ಪಟನಾ: ಬಿಹಾರದಲ್ಲಿ ಮತ ಎಣಿಕೆ ಆರಂಭವಾದ ಹೊತ್ತಲ್ಲಿ ಬಿಜೆಪಿ ಮುನ್ನಡೆ ಸಾಧಿಸಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿಯನ್ನೂ ಸಿಡಿಸಿದರು. ಆದರೆ ಸ್ವಲ್ಪ ಹೊತ್ತಿನಲ್ಲಿ ಫಲಿತಾಂಶ ಏರುಪೇರಾಯಿತು. ಮುನ್ನಡೆ ಸಾಧಿಸಿದ್ದ ಬಿಜೆಪಿ ಹಿನ್ನೆಡೆ ಎಂಬ ಸುದ್ದಿ ಕೇಳಿದೊಡನೆ ಕಾರ್ಯಕರ್ತರು ಕಕ್ಕಾಬಿಕ್ಕಿ.
ಹೇಗೋ ಪಟಾಕಿ ಸಿಡಿಸಿದ್ದಾಗಿದೆಯಲ್ಲಾ..ಇನ್ನೇನು ಮಾಡಲಿ?
ನಾವು ಪಟಾಕಿ ಸಿಡಿಸಿದ್ದು ಚುನಾವಣೆ ಫಲಿತಾಂಶ ನೋಡಿಯಲ್ಲ. ಎಲ್ ಕೆ ಅಡ್ವಾಣಿಯವರ ಹುಟ್ಟುಹಬ್ಬ ಆಚರಣೆಗೆ ಎಂದು ಹೇಳುವ ಮೂಲಕ ಕಾರ್ಯಕರ್ತರು ನುಣುಚಿಕೊಂಡರು.