ಸಾಂದರ್ಭಿಕ ಚಿತ್ರ 
ದೇಶ

ಪೊಲೀಸ್ ಎನ್ ಕೌಂಟರ್ ಗೆ ನಾಲ್ಕು ನಕ್ಸಲೀಯರು ಬಲಿ

ಪೊಲೀಸರ ಜೊತೆ ನಡೆದ ಭೀಕರ ಗುಂಡಿನ ಘರ್ಷಣೆಯಲ್ಲಿ ಕಮಾಂಡರ್ ಶ್ರೇಣಿಯ ನಕ್ಸಲ್ ಸೇರಿದಂತೆ ನಾಲ್ವರು ಕೆಂಪು ಉಗ್ರರು ಛತ್ತೀಸ್​ಗಢದ ಬಿಜಾಪುರ ...

ಛತ್ತೀಸ್ ಘಡ: ಪೊಲೀಸರ ಜೊತೆ ನಡೆದ ಭೀಕರ ಗುಂಡಿನ ಘರ್ಷಣೆಯಲ್ಲಿ  ಕಮಾಂಡರ್ ಶ್ರೇಣಿಯ ನಕ್ಸಲ್ ಸೇರಿದಂತೆ ನಾಲ್ವರು ಕೆಂಪು ಉಗ್ರರು ಛತ್ತೀಸ್​ಗಢದ ಬಿಜಾಪುರ ಜಿಲ್ಲೆಯಲ್ಲಿ ಶುಕ್ರವಾರ ಸಾವನ್ನಪ್ಪಿದ್ದಾರೆ.

ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ತಂಡವೊಂದು ಇಂದು ಬೆಳಗ್ಗೆ  ಕಾರ್ಯಾಚರಣೆ ನಡೆಸಿತು. ಮಿರ್ತೂರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲೀಯರ ಚಲನವಲನದ ಸುಳಿವು ಆಧರಿಸಿ ಪೊಲೀಸ್ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿತು ಎಂದು ಬಸ್ತಾರ್ ವಲಯದ ಐಜಿಪಿ ಎಸ್​ಆರ್​ಪಿ ಕಲ್ಲೂರಿ ತಿಳಿಸಿದ್ದಾರೆ.

ಛತ್ತೀಸ್ ಗಡದಿಂದ 450 ಕಿಮೀ ದೂರದ ಮಿರ್ತೂರ್ ಪ್ರದೇಶದಲ್ಲಿ ನಡೆದ ಕಾರ್ಯಾಚರಣೆಗೆ 55 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹಲ್ಲೂರ್ ಮತ್ತು ಹಕ್ವಾ ಗ್ರಾಮಗಳ ನಡುವಣ ಅರಣ್ಯ ಪ್ರದೇಶವನ್ನು ಪೊಲೀಸರು ಸುತ್ತುವರಿದಾಗ ಶಸ್ತ್ರಸಜ್ಜಿತ ನಕ್ಸಲೀಯರು ಮನಬಂದಂತೆ ಗುಂಡು ಹಾರಿಸಿದರು. ಇದಕ್ಕೆ ಪ್ರತಿಯಾಗಿ ಪೊಲೀಸರು ಕೂಡ ಗುಂಡು ಹಾರಿಸಿದ್ದಾರೆ. ಸುಮಾರು 1 ಗಂಟೆ ಕಾಲ ನಡೆದ ಗುಂಡಿನ ಚಕಮಕಿಯಲ್ಲಿ ನಾಲ್ವರು ನಕ್ಸಲರು ಸಾವನ್ನಪ್ಪಿದ್ದಾರೆ.  

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಗಾಂಧಿ ಜಯಂತಿ 2025: ರಾಜ್‌ಘಾಟ್‌ನಲ್ಲಿ ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಪುಷ್ಪ ನಮನ

ವಸ್ತುಸ್ಥಿತಿಯ ಬಗ್ಗೆ ಅರಿವಿಲ್ಲದೇ ಮಾತನಾಡುವ ವಿಪಕ್ಷಗಳ ಭವಿಷ್ಯ ನಿಜವಾಗದು: ಸಿಎಂ ಸಿದ್ದರಾಮಯ್ಯ

RSS ಶತಮಾನೋತ್ಸವ: ಈ ಅದ್ಭುತ ಪಯಣ ಭಾರತದ ದಿಕ್ಕನ್ನೇ ಬದಲಾಯಿಸಿದೆ; BJP

ದ್ವೇಷ, ಹಿಂಸೆ, ಅನ್ಯಾಯವೆಂಬ ಅಂಧಕಾರ ಆವರಿಸಿದಂತೆಲ್ಲಾ ಅದರಿಂದ ಹೊರಬರಲು ಮತ್ತೆ ಮತ್ತೆ ನೆನಪಾಗುವುದು ಬಾಪು: ಸಿಎಂ ಸಿದ್ದರಾಮಯ್ಯ

Demographic manipulation: ಒಳನುಸುಳುವಿಕೆಗಿಂತ ಸಾಮಾಜಿಕ ಸಾಮರಸ್ಯಕ್ಕೆ ಇದೇ 'ದೊಡ್ಡ ಅಪಾಯ'- ಪ್ರಧಾನಿ ಮೋದಿ

SCROLL FOR NEXT