ದಲೈ ಲಾಮಾ 
ದೇಶ

ಹಿಂದೂಗಳು ಶಾಂತಿ ಬಯಸುತ್ತಾರೆ ಎಂಬುದು ಬಿಹಾರ ಚುನಾವಣೆಯಿಂದ ಸಾಬೀತು: ದಲೈಲಾಮಾ

ಭಾರತ ಶಾಂತಿಪ್ರಿಯ ದೇಶ, ಭಾರತೀಯರು ಅಹಿಂಸಾ ತತ್ವದಲ್ಲಿ ನಂಬಿಕೆ ಇರಿಸಿದ್ದಾರೆ ಎಂಬುದು ಬಿಹಾರ ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ ....

ಜಲಂಧರ್ :ಭಾರತ ಶಾಂತಿಪ್ರಿಯ ದೇಶ, ಭಾರತೀಯರು ಅಹಿಂಸಾ ತತ್ವದಲ್ಲಿ ನಂಬಿಕೆ ಇರಿಸಿದ್ದಾರೆ ಎಂಬುದು ಬಿಹಾರ ಚುನಾವಣಾ ಫಲಿತಾಂಶದಿಂದ ಸಾಬೀತಾಗಿದೆ ಎಂದು ಟಿಬೆಟ್ ಧರ್ಮಗುರು ದಲೈಲಾಮಾ ಹೇಳಿದ್ದಾರೆ.

ಭಾರತ ಪ್ರಾಚೀನ ಕಾಲದಿಂದಲೂ ಸಂಪ್ರದಾಯ, ಶಾಂತಿ, ಅನ್ಯೋನ್ಯತೆಗೆ ಹೆಸರಾಗಿರುವ ದೇಶ ಎಂದ ಅವರು ಧಾರ್ಮಿಕ ಸಹಿಷ್ಣುತೆ ಎಂದರೆ ಕೇವಲ ಧರ್ಮಕ್ಕೆ ಮಾತ್ರ ಗೌರವ ಕೊಡದುವುದಲ್ಲ, ವಿವಿಧ ಧರ್ಮಗಳ ಜನತೆಗೆ ಸಮಾನವಾದ ಗೌರವ ತೋರುವುದಾಗಿದೆ ಎಂದು ದಲೈ ಲಾಮಾ ಹೇಳಿದ್ದಾರೆ.

ಭಾರತ ಗುರುವಿನ ಸ್ಥಾನದಲ್ಲಿದೆ. ಎಲ್ಲಾ ಬೌದ್ಧರು ಭಾರತದ ಶಿಷ್ಯರು ಎಂದು ಹೇಳಿದ್ದಾರೆ.  ಇನ್ನು ಭಯತ್ಪಾದಕತೆ ಬಗ್ಗೆ ಮಾತನಾಡಿದ ದಲೈ ಲಾಮಾ ಮೊದಲು ದೇಶದಲ್ಲಿ ನಾವು ಶಾಂತಿಯಿಂದ, ಸಹಬಾಳ್ವೆಯಿಂದ ಬಾಳುವಂತ ವಾತಾವರಣ ನಿರ್ಮಿಸಬೇಕು. ಧಾರ್ಮಿಕ ಸಹಿಷ್ಣುತೆ ಎಂಬುದನ್ನು ಮನೆಯಿಂದಲೇ ಆರಂಭಿಸಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಪ್ರವಾಹಕ್ಕೆ ಕಲ್ಯಾಣ ಕರ್ನಾಟಕ ತತ್ತರ: ವೈಮಾನಿಕ ಸಮೀಕ್ಷೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದ ಸಿಎಂ

ಜಿಲ್ಲಾ ಉಸ್ತುವಾರಿ ಸಚಿವರನ್ನು ಎಸಿ ಕೋಣೆಯಿಂದ ಹೊರ ಹಾಕಿ, ನೆರೆ ಪೀಡಿತ ಪ್ರದೇಶಕ್ಕೆ ಭೇಟಿ ನೀಡುವಂತೆ ಮಾಡಿ: ಸಿಎಂಗೆ ವಿಜಯೇಂದ್ರ ಆಗ್ರಹ

ಕರೂರ್ ಕಾಲ್ತುಳಿತದ ಬಗ್ಗೆ ವದಂತಿ: ಯೂಟ್ಯೂಬರ್ ಬಂಧನ; ಟಿವಿಕೆ ಕಾರ್ಯಕರ್ತರ ವಿರುದ್ಧ ಕೇಸ್

H1B ವೀಸಾ ಪ್ರಕ್ರಿಯೆಯಲ್ಲಿ ಗಮನಾರ್ಹ ಬದಲಾವಣೆಯಾಗುತ್ತದೆ: ಅಮೆರಿಕ ವಾಣಿಜ್ಯ ಕಾರ್ಯದರ್ಶಿ ಲುಟ್ನಿಕ್

ರಾಹುಲ್ ಗಾಂಧಿಗೆ ಜೀವ ಬೆದರಿಕೆ: ಬಿಜೆಪಿ ಕೊಲೆಗಡುಕ ಸಂಸ್ಕೃತಿ ಮುಖವಾಡಕ್ಕೆ ಹಿಡಿದ ಕೈಗನ್ನಡಿ; ಬಿ.ಕೆ ಹರಿಪ್ರಸಾದ್‌

SCROLL FOR NEXT