ಮಗಳು ವಿಧೀ ಖನ್ನಾ ಜೊತೆ ಇಂದ್ರಾಣಿ ಮುಖರ್ಜಿ (ಸಂಗ್ರಹ ಚಿತ್ರ) 
ದೇಶ

ಸಾವಿಗೂ ಮುನ್ನ ಶೀನಾಗೆ ಎಚ್ಚರಿಕೆ ಸಂದೇಶ ಕಳುಹಿಸಿದ್ದ ಇಂದ್ರಾಣಿ ಮಗಳು

ಶೀನಾ ಬೋರಾ ಕೊಲೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸಾವಿಗೂ ಮುನ್ನ ಇಂದ್ರಾಣಿ ಮುಖರ್ಜಿ ಮಗಳು...

ಮುಂಬೈ: ಶೀನಾ ಬೋರಾ ಕೊಲೆ ಪ್ರಕರಣ ಬೆಳಕಿಗೆ ಬಂದಾಗಿನಿಂದ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಸಾವಿಗೂ ಮುನ್ನ ಇಂದ್ರಾಣಿ ಮುಖರ್ಜಿ ಮಗಳು ಶೀನಾಗೆ ಎಚ್ಚರಿಕೆಯ ಸಂದೇಶವೊಂದನ್ನು ರವಾನಿಸಿದ್ದಳು ಎಂದು ಶನಿವಾರ ತಿಳಿದುಬಂದಿದೆ.

ಈ ಕುರಿತ ಮಾಹಿತಿಯು ಚಾರ್ಜ್ ಶೀಟ್ ನಲ್ಲಿ ದಾಖಲಾಗಿದ್ದು, ಚಾರ್ಜ್ ಶೀಟ್ ನಲ್ಲಿ ದಾಖಲಾಗಿರುವ ಮಾಹಿತಿ ಪ್ರಕಾರ ಶೀನಾ ಬೋರಾ ಸಾಯುವುದಕ್ಕೂ ಮುನ್ನ ಇಂದ್ರಾಣಿ ಮುಖರ್ಜಿ ಮಾಜಿ ಪತಿ ಸಂಜೀವ್ ಖನ್ನಾ ಅವರ ಮಗಳಾದ ವಿಧೀ ಖನ್ನಾ ಶೀನಾ ಮೊಬೈಲ್ ಗೆ ಸಂದೇಶವೊಂದನ್ನು ಕಳುಹಿಸಿದ್ದಳು ಎಂದು ತಿಳಿದುಬಂದಿದೆ. ಸಂದೇಶದಲ್ಲಿ ಶೀನಾ ಈ ವಿಚಾರ ನಮ್ಮಿಬ್ಬರ ನಡುವೆಯೇ ಇರಲಿ. ನೀನು ಮತ್ತು ರಾಹುಲ್ ಇಬ್ಬರು ಹುಷಾರಾಗಿ ಇರಿ. ನಿಮ್ಮಿಬ್ಬರಿಂದ ಅಮ್ಮ (ಇಂದ್ರಾಣಿ) ತುಂಬಾ ತಲೆಕೆಡಿಸಿಕೊಂಡಿದ್ದಾರೆ. ನಿಮ್ಮಿಬ್ಬರ ನಡುವೆ ಅಡ್ಡವಾಗುವ ತೊಂದರೆಗಳು ಬರಬಹುದು. ಹೀಗಾಗಿ ನಿಮಗೆ ಎಚ್ಚರಿಕೆಯಿಂದಿರುವಂತೆ ಎಚ್ಚರಿಕೆ ನೀಡುತ್ತಿದ್ದೇನೆ.

ಈ ಬಗ್ಗೆ ನನಗೆ ಏನನ್ನು ಹೇಳಬೇಡ...ವಾಸ್ತವದಲ್ಲಿ ನಾನು ಈಗಾಗಲೇ ಸತ್ತುಹೋಗಿದ್ದೇನೆ. ಒಂದು ವೇಳೆ ನಾನು ಸತ್ತಿಲ್ಲ ಎಂದರೂ ಅಮ್ಮ (ಇಂದ್ರಾಣಿ) ನೋವಾಗುವ ಕೆಟ್ಟ ಕೆಲಸವನ್ನು ಮಾಡುತ್ತಾರೆ. ನನ್ನನ್ನು ನಂಬು ನನಗೆ ನಿನ್ನ ಒಪ್ಪಿಗೆ ಬೇಕಿದೆ...ಅಮ್ಮ (ಇಂದ್ರಾಣಿ)ಳಿಗೆ ಸಂಬಂಧವನ್ನು ಹಾಳು ಮಾಡಿಕೊಳ್ಳುವುದು ಇಷ್ಟವಿಲ್ಲ. ಹೀಗಾಗಿ ಅವರ ಸಂಬಂಧ ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಈ ಪ್ರಯತ್ನದಲ್ಲಿ ಯಾರೇ ಅಡ್ಡ ಬಂದರೂ ಅವರನ್ನು ದಾರಿಯಿಂದ ಕಿತ್ತುಹಾಕಲು ತಯಾರಿದ್ದಾರೆ ಎಂದು ವಿಧೀ ಸಂದೇಶದಲ್ಲಿ ಶೀನಾಗೆ ಹೇಳಿದ್ದಾಳೆಂದು ಚಾರ್ಜ್ ಶೀಟ್ ನಲ್ಲಿ ದಾಖಲಿಸಲಾಗಿದೆ.

ಇದಲ್ಲದೇ, ಹತ್ಯೆಗೆ ಪ್ರಮುಖ ಕಾರಣ ಪೀಟರ್ ಮುಖರ್ಜಿಯವರೇ ಎಂದು ಹೇಳಲಾಗುತ್ತಿದ್ದು,  ಶೀನಾ ಮತ್ತು ರಾಹುಲ್ ಇಬ್ಬರು ವಿವಾಹವಾದರೆ ಎಲ್ಲಿ ಆಸ್ತಿ ಶೀನಾ ಪಾಲಾಗುತ್ತದೋ ಎಂಬ ಭಯದಲ್ಲಿ ಈ ಹತ್ಯೆ ನಡೆದಿದೆ ಎಂದು ಹೇಳಲಾಗುತ್ತಿದೆ.

ಶೀನಾ ಬೊರಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆಯಷ್ಟೇ ಇಂದ್ರಾಣಿಯವರ ಪತಿ ಪೀಟರ್ ಮುಖರ್ಜಿಯವರನ್ನು ಅಧಿಕಾರಿಗಳು ಬಂಧನಕ್ಕೊಳಪಡಿಸಲಾಗಿತ್ತು. ಅಲ್ಲದೇ, ಹತ್ಯೆಗೆ ಸಂಬಂಧಿಸಿದಂತೆ ಇಂದ್ರಾಣಿ ಮುಖರ್ಜಿ ಹಾಗೂ ಆಕೆಯ ಮಾಜಿ ಕಾರು ಚಾಲಕ ಶ್ಯಾಮ್ವಾರ್ ರೈ, ಸಂಜೀವ್ ಖನ್ನಾ ವಿರುದ್ಧ ಸಿಬಿಐ ಅಧಿಕಾರಿಗಳು ಚಾರ್ಜ್ ಶೀಟ್ ದಾಖಲಿಸಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT