ಮಹಮ್ಮದ್ ಅಕ್ಲಾಖ್‌ನ ಪುತ್ರ ಸರ್‌ತಾಜ್ 
ದೇಶ

ಬಿಹಾರ ಫಲಿತಾಂಶವು ನನ್ನಪ್ಪನಿಗೆ ಸಲ್ಲಿಸಿದ ಶ್ರದ್ಧಾಂಜಲಿ: ಅಕ್ಲಾಖ್ ಪುತ್ರ

ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಮೈತ್ರಿಯ ಗೆಲುವು ನನ್ನಪ್ಪನಿಗೆ ಸಲ್ಲಿಸಿದ ಶ್ರದ್ಧಾಂಜಲಿ ಎಂದು ದಾದ್ರಿಯಲ್ಲಿ ಹತ್ಯೆಗೀಡಾದ...

ಬಿಸಾಡಾ (ದಾದ್ರಿ): ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಮಹಾಮೈತ್ರಿಯ ಗೆಲುವು ನನ್ನಪ್ಪನಿಗೆ ಸಲ್ಲಿಸಿದ ಶ್ರದ್ಧಾಂಜಲಿ ಎಂದು ದಾದ್ರಿಯಲ್ಲಿ ಹತ್ಯೆಗೀಡಾದ ಮಹಮ್ಮದ್ ಅಕ್ಲಾಖ್‌ನ ಪುತ್ರ ಸರ್‌ತಾಜ್ ಹೇಳಿದ್ದಾರೆ.
ಗೋಮಾಂಸ ಭಕ್ಷಣೆ ಮಾಡಿದ್ದಾರೆ ಎಂಬ ಆರೋಪದ ಮೇರೆಗೆ ಉತ್ತರಪ್ರದೇಶದ ದಾದ್ರಿಯಲ್ಲಿ  ಅಕ್ಲಾಕ್ ನ್ನು ಮನೆಯಿಂದ ಹೊರಗೆಳೆದು ಕೆಲ ಜನರ ಗುಂಪು ಹೊಡೆದು ಸಾಯಿಸಿತ್ತು. ಆ ಮೇಲೆ ಈ ಘಟನೆಯ ಬಗ್ಗೆ ತನಿಖೆ ನಡೆಸಿದಾಗ ಅಕ್ಲಾಕ್ ಮನೆಯಲ್ಲಿ ಗೋಮಾಂಸವಿರಲಿಲ್ಲ ಅಲ್ಲಿದ್ದದ್ದು ಮೇಕೆ ಮಾಂಸ ಎಂದು ತಿಳಿದು ಬಂದಿತ್ತು.
ವಾಯುಸೇನೆಯಲ್ಲಿ ಕಾರ್ಪರಲ್ ಆಫೀಸರ್ ಆಗಿದ್ದಾನೆ ಅಕ್ಲಾಕ್ ನ ಹಿರಿಯ ಮಗ ಸರ್‌ತಾಜ್.
ಹಗೆತನದ ರಾಜಕೀಯಕ್ಕೆ ದೇಶದಲ್ಲಿ ಸ್ಥಾನವಿಲ್ಲ ಎಂಬುದು ಗೊತ್ತಾಯ್ತು.  ಬಿಹಾರ ಚುನಾವಣಾ ಫಲಿತಾಂಶ ನನ್ನ ಅಪ್ಪನಿಗೆ ಸಲ್ಲಿಸಿದ ಶ್ರದ್ಧಾಂಜಲಿ. ಈ ಗೆಲವು ಜಾತಿ ವಿರೋಧಿ, ಧರ್ಮವಿರೋಧದ ವಿರುದ್ಧ ಸಿಕ್ಕ ಗೆಲುವು. ಧರ್ಮಗಳಲ್ಲಿ ದ್ವೇಷ ಹರಡಿ ಹೋರಾಟ ಮಾಡಿದುದರಲ್ಲಿ ಏನೂ ಪ್ರಯೋಜನವಿಲ್ಲ, ಜನರ ಮನಸ್ಸುಗಳನ್ನು ಅರ್ಥ ಮಾಡಿಕೊಳ್ಳಬೇಕು. ಅಧಿಕಾರಕ್ಕೇರಿದ ನಂತರ ದೇಶವನ್ನು ವಿಭಜಿಸುವ ಕೆಲಸ ಮಾಡಬೇಡಿ, ಇದು ಎಲ್ಲ ರಾಜಕಾರಣಿಗಳಲ್ಲಿ ನಾನು ಮಾಡುವ ವಿನಂತಿ ಎಂದು ಸರ್‌ತಾಜ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT