು ನಿಂದನೆ ಮಾಡಿ, ಕಿರುಕುಳ ನೀಡಿದ ಘಟನೆಯೊಂದು ಭಾನುವಾರ ವರದಿಯಾಗಿದೆ.

ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆಯನ್ನು ವಿರೋಧಿಸಿ ಬರಹಗಾರರು, ಕಲಾವಿದರು, ವಿಜ್ಞಾನಿಗಳು ಹಾಗೂ ಚಿತ್ರ ನಿರ್ಮಾಪಕರು ನಡೆಸುತ್ತಿರುವ ಪ್ರಶಸ್ತಿ ಹಿಂತಿರುಗಿಸಿ ಚಳುವಳಿಯನ್ನು ವಿರೋಧಿಸಿ ಭಾರತಲ್ಲಿ ಅಸಹಿಷ್ಣುತೆಯಿಲ್ಲ ಎಂಬ ಘೋಷ ವಾಕ್ಯದೊಂದಿಗೆ ಬಾಲಿವುಡ್ ನಟ ಅನುಪಮ್ ಖೇರ್ ಅವರು ಶನಿವಾರ ರಾಷ್ಟ್ರಪತಿ ಭವನದವರೆಗೂ ಕಾಲ್ನಡಿಗೆಯ ಜಾಥಾ ನಡೆಸಿದ್ದರು.

ಜಾಥಾ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಪತ್ರಕರ್ತೆಯೊಬ್ಬರು ಭಾಗವಿಸಿದ್ದರು. ಜಾಥಾ ವೇಳೆ ಪತ್ರಕರ್ತೆ ಅಸಹಿಷ್ಣುತೆ ವಿಷಯದಲ್ಲಿ ಭಾರತೀಯ ಚಿತ್ರರಂಗ ವಿಭಜನೆಗೊಳ್ಳುತ್ತಿದೆ ಎಂದು ವರದಿ ಮಾಡುತ್ತಿರುವುದನ್ನು ಕಂಡ ಕೆಲವರು ಪರ್ತಕರ್ತೆಯನ್ನು ಅಶ್ಲೀಲ ಪದದಿಂದ ನಿಂದಿಸಿದ್ದಾರೆ. ಅಲ್ಲದೆ, ಆಕೆಯ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆಂದು ವರದಿಗಳು ತಿಳಿಸಿವೆ.

ಹಲ್ಲೆಗೆ ಯತ್ನ ಮಾಡುತ್ತಿದ್ದಂತೆ ಮಧ್ಯಪ್ರವೇಶಿಸಿದ ಪೊಲೀಸರು ಯಾವುದೇ ಅನಾಹುತ ನಡೆಯದಂತೆ ತಡೆದಿದ್ದಾರೆಂದು ಪತ್ರಕರ್ತೆ ತನ್ನ ಟ್ವಿಟರ್ ನಲ್ಲಿ ಹೇಳಿಕೊಂಡಿದ್ದಾರೆ.

ಜಾಥಾವೇಳೆ ಪತ್ರಕರ್ತೆಗೆ ಕೆಲವರು ನೀಡಿದ ಕಿರುಕುಳ ಹಾಗೂ ನಿಂದನೆ ಕುರಿತಂತೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ನಟ ಅನುಪಮ್ ಖೇರ್ ಅವರು ಪತ್ರಕರ್ತೆಗೆ ಕ್ಷಮೆಯಾಚಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; ಆ ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಖಡಕ್ ವಾರ್ನಿಂಗ್ ನೀಡಿದ ಇರಾನ್ ಸಂಸತ್ ಸ್ಪೀಕರ್!

ಪಶ್ಚಿಮ ಬಂಗಾಳ: ಇಬ್ಬರಿಗೆ ನಿಪಾ ವೈರಸ್ ಪಾಸಿಟಿವ್, ನರ್ಸ್‌ಗಳ ಸ್ಥಿತಿ ಗಂಭೀರ

ಲೂಟಿಕೋರನ ಭಯವೇ? ಖರ್ಗೆಯವರೇ, ಭಿಕ್ಷೆ ಬೇಡುವ 'ದಯನೀಯ ಸ್ಥಿತಿ' ಬರಬಾರದಿತ್ತು! ಜೆಡಿಎಸ್ ಟಾಂಗ್

SCROLL FOR NEXT